<p><strong>ಬಾಗಲಕೋಟೆ</strong>: ಮಾಜಿ ಮುಖ್ಯಮಂತ್ರಿ, ಸಾಹಿತಿ ಎಂ.ವೀರಪ್ಪ ಮೊಯಿಲಿ ಅವರ ‘ವಿಶ್ವಸಂಸ್ಕೃತಿ ಮಹಾಯಾನ ಸಂಪುಟ–3’ ಕೃತಿ ಬಿಡುಗಡೆ ಸಮಾರಂಭವು ಭಾನುವಾರ ಇಲ್ಲಿ 'ವೀರಶೈವ ಮತ್ತು ಲಿಂಗಾಯತ' ಬೇರೆ, ಬೇರೆ’ ಎಂಬ ವಿಷಯದ ಚರ್ಚೆಗೆ ವೇದಿಕೆಯಾಯಿತು.</p><p>ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದ ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ವೀರಣ್ಣ ರಾಜೂರ, ಸಾಹಿತಿ ಸರಜೂ ಕಾಟ್ಕರ್, ‘ವೀರಶೈವ, ಲಿಂಗಾಯತ ಒಂದೇ ಎಂಬರ್ಥದಲ್ಲಿ ಪುಸ್ತಕದಲ್ಲಿ ಬರೆಯಲಾಗಿದೆ. ಆದರೆ ಇವೆರಡೂ ಬೇರೆ, ಬೇರೆ. ಮುಂದಿನ ಸಂಪುಟದಲ್ಲಿ ಇದನ್ನು ಸ್ಪಷ್ಟಪಡಿಸಬೇಕು’ ಎಂದರು.</p><p>ಕಲಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ಆರ್.ಪಾಟೀಲ ಸಮೂಹ ಸಂಸ್ಥೆ ಮತ್ತು ಸಪ್ನ ಬುಕ್ ಹೌಸ್ ಆಯೋಜಿಸಿದ್ದವು.</p><p>ರಾಜೂರ ಮುಂದುವರೆದು, ‘ಪುಸ್ತಕದ ಮುಖಪುಟದಲ್ಲಿರುವ ಬಸವಣ್ಣನವರ ಭಾವಚಿತ್ರದ ಕೈಯಲ್ಲಿ ಸ್ಥಾವರ ಲಿಂಗವಿದೆ. ಇದರ ಬದಲಿಗೆ ಇಷ್ಟಲಿಂಗದ ಚಿತ್ರ ಇರಬೇಕು’ ಎಂದರು.</p><p>ಶಿರಹಟ್ಟಿಯ ಬಾಲೇಹೊಸೂರಿನ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು, ‘ಪುಸ್ತಕದ ಮೇಲೆ ಬಸವಣ್ಣವರ ಕೈಯಲ್ಲಿ ಸ್ಥಾವರ ಲಿಂಗ ಇರುವುದು ಕಲಾವಿದನ ಕಲ್ಪನೆ ಹೊರತು, ಬರಹಗಾರರ ಕಲ್ಪನೆ ಅಲ್ಲ. ಬದಲಾವಣೆ ಮಾಡುವುದಾಗಿ ಅವರು ಹೇಳಿದ್ದಾರೆ. ಇಷ್ಟಲಿಂಗ ಇರಬೇಕು ಎನ್ನುವುದನ್ನು ನಾನೂ ಒಪ್ಪುತ್ತೇನೆ’ ಎಂದರು.</p>.<p>‘ಕಾಂಗ್ರೆಸ್ ಸರ್ಕಾರ ಇದ್ದಾಗ ಲಿಂಗಾಯತ ಪ್ರತ್ಯೇಕ ಹೋರಾಟದ ಸಂದರ್ಭದಲ್ಲೂ ವೀರಶೈವ ಲಿಂಗಾಯತ ಬೇರೆ, ಬೇರೆ ಅಲ್ಲ. ಒಂದೇ ಎಂಬುದನ್ನು ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ’ ಎಂದು ಸ್ವಾಮೀಜಿ ಅವರು ಪ್ರತಿಪಾದಿಸಿದರು. </p>.<p>‘ಸಾವಿರಕ್ಕೂ ಹೆಚ್ಚು ಗ್ರಂಥ ಓದಿದ್ದೇನೆ. ನೀವು, ಕಲಬುರ್ಗಿ ಅವರು ಸಂಪಾದಿಸಿದ 14 ವಚನ ಸಂಪುಟಗಳಲ್ಲಿ, ಒಂದು ವಚನ ಪಾರಿಭಾಷಿಕ ಕೋಶದಲ್ಲಿ ಮೊಯಿಲಿ ಅವರು ಹೇಳಿದ್ದನ್ನೇ ಹೇಳಿದ್ದೀರಿ. ವೇದಿಕೆಯಲ್ಲಿ ಹೇಳಿದ್ದನ್ನು ಹೇಳಿಲ್ಲ’ ಎಂದು ರಾಜೂರ ಅವರಿಗೆ ಪ್ರಶ್ನಿಸಿದರು.</p>.<p>ಅದಕ್ಕೆ ರಾಜೂರ ಅವರು, ‘ಹಿಂದೆ ರಚಿಸಿದ ಸಂಪುಟದಲ್ಲಿ ಪ್ರಕ್ಷಿಪ್ತ ವಚನಗಳು ಸೇರಿದ್ದು ಮಿಶ್ರವಾಗಿವೆ. ಈಗ ಬಸವ ಸಮಿತಿಯಿಂದ ‘ಬಸವ ಯುಗದ ನಿಜ ವಚನಗಳು’ ಸಂಪುಟಗಳು ಬರಲಿವೆ. ಅದರಲ್ಲಿ ಏನು ನಡೆದು ಬಂದಿದೆ ಎಂಬುದನ್ನು ತಿಳಿಸಲಾಗಿದೆ’ ಎಂದರು.</p>.<p>‘ಲಿಂಗಾಯತ ಧರ್ಮದ ಸಿದ್ಧಾಂತಗಳು ಯಾವುವು? ಅಷ್ಟಾವರಣ, ಪಂಚಾಚಾರ್ಯ, ಷಟಸ್ಥಲ ಬಿಟ್ಟು ಲಿಂಗಾಯತ ಧರ್ಮ ಮಾಡಲು ಸಾಧ್ಯವೇ? ಇವುಗಳನ್ನು ಬಿಟ್ಟು ವೀರಶೈವರಿಗಾಗಲೀ, ಲಿಂಗಾಯತರಿಗಾಗಲೀ ಹೇಳಲಿಕ್ಕೆ ಆಗುವುದಿಲ್ಲ’ ಎಂದು ಸ್ವಾಮೀಜಿ ಹೇಳಿದರು.</p>.<p>ಆಗ ರಾಜೂರ ‘ಅದನ್ನು ಬಿಟ್ಟು ಆಚರಣೆಗಳ ಬಗ್ಗೆ ಹೇಳಿ’ ಎಂದರು. ಮಾತುಕತೆ ಬೇರೆಡೆ ಸಾಗುವುದನ್ನು ಅರಿತ ಆಯೋಜಕರು ಇಬ್ಬರ ನಡುವಿನ ಚರ್ಚೆಗೆ ವಿರಾಮ ಹಾಕಿದರು.</p>.<p><strong> ‘ಸಂಘರ್ಷದ ವಿಚಾರಗಳಿಗೆ ಆಸ್ಪದವಿಲ್ಲ’</strong> ‘</p><p>ನಾನು ಕೃತಿಗಳಲ್ಲಿ ಮನಸ್ಸುಗಳ ಜೋಡಿಸುವ ವಿಶ್ವಸಂಸ್ಕೃತಿಗೆ ಆದ್ಯತೆ ನೀಡಿದ್ದೇನೆ ವಿನಾ ವೀರಶೈವ-ಲಿಂಗಾಯತ ಪ್ರತ್ಯೇಕತೆ ಸೇರಿದಂತೆ ನಾಗರಿಕತೆ-ಇತಿಹಾಸದ ಸಂಘರ್ಷದಂಥ ವಿಚಾರಗಳಿಗೆ ಆಸ್ಪದ ನೀಡಿಲ್ಲ’ ಎಂದು ಕೃತಿಕಾರರಾದ ವೀರಪ್ಪ ಮೊಯಿಲಿ ಹೇಳಿದರು. ‘ಮೂರೂ ಸಂಪುಟಗಳಲ್ಲಿ ಮಾನವನ ವಿಕಸನದಿಂದ ಹಿಡಿದು 16 17ನೇ ಶತಮಾನದವರೆಗಿನ ಸಂಗತಿಗಳನ್ನು ಸಂಶೋಧಿಸಿ ನೀಡಿದ್ದೇನೆ. ವೀರಶೈವ- ಲಿಂಗಾಯತ ಕುರಿತು ಸರ್ಕಾರ ಏನು ಹೇಳಿದೆ ಎಂಬುದು ನನಗೆ ಸಂಬಂಧಿಸಿಲ್ಲ. ಎಲ್ಲವನ್ನೂ ಜೋಡಿಸುವ ವಿಶ್ವಸಂಸ್ಕೃತಿಗೆ ಒತ್ತುನೀಡಿದ್ದೇನೆ. ಇತಿಹಾಸದ ಸಂಘರ್ಷಗಳಿಗೆ ಕೈ ಹಾಕಿಲ್ಲ. ಅದರ ಅಗತ್ಯವೂ ಇಲ್ಲ’ ಎಂದರು.</p>.<p> <strong>ಪುಸ್ತಕ ಪರಿಚಯ</strong> </p><p>ಕೃತಿ ಹೆಸರು: ವಿಶ್ವಸಂಸ್ಕೃತಿಯ ಮಹಾಯಾನ ಸಂಪುಟ 3 ಲೇಖಕ: ಎಂ.ವೀರಪ್ಪ ಮೊಯಿಲಿ ಪ್ರಕಟಣೆ: ಸಪ್ನ ಬುಕ್ ಹೌಸ್ ಪುಟಗಳು:666 ದರ: ₹795</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಮಾಜಿ ಮುಖ್ಯಮಂತ್ರಿ, ಸಾಹಿತಿ ಎಂ.ವೀರಪ್ಪ ಮೊಯಿಲಿ ಅವರ ‘ವಿಶ್ವಸಂಸ್ಕೃತಿ ಮಹಾಯಾನ ಸಂಪುಟ–3’ ಕೃತಿ ಬಿಡುಗಡೆ ಸಮಾರಂಭವು ಭಾನುವಾರ ಇಲ್ಲಿ 'ವೀರಶೈವ ಮತ್ತು ಲಿಂಗಾಯತ' ಬೇರೆ, ಬೇರೆ’ ಎಂಬ ವಿಷಯದ ಚರ್ಚೆಗೆ ವೇದಿಕೆಯಾಯಿತು.</p><p>ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದ ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ವೀರಣ್ಣ ರಾಜೂರ, ಸಾಹಿತಿ ಸರಜೂ ಕಾಟ್ಕರ್, ‘ವೀರಶೈವ, ಲಿಂಗಾಯತ ಒಂದೇ ಎಂಬರ್ಥದಲ್ಲಿ ಪುಸ್ತಕದಲ್ಲಿ ಬರೆಯಲಾಗಿದೆ. ಆದರೆ ಇವೆರಡೂ ಬೇರೆ, ಬೇರೆ. ಮುಂದಿನ ಸಂಪುಟದಲ್ಲಿ ಇದನ್ನು ಸ್ಪಷ್ಟಪಡಿಸಬೇಕು’ ಎಂದರು.</p><p>ಕಲಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ಆರ್.ಪಾಟೀಲ ಸಮೂಹ ಸಂಸ್ಥೆ ಮತ್ತು ಸಪ್ನ ಬುಕ್ ಹೌಸ್ ಆಯೋಜಿಸಿದ್ದವು.</p><p>ರಾಜೂರ ಮುಂದುವರೆದು, ‘ಪುಸ್ತಕದ ಮುಖಪುಟದಲ್ಲಿರುವ ಬಸವಣ್ಣನವರ ಭಾವಚಿತ್ರದ ಕೈಯಲ್ಲಿ ಸ್ಥಾವರ ಲಿಂಗವಿದೆ. ಇದರ ಬದಲಿಗೆ ಇಷ್ಟಲಿಂಗದ ಚಿತ್ರ ಇರಬೇಕು’ ಎಂದರು.</p><p>ಶಿರಹಟ್ಟಿಯ ಬಾಲೇಹೊಸೂರಿನ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು, ‘ಪುಸ್ತಕದ ಮೇಲೆ ಬಸವಣ್ಣವರ ಕೈಯಲ್ಲಿ ಸ್ಥಾವರ ಲಿಂಗ ಇರುವುದು ಕಲಾವಿದನ ಕಲ್ಪನೆ ಹೊರತು, ಬರಹಗಾರರ ಕಲ್ಪನೆ ಅಲ್ಲ. ಬದಲಾವಣೆ ಮಾಡುವುದಾಗಿ ಅವರು ಹೇಳಿದ್ದಾರೆ. ಇಷ್ಟಲಿಂಗ ಇರಬೇಕು ಎನ್ನುವುದನ್ನು ನಾನೂ ಒಪ್ಪುತ್ತೇನೆ’ ಎಂದರು.</p>.<p>‘ಕಾಂಗ್ರೆಸ್ ಸರ್ಕಾರ ಇದ್ದಾಗ ಲಿಂಗಾಯತ ಪ್ರತ್ಯೇಕ ಹೋರಾಟದ ಸಂದರ್ಭದಲ್ಲೂ ವೀರಶೈವ ಲಿಂಗಾಯತ ಬೇರೆ, ಬೇರೆ ಅಲ್ಲ. ಒಂದೇ ಎಂಬುದನ್ನು ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ’ ಎಂದು ಸ್ವಾಮೀಜಿ ಅವರು ಪ್ರತಿಪಾದಿಸಿದರು. </p>.<p>‘ಸಾವಿರಕ್ಕೂ ಹೆಚ್ಚು ಗ್ರಂಥ ಓದಿದ್ದೇನೆ. ನೀವು, ಕಲಬುರ್ಗಿ ಅವರು ಸಂಪಾದಿಸಿದ 14 ವಚನ ಸಂಪುಟಗಳಲ್ಲಿ, ಒಂದು ವಚನ ಪಾರಿಭಾಷಿಕ ಕೋಶದಲ್ಲಿ ಮೊಯಿಲಿ ಅವರು ಹೇಳಿದ್ದನ್ನೇ ಹೇಳಿದ್ದೀರಿ. ವೇದಿಕೆಯಲ್ಲಿ ಹೇಳಿದ್ದನ್ನು ಹೇಳಿಲ್ಲ’ ಎಂದು ರಾಜೂರ ಅವರಿಗೆ ಪ್ರಶ್ನಿಸಿದರು.</p>.<p>ಅದಕ್ಕೆ ರಾಜೂರ ಅವರು, ‘ಹಿಂದೆ ರಚಿಸಿದ ಸಂಪುಟದಲ್ಲಿ ಪ್ರಕ್ಷಿಪ್ತ ವಚನಗಳು ಸೇರಿದ್ದು ಮಿಶ್ರವಾಗಿವೆ. ಈಗ ಬಸವ ಸಮಿತಿಯಿಂದ ‘ಬಸವ ಯುಗದ ನಿಜ ವಚನಗಳು’ ಸಂಪುಟಗಳು ಬರಲಿವೆ. ಅದರಲ್ಲಿ ಏನು ನಡೆದು ಬಂದಿದೆ ಎಂಬುದನ್ನು ತಿಳಿಸಲಾಗಿದೆ’ ಎಂದರು.</p>.<p>‘ಲಿಂಗಾಯತ ಧರ್ಮದ ಸಿದ್ಧಾಂತಗಳು ಯಾವುವು? ಅಷ್ಟಾವರಣ, ಪಂಚಾಚಾರ್ಯ, ಷಟಸ್ಥಲ ಬಿಟ್ಟು ಲಿಂಗಾಯತ ಧರ್ಮ ಮಾಡಲು ಸಾಧ್ಯವೇ? ಇವುಗಳನ್ನು ಬಿಟ್ಟು ವೀರಶೈವರಿಗಾಗಲೀ, ಲಿಂಗಾಯತರಿಗಾಗಲೀ ಹೇಳಲಿಕ್ಕೆ ಆಗುವುದಿಲ್ಲ’ ಎಂದು ಸ್ವಾಮೀಜಿ ಹೇಳಿದರು.</p>.<p>ಆಗ ರಾಜೂರ ‘ಅದನ್ನು ಬಿಟ್ಟು ಆಚರಣೆಗಳ ಬಗ್ಗೆ ಹೇಳಿ’ ಎಂದರು. ಮಾತುಕತೆ ಬೇರೆಡೆ ಸಾಗುವುದನ್ನು ಅರಿತ ಆಯೋಜಕರು ಇಬ್ಬರ ನಡುವಿನ ಚರ್ಚೆಗೆ ವಿರಾಮ ಹಾಕಿದರು.</p>.<p><strong> ‘ಸಂಘರ್ಷದ ವಿಚಾರಗಳಿಗೆ ಆಸ್ಪದವಿಲ್ಲ’</strong> ‘</p><p>ನಾನು ಕೃತಿಗಳಲ್ಲಿ ಮನಸ್ಸುಗಳ ಜೋಡಿಸುವ ವಿಶ್ವಸಂಸ್ಕೃತಿಗೆ ಆದ್ಯತೆ ನೀಡಿದ್ದೇನೆ ವಿನಾ ವೀರಶೈವ-ಲಿಂಗಾಯತ ಪ್ರತ್ಯೇಕತೆ ಸೇರಿದಂತೆ ನಾಗರಿಕತೆ-ಇತಿಹಾಸದ ಸಂಘರ್ಷದಂಥ ವಿಚಾರಗಳಿಗೆ ಆಸ್ಪದ ನೀಡಿಲ್ಲ’ ಎಂದು ಕೃತಿಕಾರರಾದ ವೀರಪ್ಪ ಮೊಯಿಲಿ ಹೇಳಿದರು. ‘ಮೂರೂ ಸಂಪುಟಗಳಲ್ಲಿ ಮಾನವನ ವಿಕಸನದಿಂದ ಹಿಡಿದು 16 17ನೇ ಶತಮಾನದವರೆಗಿನ ಸಂಗತಿಗಳನ್ನು ಸಂಶೋಧಿಸಿ ನೀಡಿದ್ದೇನೆ. ವೀರಶೈವ- ಲಿಂಗಾಯತ ಕುರಿತು ಸರ್ಕಾರ ಏನು ಹೇಳಿದೆ ಎಂಬುದು ನನಗೆ ಸಂಬಂಧಿಸಿಲ್ಲ. ಎಲ್ಲವನ್ನೂ ಜೋಡಿಸುವ ವಿಶ್ವಸಂಸ್ಕೃತಿಗೆ ಒತ್ತುನೀಡಿದ್ದೇನೆ. ಇತಿಹಾಸದ ಸಂಘರ್ಷಗಳಿಗೆ ಕೈ ಹಾಕಿಲ್ಲ. ಅದರ ಅಗತ್ಯವೂ ಇಲ್ಲ’ ಎಂದರು.</p>.<p> <strong>ಪುಸ್ತಕ ಪರಿಚಯ</strong> </p><p>ಕೃತಿ ಹೆಸರು: ವಿಶ್ವಸಂಸ್ಕೃತಿಯ ಮಹಾಯಾನ ಸಂಪುಟ 3 ಲೇಖಕ: ಎಂ.ವೀರಪ್ಪ ಮೊಯಿಲಿ ಪ್ರಕಟಣೆ: ಸಪ್ನ ಬುಕ್ ಹೌಸ್ ಪುಟಗಳು:666 ದರ: ₹795</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>