ಕೃಷ್ಣಾ ತೀರದಲ್ಲಿರುವ ಗಾಂಧಿ ಯುಗದ ಕೊನೆಯ ಕೊಂಡಿ ಮೀರಾತಾಯಿ ಕೊಪ್ಪೀಕರ್. 7 ವರ್ಷ ಇದ್ದಾಗಲೇ ಮಹಾತ್ಮ ಗಾಂಧಿಯವರನ್ನು ನೋಡುವ ಸೌಭಾಗ್ಯ ಇವರದ್ದಾಯ್ತು. ಅಲ್ಲಿಂದ ಇಲ್ಲಿಯವರೆಗೂ ಗಾಂಧೀಜಿಯ ಅನುಯಾಯಿ ಆಗಿ ಅವರ ಸಂದೇಶ ಪಾಲನೆಯಲ್ಲೇ ಜೀವನ ನಡೆಸುತ್ತಾ ಬಂದಿರುವ ಇವರು ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ವಾತ್ಸಲ್ಯ ಧಾಮವನ್ನು ಕಟ್ಟಿಕೊಂಡಿದ್ದಾರೆ. ಆಚಾರ್ಯ ವಿನೋಬಾ ಭಾವೆ ಅವರಿಂದ ಪ್ರಭಾವಿತರಾಗಿರುವ ಮೀರಾತಾಯಿ ಅವರು ಹೇಳಿಕೊಟ್ಟ ಸರಳ ಜೀವನ, ಶ್ರಮದಾನ, ಹೈನುಗಾರಿಕೆ ಹಾಗೂ ಸಾವಯವ ಕೃಷಿಯನ್ನೇ ಬದುಕಿಗೆ ನೆಚ್ಚಿಕೊಂಡಿದ್ದಾರೆ.