ಬಾದಾಮಿ: ಲಂಚ ಪಡೆಯುತ್ತಿದ್ದ ಇಲ್ಲಿನ ಪುರಸಭೆ ಬಿಲ್ ಕಲೆಕ್ಟರ್ ಲಕ್ಷ್ಮಣ ಶಿಕ್ಕಲಗಾರ ಎಂಬಾತನನ್ನು ಬಾಗಲಕೋಟೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಪ್ರಸನ್ನ ಹಕ್ಕಾಪಕ್ಕಿ ಎಂಬುವರಿಗೆ ಪ್ಲಾಟ್ ಉತಾರ ಕೊಡಲು ಲಕ್ಷ್ಮಣ ₹3,000 ಲಂಚ ಕೇಳಿದ್ದರು. ಈ ಕುರಿತು ಪ್ರಸನ್ನ ಅವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
ಶನಿವಾರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಬಾಗಲಕೋಟೆ ಲೋಕಾಯುಕ್ತ ಅಧೀಕ್ಷಕ ಸತೀಶ ಚಿಟಗುಬ್ಬಿ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕ ಸಿದ್ದೇಶ್ವರ ಮತ್ತು ಇನ್ಸ್ಪೆಕ್ಟರ್ ಎಂ.ಎಚ್. ಬಿದರಿ ಕಾರ್ಯಾಚಾರಣೆಯಲ್ಲಿ ಪಾಲ್ಗೊಂಡಿದ್ದರು.