<p><strong>ಮಹಾಲಿಂಗಪುರ:</strong> ಪಟ್ಟಣದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಹಾನಿಗೀಡಾದ ಆಯಿಲ್ಮಿಲ್ ಪ್ಲಾಟ್ನಲ್ಲಿರುವ ನೇಕಾರ ನಾಗಪ್ಪ ಯಾದವಾಡ ಅವರ ಮನೆಗೆ ಶಾಸಕ ಸಿದ್ದು ಸವದಿ ಸೋಮವಾರ ಭೇಟಿ ನೀಡಿ, ವೈಯಕ್ತಿಕವಾಗಿ ₹5 ಸಾವಿರ ನೀಡಿದರು.</p>.<p>ಮಳೆಯಿಂದ ಹಾನಿಗೀಡಾದ ಪತ್ರಾಸ್ ಚಾವಣಿ ಪರಿಶೀಲಿಸಿದ ಶಾಸಕರು, ತಹಶೀಲ್ದಾರ್ ಗಿರೀಶ ಸ್ವಾದಿ ಅವರಿಗೆ ಕರೆ ಮಾಡಿ ಹಾನಿ ಕುರಿತು ವರದಿ ತಯಾರಿಸಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.</p>.<p>ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಬಸವರಾಜ ಯರಗಟ್ಟಿ, ಮುಖಂಡರಾದ ಶಂಕರಗೌಡ ಪಾಟೀಲ, ಶಿವಾನಂದ ಅಂಗಡಿ, ಮಹೇಶ ಜಿಡ್ಡಿಮನಿ, ಶಿವನಗೌಡ ಪಾಟೀಲ, ಹರೀಶ ನಾಯಕ, ರಾಮು ಪಾತ್ರೋಟ, ಚೇತನ ಬಂಡಿವಡ್ಡರ ಇದ್ದರು.</p>.<p>ಅಧಿಕಾರಿ ಭೇಟಿ: ಮಳೆಗೆ ಹಾನಿಗೀಡಾದ ಆಯಿಲ್ಮಿಲ್ ಪ್ಲಾಟ್ನಲ್ಲಿರುವ ನೇಕಾರ ಬಸವರಾಜ ನಾಗರಾಳ ಅವರ ಮನೆಗೆ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಚಾರಖಾನೆ ಸೋಮವಾರ ಭೇಟಿ ನೀಡಿದರು.</p>.<p>ಕಚ್ಚಾ ನೂಲು, ಮಗ್ಗ ಹಾಗೂ ಮಗ್ಗದ ಉಪಕರಣಗಳು ಹಾನಿಗೀಡಾಗಿದ್ದನ್ನು ಪರಿಶೀಲಿಸಿ, ‘ಸಂಬಂಧಪಟ್ಟ ಇಲಾಖೆಗೆ ಹಾನಿ ಕುರಿತು ವರದಿ ಸಲ್ಲಿಸಲಾಗುವುದು’ ಎಂದರು.</p>.<p>ಶಿವಲಿಂಗ ಟಿರಕಿ, ರಾಜೇಂದ್ರ ಮಿರ್ಜಿ, ರಮೇಶ ನಾಗರಾಳ, ಗುರು ನಾಗರಾಳ, ಈರಪ್ಪ ನಾಗರಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಲಿಂಗಪುರ:</strong> ಪಟ್ಟಣದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಹಾನಿಗೀಡಾದ ಆಯಿಲ್ಮಿಲ್ ಪ್ಲಾಟ್ನಲ್ಲಿರುವ ನೇಕಾರ ನಾಗಪ್ಪ ಯಾದವಾಡ ಅವರ ಮನೆಗೆ ಶಾಸಕ ಸಿದ್ದು ಸವದಿ ಸೋಮವಾರ ಭೇಟಿ ನೀಡಿ, ವೈಯಕ್ತಿಕವಾಗಿ ₹5 ಸಾವಿರ ನೀಡಿದರು.</p>.<p>ಮಳೆಯಿಂದ ಹಾನಿಗೀಡಾದ ಪತ್ರಾಸ್ ಚಾವಣಿ ಪರಿಶೀಲಿಸಿದ ಶಾಸಕರು, ತಹಶೀಲ್ದಾರ್ ಗಿರೀಶ ಸ್ವಾದಿ ಅವರಿಗೆ ಕರೆ ಮಾಡಿ ಹಾನಿ ಕುರಿತು ವರದಿ ತಯಾರಿಸಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.</p>.<p>ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಬಸವರಾಜ ಯರಗಟ್ಟಿ, ಮುಖಂಡರಾದ ಶಂಕರಗೌಡ ಪಾಟೀಲ, ಶಿವಾನಂದ ಅಂಗಡಿ, ಮಹೇಶ ಜಿಡ್ಡಿಮನಿ, ಶಿವನಗೌಡ ಪಾಟೀಲ, ಹರೀಶ ನಾಯಕ, ರಾಮು ಪಾತ್ರೋಟ, ಚೇತನ ಬಂಡಿವಡ್ಡರ ಇದ್ದರು.</p>.<p>ಅಧಿಕಾರಿ ಭೇಟಿ: ಮಳೆಗೆ ಹಾನಿಗೀಡಾದ ಆಯಿಲ್ಮಿಲ್ ಪ್ಲಾಟ್ನಲ್ಲಿರುವ ನೇಕಾರ ಬಸವರಾಜ ನಾಗರಾಳ ಅವರ ಮನೆಗೆ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಚಾರಖಾನೆ ಸೋಮವಾರ ಭೇಟಿ ನೀಡಿದರು.</p>.<p>ಕಚ್ಚಾ ನೂಲು, ಮಗ್ಗ ಹಾಗೂ ಮಗ್ಗದ ಉಪಕರಣಗಳು ಹಾನಿಗೀಡಾಗಿದ್ದನ್ನು ಪರಿಶೀಲಿಸಿ, ‘ಸಂಬಂಧಪಟ್ಟ ಇಲಾಖೆಗೆ ಹಾನಿ ಕುರಿತು ವರದಿ ಸಲ್ಲಿಸಲಾಗುವುದು’ ಎಂದರು.</p>.<p>ಶಿವಲಿಂಗ ಟಿರಕಿ, ರಾಜೇಂದ್ರ ಮಿರ್ಜಿ, ರಮೇಶ ನಾಗರಾಳ, ಗುರು ನಾಗರಾಳ, ಈರಪ್ಪ ನಾಗರಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>