ಭೂಮಿ, ವಿದ್ಯೆ, ಶಕ್ತಿ, ದುಡ್ಡು, ನದಿ, ಗೋವಿನ ಹೆಸರಲ್ಲಿ ಗುರುತಿಸಲ್ಪಡುವ ಮಹಿಳೆ ಸಹನಶೀಲಳೂ ಹೌದು. ಒಳ್ಳೆಯ ಸಂಗತಿಗಳ ಬಗ್ಗೆ ಆಕೆಗೆ ಸಹನೆ ಇರಲಿದೆ. ಅನ್ಯಾಯ ಕಂಡರೆ ಸಹಿಸುವುದಿಲ್ಲ. ಸಾಧನೆ ಸುಮ್ಮನೆ ದೊರೆಯುವುದಿಲ್ಲ. ಅದರ ಹಿಂದೆ ಕಷ್ಟ, ಪರಿಶ್ರಮ, ನೋವು, ತ್ಯಾಗ ಎಲ್ಲವೂ ಇದೆ. ಸೋಲೇ ಗೆಲುವಿನ ಸೋಪಾನ ಎಂದು ಅರಿತರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಹೀಗೆ ಯಶಸ್ಸಿನ ಹಾದಿಯಲ್ಲಿ ಸಾಗಿ ಬಂದವರನ್ನು ಗುರುತಿಸುವ ಕೆಲಸ ’ಪ್ರಜಾವಾಣಿ‘ ಬಳಗ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.