ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೂಡಲಸಂಗಮ: ನಿರುಪಯುಕ್ತವಾದ ಬಸ್ ತಂಗುದಾಣಗಳು

ಪ್ರವಾಸಿ ತಾಣದಲ್ಲಿಯೂ ತಪ್ಪದ ತೊಂದರೆ: ಪ್ರಯಾಣಿಕರ ಪರದಾಟ
Published : 10 ಫೆಬ್ರುವರಿ 2025, 5:24 IST
Last Updated : 10 ಫೆಬ್ರುವರಿ 2025, 5:24 IST
ಫಾಲೋ ಮಾಡಿ
Comments
ಕೂಡಲಸಂಗಮ ಬಸವೇಶ್ವರ ವೃತ್ತದಲ್ಲಿಯೇ ಬಸ್ ಹತ್ತುತ್ತಿರುವ ಪ್ರಯಾಣಿಕರು
ಕೂಡಲಸಂಗಮ ಬಸವೇಶ್ವರ ವೃತ್ತದಲ್ಲಿಯೇ ಬಸ್ ಹತ್ತುತ್ತಿರುವ ಪ್ರಯಾಣಿಕರು
ಬಸ್ ತಂಗುದಾಣಗಳು ನಿರುಪಯುಕ್ತವಾಗಿದ್ದು ಪ್ರವಾಸಿಗರು ವಿದ್ಯಾರ್ಥಿಗಳು ತೊಂದರೆ ಅನುಭವಿಸುವರು. ಸಂಬಂಧಿಸಿದ ಅಧಿಕಾರಿಗಳು ಬಸ್ ತಂಗುದಾಣ ವೀಕ್ಷಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು.
ಕರಸಂಗಯ್ಯ ಗುಡಿ ನಿವಾಸಿ ಕೂಡಲಸಂಗಮ
ಬಸ್ ತಂಗುದಾಣದ ಬಳಿಯೇ ಬಸ್ ನಿಲ್ಲಿಸುವಂತೆ ಚಾಲಕರಿಗೆ ಘಟಕ ವ್ಯವಸ್ಥಾಪಕರು ಸೂಚಿಸಬೇಕು. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು. ಕೂಡಲಸಂಗಮದಲ್ಲಿ ಇಂತಹ ತೊಂದರೆ ಇದ್ದರೆ ಹೇಗೆ?
ಸಹನಾ ಎನ್ ಬೆಂಗಳೂರು ಪ್ರವಾಸಿ
ಪಾಳುಬಿದ್ದ ಬಸ್‌ ನಿಲ್ದಾಣ
ಕೂಡಲಸಂಗಮ ಕ್ಷೇತ್ರಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ 10 ಎಕರೆ ಪ್ರದೇಶದಲ್ಲಿ ₹50 ಲಕ್ಷ ವೆಚ್ಚಮಾಡಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿ 2002ರಲ್ಲಿಯೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇಲ್ಲಿಗೆ ನಿಯಂತ್ರಣಾಧಿಕಾರಿ ನೇಮಿಸಿ ನಿಲ್ದಾಣ ನಿರ್ವಹಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳದ ಕಾರಣ 23 ವರ್ಷಗಳಿಂದ ನಿಲ್ದಾಣ ನಿರುಪಯುಕ್ತವಾಗಿದೆ. ಮಧ್ನಾಹ್ನ ರಾತ್ರಿ ಕುಡುಕರ ತಾಣವಾಗಿ ಬೆಳಿಗ್ಗೆ ಸಂಜೆ ನಿಲ್ದಾಣದ ಅಂಗಳ ಸಾರ್ವಜನಿಕರ ಬಹಿರ್ದೆಸೆಗೆ ಬಳಕೆಯಾಗುತ್ತಿದೆ. ಜೂಜಾಟ ಸೇರಿದಂತೆ ಇತರ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂದು ಸಾರ್ವಜನಿಕರು ದೂರುತ್ತಾರೆ. ಹೈಟೆಕ್ ಮಾದರಿಯ ಬಸ್ ನಿಲ್ದಾಣ ನೋಡಿ ಬಸ್ ಏರಲು ನಿಲ್ದಾಣದೊಳಗೆ ಬರುವ ದೂರದ ಪ್ರಯಾಣಿಕರು ಅಲ್ಲಿ ಅವ್ಯವಸ್ಥೆ ಕಂಡು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.ಉರಿ ಬಿಸಿಲಿನಲ್ಲಿ ಬಸವೇಶ್ವರ ವೃತ್ತದಲ್ಲಿ ಕಾದು ಬಸ್ ಹತ್ತಬೇಕಾದ ಅನಿವಾರ್ಯತೆ ಪ್ರವಾಸಿಗರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT