<p><strong>ಬಾದಾಮಿ</strong>: ಬನಶಂಕರಿ ದೇವಾಲಯದ ರಸ್ತೆಯ ಎಪಿಎಂಸಿ ಆವರಣದಲ್ಲಿ ಜಾನುವಾರು ಜಾತ್ರೆಯಲ್ಲಿ ಸೋಮವಾರ ಪ್ರದರ್ಶನ ಮತ್ತು ಮಾರಾಟ ಭರ್ಜರಿಯಾಗಿತ್ತು.</p>.<p>ಬನಶಂಕರಿದೇವಿ ಜಾತ್ರೆಯ ಅಂಗವಾಗಿ ಪ್ರತಿವರ್ಷ ಸ್ಥಳೀಯ ಜಾತ್ರಾ ಸಮಿತಿ, ಎಪಿಎಂಸಿ ಮತ್ತು ಪಶುಸಂಗೋಪನಾ ಇಲಾಖೆಯ ಆಶ್ರಯದಲ್ಲಿ ಐದು ದಿನಗಳವರೆಗೆ ಜಾನುವಾರು ಜಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತದೆ.</p>.<p>ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳ ರೈತರು ಮತ್ತು ಬೇರೆ ಜಿಲ್ಲೆಗಳಿಂದ ರೈತರು ತಮ್ಮ ಜಾನುವಾರು ಪ್ರದರ್ಶನ ಮತ್ತು ಮಾರಾಟಕ್ಕೆ ತಂದಿರುವರು.</p>.<p>ರೈತರು ಹಾಲಹಲ್ಲು ಹೋರಿ, ಎತ್ತು ಮತ್ತು ಗೋವುಗಳ ವೀಕ್ಷಣೆಗೆ ಮತ್ತು ಖರೀದಿಗೆ ತಂಡೋಪತಂಡವಾಗಿ ಆಗಮಿಸಿದ್ದು ಕಂಡು ಬಂದಿತು.</p>.<p>ಅಂದಾಜು ಐದು ಸಾವಿರಕ್ಕೂ ಅಧಿಕ ಜಾನುವಾರುಗಳನ್ನು ರೈತರು ತೆಗೆದುಕೊಂಡು ಬಂದಿದ್ದರು ಎಂದು ಎಪಿಎಂಸಿಯಿಂದ ಅಂದಾಜಿಸಲಾಗಿದೆ.</p>.<p>‘ಈ ವರ್ಸ ಮಳಿ, ಬೆಳಿ ಚೊಲೊ ಆಗೈತ್ರಿ. ರೈತರು ಖರೀದಿಗೆ ಬಹಳ ಜನ ಬಂದಾರ, ವ್ಯಾಪಾರ ಚೊಲೊ ಐತ್ರಿ’ ಎಂದು ಬೇಲೂರ ಗ್ರಾಮದ ಪರಸಪ್ಪ ಹೇಳಿದರು.</p>.<p>ಕಗಲಗೊಂಬ ಗ್ರಾಮದ ಬಸಪ್ಪ ಕೆಂಗಾರ ರೈತನ ಜೋಡೆತ್ತುಗಳು ಜಾತ್ರೆಯಲ್ಲಿ ಆಕರ್ಷಕವಾಗಿದ್ದವು. ರೈತ ಎತ್ತುಗಳನ್ನು ಚೆನ್ನಾಗಿ ಜೋಪಾನ ಮಾಡಿದ ಬಗ್ಗೆ ರೈತರು ನೋಡಿ ಖುಷಿ ಪಟ್ಟರು. ಜೋಡೆತ್ತಿನ ಬೆಲೆ ₹ 20 ಲಕ್ಷ ಎಂದು ರೈತ ಬಸಪ್ಪ ಹೇಳಿದರು.</p>.<p>ಎತ್ತುಗಳ ಅಲಂಕಾರಕ್ಕೆ ಕೊರಳಗೆಜ್ಜೆ ಸರ, ಕೋಡೆಣಸು, ಜೂಲ, ಬಣ್ಣದ ಮಾಲೆ ಮತ್ತಿತರ ವಸ್ತುಗಳ ಹಗ್ಗದ ಅಂಗಡಿಯಲ್ಲಿ ರೈತರು ಖರೀದಿ ನಡೆಸಿದ್ದರು.</p>.<p>ಬಹುಮಾನ ವಿತರಣೆ ಇಂದು: ಎಪಿಎಂಸಿ ಆವರಣದಲ್ಲಿ ಜ. 21 ರಂದು ಸಂಜೆ 5 ಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಉತ್ತಮ ತಳಿ ರಾಸುಗಳಿಗೆ ಬಹುಮಾನ ವಿತರಿಸುವರು ಎಂದು ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ</strong>: ಬನಶಂಕರಿ ದೇವಾಲಯದ ರಸ್ತೆಯ ಎಪಿಎಂಸಿ ಆವರಣದಲ್ಲಿ ಜಾನುವಾರು ಜಾತ್ರೆಯಲ್ಲಿ ಸೋಮವಾರ ಪ್ರದರ್ಶನ ಮತ್ತು ಮಾರಾಟ ಭರ್ಜರಿಯಾಗಿತ್ತು.</p>.<p>ಬನಶಂಕರಿದೇವಿ ಜಾತ್ರೆಯ ಅಂಗವಾಗಿ ಪ್ರತಿವರ್ಷ ಸ್ಥಳೀಯ ಜಾತ್ರಾ ಸಮಿತಿ, ಎಪಿಎಂಸಿ ಮತ್ತು ಪಶುಸಂಗೋಪನಾ ಇಲಾಖೆಯ ಆಶ್ರಯದಲ್ಲಿ ಐದು ದಿನಗಳವರೆಗೆ ಜಾನುವಾರು ಜಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತದೆ.</p>.<p>ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳ ರೈತರು ಮತ್ತು ಬೇರೆ ಜಿಲ್ಲೆಗಳಿಂದ ರೈತರು ತಮ್ಮ ಜಾನುವಾರು ಪ್ರದರ್ಶನ ಮತ್ತು ಮಾರಾಟಕ್ಕೆ ತಂದಿರುವರು.</p>.<p>ರೈತರು ಹಾಲಹಲ್ಲು ಹೋರಿ, ಎತ್ತು ಮತ್ತು ಗೋವುಗಳ ವೀಕ್ಷಣೆಗೆ ಮತ್ತು ಖರೀದಿಗೆ ತಂಡೋಪತಂಡವಾಗಿ ಆಗಮಿಸಿದ್ದು ಕಂಡು ಬಂದಿತು.</p>.<p>ಅಂದಾಜು ಐದು ಸಾವಿರಕ್ಕೂ ಅಧಿಕ ಜಾನುವಾರುಗಳನ್ನು ರೈತರು ತೆಗೆದುಕೊಂಡು ಬಂದಿದ್ದರು ಎಂದು ಎಪಿಎಂಸಿಯಿಂದ ಅಂದಾಜಿಸಲಾಗಿದೆ.</p>.<p>‘ಈ ವರ್ಸ ಮಳಿ, ಬೆಳಿ ಚೊಲೊ ಆಗೈತ್ರಿ. ರೈತರು ಖರೀದಿಗೆ ಬಹಳ ಜನ ಬಂದಾರ, ವ್ಯಾಪಾರ ಚೊಲೊ ಐತ್ರಿ’ ಎಂದು ಬೇಲೂರ ಗ್ರಾಮದ ಪರಸಪ್ಪ ಹೇಳಿದರು.</p>.<p>ಕಗಲಗೊಂಬ ಗ್ರಾಮದ ಬಸಪ್ಪ ಕೆಂಗಾರ ರೈತನ ಜೋಡೆತ್ತುಗಳು ಜಾತ್ರೆಯಲ್ಲಿ ಆಕರ್ಷಕವಾಗಿದ್ದವು. ರೈತ ಎತ್ತುಗಳನ್ನು ಚೆನ್ನಾಗಿ ಜೋಪಾನ ಮಾಡಿದ ಬಗ್ಗೆ ರೈತರು ನೋಡಿ ಖುಷಿ ಪಟ್ಟರು. ಜೋಡೆತ್ತಿನ ಬೆಲೆ ₹ 20 ಲಕ್ಷ ಎಂದು ರೈತ ಬಸಪ್ಪ ಹೇಳಿದರು.</p>.<p>ಎತ್ತುಗಳ ಅಲಂಕಾರಕ್ಕೆ ಕೊರಳಗೆಜ್ಜೆ ಸರ, ಕೋಡೆಣಸು, ಜೂಲ, ಬಣ್ಣದ ಮಾಲೆ ಮತ್ತಿತರ ವಸ್ತುಗಳ ಹಗ್ಗದ ಅಂಗಡಿಯಲ್ಲಿ ರೈತರು ಖರೀದಿ ನಡೆಸಿದ್ದರು.</p>.<p>ಬಹುಮಾನ ವಿತರಣೆ ಇಂದು: ಎಪಿಎಂಸಿ ಆವರಣದಲ್ಲಿ ಜ. 21 ರಂದು ಸಂಜೆ 5 ಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಉತ್ತಮ ತಳಿ ರಾಸುಗಳಿಗೆ ಬಹುಮಾನ ವಿತರಿಸುವರು ಎಂದು ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>