ಸಮೀಪದ ಅರಭಾವಿ ಗುಡ್ಡದ ಕಲ್ಲುಗಳನ್ನು ಬಳಸಿ ಭವ್ಯ ದೇವಾಲಯ ನಿರ್ಮಿಸಿ ಕಾಶಿಯಿಂದ ತಂದ ಲಿಂಗವನ್ನು ಪ್ರತಿಷ್ಠಾಪಿಸಲಾಯಿತು. ಸದ್ಯ ವಿಶ್ವನಾಥ ಸಾವಿರಾರು ಭಕ್ತರ ಆರಾಧ್ಯ ದೈವವಾಗಿ ನೆಲೆ ನಿಂತಿದ್ದಾರೆ. ಜಾತ್ರೆ ಸಂದರ್ಭದಲ್ಲಿ ಬೆಳಿಗ್ಗೆ ಕಾಶಿ ವಿಶ್ವನಾಥ ದೇವರ ಪೂಜೆಗೆ ಸೊನ್ನದ ಗ್ರಾಮಸ್ಥರು ಕೃಷ್ಣೆಯಿಂದ ಪವಿತ್ರ ಜಲ ತರುತ್ತಾರೆ. ಢವಳೇಶ್ವರ ಗ್ರಾಮಸ್ಥರು ಮಹಾರುದ್ರಾಭಿಷೇಕ ನೆರವೇರಿಸುತ್ತಾರೆ. ನಾಗರಾಳ ಗ್ರಾಮದ ಗುರುರಾಜ ದೇಶಪಾಂಡೆ ಅವರಿಂದ ಹೋಮ ಹವನ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಜಾತ್ರೆಗೆ ಬರುವ ಭಕ್ತರಿಗಾಗಿ ಕಲಾದಗಿಯಿಂದ 20 ಕ್ವಿಂಟಲ್ ಚಿಕ್ಕು ಹಣ್ಣು, 25 ಕ್ವಿಂಟಲ್ ಖರ್ಜೂರ, ಬಾಳೆಹಣ್ಣು ಹಾಗೂ ಮಹಾಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಎಲ್ಲರೂ ಸೇರಿ ಭಕ್ತಿಭಾವದಿಂದ ಆಚರಿಸುವ ಜಾತ್ರೆ ಕಣ್ಮನ ಸೆಳೆಯುತ್ತದೆ.