ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವನ್–ಅಪೇಕ್ಷಾಗೆ ಶುಭಕೋರಿದ ಪುನೀತ್

ಕೊಡಗು ಸಂತ್ರಸ್ತರಿಗೆ ಚಿತ್ರರಂಗದಿಂದಲೂ ನೆರವಿನ ಭರವಸೆ
Last Updated 20 ಆಗಸ್ಟ್ 2018, 12:41 IST
ಅಕ್ಷರ ಗಾತ್ರ

ಬಾಗಲಕೋಟೆ: ಚಿತ್ರ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ ಸೋಮವಾರ ಇಲ್ಲಿ ದಾಂಪತ್ಯ ಬದುಕಿಗೆ ಕಾಲಿಟ್ಟರು. ಪವರ್‌ ಸ್ಟಾರ್ ಪುನೀತ್ ರಾಜಕುಮಾರ ಈ ಸಂಭ್ರಮದ ಗಳಿಗೆಗೆ ಸಾಕ್ಷಿಯಾದರು.

ಇಲ್ಲಿನ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪುನೀತ್ ರಾಜಕುಮಾರ ಭಾಗಿಯಾದರು. ಮುಂಜಾನೆ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದು ಅಲ್ಲಿಂದ ರಸ್ತೆ ಮಾರ್ಗದಲ್ಲಿ ಬಾಗಲಕೋಟೆಗೆ ಬಂದಿದ್ದ ಪುನೀತ್, ನವದಂಪತಿಗೆ ಶುಭಾಶಯ ಕೋರಿದರು. ವಧು–ವರರೊಂದಿಗೆ ಫೋಟೊ ತೆಗೆಸಿಕೊಂಡು, ಕೆಲ ಹೊತ್ತು ಮದುವೆ ಮಂಟಪದಲ್ಲಿ ಇದ್ದು ಮರಳಿದರು.

ಸದ್ಯ ಪವನ್ ಒಡೆಯರ್ ನಿರ್ದೇಶದನದ ’ನಟ ಸಾರ್ವಭೌಮ’ ಚಿತ್ರದಲ್ಲಿ ಪುನೀತ್ ರಾಜಕುಮಾರ ನಾಯಕರಾಗಿ ನಟಿಸುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ತಿಂಗಳ ಹಿಂದೆ ಬಾದಾಮಿ ತಾಲ್ಲೂಕು ಮಹಾಕೂಟದಲ್ಲಿ ನಡೆದಿದ್ದು, ಪುನೀತ್ ಭಾಗಿಯಾಗಿದ್ದರು.

ಕಲಾವಿದರಿಂದಲೂ ನೆರವು: ’ಮಹಾಮಳೆಯಿಂದಾಗಿ ತತ್ತರಿಸಿರುವ ಕೊಡಗಿನ ಜನತೆ ಈಗ ಸಂಕಷ್ಟದಲ್ಲಿದ್ದಾರೆ. ಅವರೊಂದಿಗೆ ಚಿತ್ರರಂಗದ ಎಲ್ಲ ಕಲಾವಿದರು ಇದ್ದೇವೆ. ನಾನು ಏನು ಮಾಡಬೇಕೊ ಅದನ್ನು ಮಾಡಿದ್ದೇನೆ.ಈ ರೀತಿಯ ತೊಂದರೆ ಆಗಬಾರದಿತ್ತು. ಕೊಡಗಿನ ಜನರಿಗೆ ಬಂದಿರುವ ಸಂಕಷ್ಟ ಬೇಗನೇ ಕಳೆಯಲಿ ಎಂದು ಪ್ರಾರ್ಥಿಸುವುದಾಗಿ’ ಹೇಳಿದರು.

’ಮಳೆಯಿಂದ ಸಂತ್ರಸ್ತರಾದವರಿಗೆ ನೆರವಾಗಲು ಎಲ್ಲರೂ ಅವರವರ ಕೆಲಸ ಸರಿಯಾಗಿ ಮಾಡಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT