ಇಲ್ಲಿನ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪುನೀತ್ ರಾಜಕುಮಾರ ಭಾಗಿಯಾದರು. ಮುಂಜಾನೆ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದು ಅಲ್ಲಿಂದ ರಸ್ತೆ ಮಾರ್ಗದಲ್ಲಿ ಬಾಗಲಕೋಟೆಗೆ ಬಂದಿದ್ದ ಪುನೀತ್, ನವದಂಪತಿಗೆ ಶುಭಾಶಯ ಕೋರಿದರು. ವಧು–ವರರೊಂದಿಗೆ ಫೋಟೊ ತೆಗೆಸಿಕೊಂಡು, ಕೆಲ ಹೊತ್ತು ಮದುವೆ ಮಂಟಪದಲ್ಲಿ ಇದ್ದು ಮರಳಿದರು.