<p><strong>ಬೀಳಗಿ</strong>: ‘ಶಿಕ್ಷಕರು ಭವಿಷ್ಯದ ನಿರ್ಮಾತೃಗಳು. ಅವರು ಕೇವಲ ಜ್ಞಾನ ಹಂಚಿದರೆ ಸಾಲದು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಮಾರ್ಗದರ್ಶಕರು, ಪ್ರೇರಕರು, ಸ್ನೇಹಿತರಾಗಿರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಆದಾಪುರ ಶಿಕ್ಷಕರಿಗೆ ಕಿವಿಮಾತು ಹೇಳಿದರು.</p>.<p>ತಾಲ್ಲೂಕಿನ ನಾಗರಾಳ ಕೆ.ಜಿ.ಎಸ್ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ ಇಂಗ್ಲಿಷ್ ಮೇಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಜೊತೆ ಪಾಲಕರು ಕೈಜೋಡಿಸಿದಾಗ ಇಂತಹ ಮೇಳಗಳು ಯಶಸ್ವಿಯಾಗುತ್ತವೆ. ಇಲ್ಲಿನ ಪಾಲಕರ ಸಮಿತಿಯವರು ಶಿಕ್ಷಕರಿಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ’ ಎಂದರು.</p>.<p>ಶಿಕ್ಷಕ ಆರ್.ಎಚ್. ಜುಂಜೂರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಂಯೋಜಕ ಜಗದೀಶ ಖೋತ, ಸಿ.ಆರ್.ಪಿ ವಿ.ಎಚ್. ಕುರಿವರ, ಪ್ರಭಾರ ಮುಖ್ಯ ಶಿಕ್ಷಕ ಹನಮಂತಪ್ಪ, ಶಿಕ್ಷಕರಾದ ಎಲ್.ಎನ್.ಮರನೂರ, ಜಿ.ಎ.ನಾಯಿಕ, ಎಲ್.ಎಮ್.ಅಹಿರಸಂಗ, ವಿದ್ಯಾ, ರೇಷ್ಮಾ ತೇರದಾಳ, ಸಿ.ಎನ್.ಉಪ್ಪಲದಿನ್ನಿ ಇದ್ದರು.</p>.<p>ಪಾಲಕರ ಸಮಿತಿಯ ಅಧ್ಯಕ್ಷೆ ಮಾಹಾದೇವಿ ಕೆಂಗಲಗುತ್ತಿ, ಸದಸ್ಯರಾದ ಈರಯ್ಯ ಜಡಿಮಠ, ಮಾಹಾಂತೇಶ ಸೋಮನಕಟ್ಟಿ, ಉಮೇಶ ಹಳ್ಳಿ, ಪಡಿಯಪ್ಪ ಬಡಿಗೇರ, ಮಂಜುನಾಥ ಕರಿಗಾರ, ಕಾಶೀನಾಥ ಕರಿಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಳಗಿ</strong>: ‘ಶಿಕ್ಷಕರು ಭವಿಷ್ಯದ ನಿರ್ಮಾತೃಗಳು. ಅವರು ಕೇವಲ ಜ್ಞಾನ ಹಂಚಿದರೆ ಸಾಲದು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಮಾರ್ಗದರ್ಶಕರು, ಪ್ರೇರಕರು, ಸ್ನೇಹಿತರಾಗಿರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಆದಾಪುರ ಶಿಕ್ಷಕರಿಗೆ ಕಿವಿಮಾತು ಹೇಳಿದರು.</p>.<p>ತಾಲ್ಲೂಕಿನ ನಾಗರಾಳ ಕೆ.ಜಿ.ಎಸ್ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ ಇಂಗ್ಲಿಷ್ ಮೇಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಜೊತೆ ಪಾಲಕರು ಕೈಜೋಡಿಸಿದಾಗ ಇಂತಹ ಮೇಳಗಳು ಯಶಸ್ವಿಯಾಗುತ್ತವೆ. ಇಲ್ಲಿನ ಪಾಲಕರ ಸಮಿತಿಯವರು ಶಿಕ್ಷಕರಿಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ’ ಎಂದರು.</p>.<p>ಶಿಕ್ಷಕ ಆರ್.ಎಚ್. ಜುಂಜೂರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಂಯೋಜಕ ಜಗದೀಶ ಖೋತ, ಸಿ.ಆರ್.ಪಿ ವಿ.ಎಚ್. ಕುರಿವರ, ಪ್ರಭಾರ ಮುಖ್ಯ ಶಿಕ್ಷಕ ಹನಮಂತಪ್ಪ, ಶಿಕ್ಷಕರಾದ ಎಲ್.ಎನ್.ಮರನೂರ, ಜಿ.ಎ.ನಾಯಿಕ, ಎಲ್.ಎಮ್.ಅಹಿರಸಂಗ, ವಿದ್ಯಾ, ರೇಷ್ಮಾ ತೇರದಾಳ, ಸಿ.ಎನ್.ಉಪ್ಪಲದಿನ್ನಿ ಇದ್ದರು.</p>.<p>ಪಾಲಕರ ಸಮಿತಿಯ ಅಧ್ಯಕ್ಷೆ ಮಾಹಾದೇವಿ ಕೆಂಗಲಗುತ್ತಿ, ಸದಸ್ಯರಾದ ಈರಯ್ಯ ಜಡಿಮಠ, ಮಾಹಾಂತೇಶ ಸೋಮನಕಟ್ಟಿ, ಉಮೇಶ ಹಳ್ಳಿ, ಪಡಿಯಪ್ಪ ಬಡಿಗೇರ, ಮಂಜುನಾಥ ಕರಿಗಾರ, ಕಾಶೀನಾಥ ಕರಿಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>