<p><strong>ಬಾಗಲಕೋಟೆ:</strong> ಜಿಲ್ಲಾಡಳಿತದಿಂದ ಇಲ್ಲಿನ ನವನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ನಾಡ ಹಬ್ಬದ ಸಂಭ್ರಮಕ್ಕೆ ಇಂಬು ನೀಡಿದರು.</p>.<p>ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಹಾಗೂ ಕನ್ನಡ ನಾಡು-ನುಡಿ ಕಟ್ಟಿ ಬೆಳೆಸಲು ಶ್ರಮಿಸಿದ ಮಹನೀಯರನ್ನು ಸ್ಮರಿಸಿದರು.</p>.<p>ಕರ್ನಾಟಕದಲ್ಲಿ ಕನ್ನಡದ ಅಸ್ಮಿತೆಯ ಹೊರತಾಗಿ ಬೇರೆ ಯಾವುದೇ ಸಂಗತಿಗಳು ನಮ್ಮ ಸರ್ಕಾರದ ಆದ್ಯತೆಗಳಲ್ಲ ಎಂದು ಸ್ಪಷ್ಟಪಡಿಸಿದ ಅವರು,<br />ಈ ಬಾರಿ ರಾಜ್ಯೋತ್ಸವದ ಅಂಗವಾಗಿ ಅ.28ರಂದು ರಾಜ್ಯದಾದ್ಯಂತ ಕನ್ನಡ' ಗೀತೆಗಳ ಗಾಯನ ಹಮ್ಮಿಕೊಂಡಿದ್ದನ್ನು ಉಲ್ಲೇಖಿಸಿದರು. </p>.<p>22 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ:</p>.<p>ಶಿಕ್ಷಣ, ಸಾಹಿತ್ಯ, ನೃತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜಸೇವೆ, ಜಾನಪದ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 22 ಮಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಜಿಲ್ಲಾ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದರು.</p>.<p><strong>ಸನ್ಮಾನಿತರ ವಿವರ ಇಂತಿದೆ: </strong>ನಾವಲಗಿಯ ಜೀವಪ್ಪ ಬಡಿಗೇರ, ಅಮೀನಗಡದ ಬಸವರಾಜ ಭಜಂತ್ರಿ, ಮುಗಳೊಳ್ಳಿಯ ಹನಮಂತ ಭಜಂತ್ರಿ, ಹುನಗುಂದದ ಶಿವಪುತ್ರಪ್ಪ ತಾರಿವಾಳ, ಅಂಕಲಗಿಯ ಲಕ್ಷ್ಮಣ ಮಾದರ, ಅಂಬ್ಲಿಕೊಪ್ಪದ ಮುಪ್ಪನಗೌಡ ಗೌಡರ, ಇಳಕಲ್ ನ ಎನ್.ಎಸ್.ಸನ್ನೂರ, ಬನಹಟ್ಟಿಯ ಜಯಶ್ರೀ ಬನಹಟ್ಟಿ, ಲೋಕಾಪುರದ ಹಯಾತ್ ಸಾಬ್ ಮದರಖಾನ, ಗುಳೇದಗುಡ್ಡದ ಮಹಾದೇವ ಜಗತಾಪ, ಕಲಾದಗಿಯ ಹನಮಂತ ತಳವಾರ, ವಜ್ಜಲದ ಸಿದ್ದಪ್ಪ ಮಾದರ, ಬಾದಾಮಿಯ ಡಾ.ಶಿಲಾಕಾಂತ ಪತ್ತಾರ, ಹುನ್ನೂರಿನ ವಿಜಯಕುಮಾರ ಪವಾರ, ಲೋಕಾಪುರದ ಗುಣಾಕರ ಶೇಖರ ಶೆಟ್ಟಿ, ಬಾಗಲಕೋಟೆಯ ಆರ್.ಡಿ.ಬಾಬು, ಇಳಕಲ್ ನ ಅಶೋಕ ಶ್ಯಾವಿ, ನವನಗರದ ಲಕ್ಷ್ಮೀ ಗೌಡರ, ಮುಧೋಳದ ರತ್ನಾಕರ ಶೆಟ್ಟಿ, ಕಲಾದಗಿಯ ರಾಘವೇಂದ್ರ ಕಲಾದಗಿ, ಬೀಳಗಿಯ ತಯಾಮಖಾನ ಇನಾಂದಾರ, ಬಾಗಲಕೋಟೆಯ ನಿಂಗರಾಜ ದೊಡ್ಡಮಬ್ರುಮಕರ.</p>.<p><strong>ಗಮನ ಸೆಳೆದ ಕವಾಯತು:</strong> ಸಚಿವ ಕತ್ತಿ ಅವರು ಪರೇಡ್ ವೀಕ್ಷಣೆ ವೇಳೆ ಪೊಲೀಸ್ ಬ್ಯಾಂಡ್ ಸಿಬ್ಬಂದಿ ಕನ್ನಡದ ಹಾಡುಗಳ ನುಡಿಸಿದರು. ಪಥಸಂಚನ ಅನುಮತಿ, ನಿರ್ಗಮನದ ವೇಳೆ ಸಿಬ್ಬಂದಿಗೆ ಕನ್ನಡದಲ್ಲಿ ಸೂಚನೆ, ನಿರ್ದೇಶನ ನೀಡಲಾಯಿತು.</p>.<p>ಶಾಸಕ ವೀರಣ್ಣ ಚರಂತಿಮಠ, ಸಂಸದ ಪಿ.ಸಿ.ಗದ್ದಿಗೌಡರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಸಿಇಒ ಟಿ.ಭೂಬಾಲನ್, ಎಸ್ಪಿ ಲೋಕೇಶ ಜಗಲಾಸರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಜಿಲ್ಲಾಡಳಿತದಿಂದ ಇಲ್ಲಿನ ನವನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ನಾಡ ಹಬ್ಬದ ಸಂಭ್ರಮಕ್ಕೆ ಇಂಬು ನೀಡಿದರು.</p>.<p>ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಹಾಗೂ ಕನ್ನಡ ನಾಡು-ನುಡಿ ಕಟ್ಟಿ ಬೆಳೆಸಲು ಶ್ರಮಿಸಿದ ಮಹನೀಯರನ್ನು ಸ್ಮರಿಸಿದರು.</p>.<p>ಕರ್ನಾಟಕದಲ್ಲಿ ಕನ್ನಡದ ಅಸ್ಮಿತೆಯ ಹೊರತಾಗಿ ಬೇರೆ ಯಾವುದೇ ಸಂಗತಿಗಳು ನಮ್ಮ ಸರ್ಕಾರದ ಆದ್ಯತೆಗಳಲ್ಲ ಎಂದು ಸ್ಪಷ್ಟಪಡಿಸಿದ ಅವರು,<br />ಈ ಬಾರಿ ರಾಜ್ಯೋತ್ಸವದ ಅಂಗವಾಗಿ ಅ.28ರಂದು ರಾಜ್ಯದಾದ್ಯಂತ ಕನ್ನಡ' ಗೀತೆಗಳ ಗಾಯನ ಹಮ್ಮಿಕೊಂಡಿದ್ದನ್ನು ಉಲ್ಲೇಖಿಸಿದರು. </p>.<p>22 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ:</p>.<p>ಶಿಕ್ಷಣ, ಸಾಹಿತ್ಯ, ನೃತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜಸೇವೆ, ಜಾನಪದ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 22 ಮಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಜಿಲ್ಲಾ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದರು.</p>.<p><strong>ಸನ್ಮಾನಿತರ ವಿವರ ಇಂತಿದೆ: </strong>ನಾವಲಗಿಯ ಜೀವಪ್ಪ ಬಡಿಗೇರ, ಅಮೀನಗಡದ ಬಸವರಾಜ ಭಜಂತ್ರಿ, ಮುಗಳೊಳ್ಳಿಯ ಹನಮಂತ ಭಜಂತ್ರಿ, ಹುನಗುಂದದ ಶಿವಪುತ್ರಪ್ಪ ತಾರಿವಾಳ, ಅಂಕಲಗಿಯ ಲಕ್ಷ್ಮಣ ಮಾದರ, ಅಂಬ್ಲಿಕೊಪ್ಪದ ಮುಪ್ಪನಗೌಡ ಗೌಡರ, ಇಳಕಲ್ ನ ಎನ್.ಎಸ್.ಸನ್ನೂರ, ಬನಹಟ್ಟಿಯ ಜಯಶ್ರೀ ಬನಹಟ್ಟಿ, ಲೋಕಾಪುರದ ಹಯಾತ್ ಸಾಬ್ ಮದರಖಾನ, ಗುಳೇದಗುಡ್ಡದ ಮಹಾದೇವ ಜಗತಾಪ, ಕಲಾದಗಿಯ ಹನಮಂತ ತಳವಾರ, ವಜ್ಜಲದ ಸಿದ್ದಪ್ಪ ಮಾದರ, ಬಾದಾಮಿಯ ಡಾ.ಶಿಲಾಕಾಂತ ಪತ್ತಾರ, ಹುನ್ನೂರಿನ ವಿಜಯಕುಮಾರ ಪವಾರ, ಲೋಕಾಪುರದ ಗುಣಾಕರ ಶೇಖರ ಶೆಟ್ಟಿ, ಬಾಗಲಕೋಟೆಯ ಆರ್.ಡಿ.ಬಾಬು, ಇಳಕಲ್ ನ ಅಶೋಕ ಶ್ಯಾವಿ, ನವನಗರದ ಲಕ್ಷ್ಮೀ ಗೌಡರ, ಮುಧೋಳದ ರತ್ನಾಕರ ಶೆಟ್ಟಿ, ಕಲಾದಗಿಯ ರಾಘವೇಂದ್ರ ಕಲಾದಗಿ, ಬೀಳಗಿಯ ತಯಾಮಖಾನ ಇನಾಂದಾರ, ಬಾಗಲಕೋಟೆಯ ನಿಂಗರಾಜ ದೊಡ್ಡಮಬ್ರುಮಕರ.</p>.<p><strong>ಗಮನ ಸೆಳೆದ ಕವಾಯತು:</strong> ಸಚಿವ ಕತ್ತಿ ಅವರು ಪರೇಡ್ ವೀಕ್ಷಣೆ ವೇಳೆ ಪೊಲೀಸ್ ಬ್ಯಾಂಡ್ ಸಿಬ್ಬಂದಿ ಕನ್ನಡದ ಹಾಡುಗಳ ನುಡಿಸಿದರು. ಪಥಸಂಚನ ಅನುಮತಿ, ನಿರ್ಗಮನದ ವೇಳೆ ಸಿಬ್ಬಂದಿಗೆ ಕನ್ನಡದಲ್ಲಿ ಸೂಚನೆ, ನಿರ್ದೇಶನ ನೀಡಲಾಯಿತು.</p>.<p>ಶಾಸಕ ವೀರಣ್ಣ ಚರಂತಿಮಠ, ಸಂಸದ ಪಿ.ಸಿ.ಗದ್ದಿಗೌಡರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಸಿಇಒ ಟಿ.ಭೂಬಾಲನ್, ಎಸ್ಪಿ ಲೋಕೇಶ ಜಗಲಾಸರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>