<p><strong>ಬಾದಾಮಿ:</strong> ‘ನಮ್ಮೂರಿನಲ್ಲಿ ರೈತರು ತಾಳೆಮರದಿಂದ ಉತ್ತಮ ಇಳುವರಿ ಮತ್ತು ಅಧಿಕ ಲಾಭ ಪಡೆದಿರುವ ಹಿನ್ನೆಲೆಯಲ್ಲಿ ನಾನೂ ತಾಳೆ ಮರವನ್ನು ಬೆಳೆಯಬೇಕೆಂದು ಯೋಚಿಸಿ ಎರಡೂವರೆ ಎಕರೆಯಲ್ಲಿ ತಾಳೆಮರವನ್ನು ಬೆಳೆಸಿರುವೆ ’ ಎಂದು ತಾಲ್ಲೂಕಿನ ಬಿ.ಎನ್. ಜಾಲಿಹಾಳ ಗ್ರಾಮದ ನಿವೃತ್ತ ಪ್ರೌಢಶಾಲೆ ಶಿಕ್ಷಕ ಶಿವನಗೌಡ ಹೊಸಗೌಡ್ರ ಹೇಳಿದರು.</p><p>ರೈತ ಶಿವನಗೌಡ ಚಿಕ್ಕಂದಿನಿಂದಲೇ ಮನೆಯಲ್ಲಿ ಒಕ್ಕಲುತನ ಬೇಸಾಯದ ಕುರಿತು ತಂದೆಯಿಂದ ಮಾರ್ಗದರ್ಶನ ಪಡೆದಿದ್ದಾರೆ. ನಿವೃತ್ತಿಯ ನಂತರವೂ ಭೂತಾಯಿಯ ಸೇವೆಯ ಕೃಷಿಯಲ್ಲಿ ತೊಡಗಿದ್ದಾರೆ. 71 ರ ವಯಸ್ಸಿನಲ್ಲಿಯೂ ಬೆಳೆಗೆ ನೀರು ಹಾಯಿಸಲು ಹೋಗುವ ಇವರ ಬಳಿ ಕೃಷಿ ಕುರಿತು ಯುವಕರು ಸಲಹೆ ಪಡೆಯುತ್ತಿದ್ದಾರೆ.</p><p>‘ಎರಡು ಎಕರೆ ಜಮೀನಿನಲ್ಲಿ 150 ತಾಳೆಮರ ಸಸಿಗಳನ್ನು ನೆಡಲಾಗಿದೆ. ಮೂರು ವರ್ಷ ತಾಳ್ಮೆಯಿಂದ ಇವುಗಳನ್ನು ಬೆಳೆಸಬೇಕು. ಮೂರು ವರ್ಷಗಳವರೆಗೆ ಇದರಲ್ಲಿ ಪರ್ಯಾಯವಾಗಿ ಮೆಕ್ಕೆಜೋಳ, ಶೇಂಗಾ ಮತ್ತು ತೊಗರಿ ಬೆಳೆಯನ್ನು ಬೆಳೆಯಬಹುದು’ ಎಂದು ರೈತ ಶಿವನಗೌಡ ಹೇಳಿದರು.</p><p>‘ಮೂರು ವರ್ಷಗಳ ನಂತರ ಇಳುವರಿ ಆರಂಭವಾಗುತ್ತದೆ. 15 ದಿನಗಳಿಗೊಮ್ಮೆ ಕಟಾವು ಮಾಡಬೇಕು. ತಿಂಗಳಿಗೆ ಆರಂಭದಲ್ಲಿ 1 ಟನ್ ತಾಳೆಹಣ್ಣು ಬರುವುದು. ಒಂದು ಟನ್ಗೆ ಅಂದಾಜು ₹ 10 ರಿಂದ ₹ 12 ಸಾವಿರ ದರ ಬರುವುದು. ಗಿಡಗಳು ದೊಡ್ಡದಾದಂತೆ ಇಳುವರಿ ಹೆಚ್ಚುತ್ತದೆ. 35 ವರ್ಷಗಳವರೆಗೆ ಇಳುವರಿ ಪಡೆಯಬಹುದು’ ಎನ್ನುತ್ತಾರೆ ಅವರು.</p><p>‘ಹೊಲದಲ್ಲಿ ಕಳೆ ಕಸ, ಮರದ ಎಲೆ ಸಂಗ್ರಹಿಸಿ ಕಾಂಪೋಸ್ಟ್ ಗೊಬ್ಬರ ಮತ್ತು ಜಾನುವಾರು ಶಗಣಿ ಗೊಬ್ಬರವನ್ನು ಬೆಳೆಗಳಿಗೆ ಬಳಸಲಾಗುವುದು. ಬದುವಿನ ಸುತ್ತ ತೆಂಗು, ಪೇರಲ ಮತ್ತು ಲಿಂಬೆ ಗಿಡಗಳನ್ನು ಬೆಳೆಸಲಾಗಿದೆ. ಆಯಾ ಋತುಮಾನಕ್ಕೆ ತಕ್ಕಂತೆ ಫಲ ನೀಡುತ್ತವೆ’ ಎಂದು ತಿಳಿಸಿದರು.</p><p>‘ರೈತರು ಶ್ರಮಪಟ್ಟರೆ ಭೂತಾಯಿ ಎಂದು ನಮ್ಮ ಕೈಬಿಡುವುದಿಲ್ಲ. ರೈತರು ಒಂದೇ ಬೆಳೆ ಬೆಳೆಯದೇ ಪರ್ಯಾಯ ಬೆಳೆ ಬೆಳೆಯಬೇಕು’ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ‘ನಮ್ಮೂರಿನಲ್ಲಿ ರೈತರು ತಾಳೆಮರದಿಂದ ಉತ್ತಮ ಇಳುವರಿ ಮತ್ತು ಅಧಿಕ ಲಾಭ ಪಡೆದಿರುವ ಹಿನ್ನೆಲೆಯಲ್ಲಿ ನಾನೂ ತಾಳೆ ಮರವನ್ನು ಬೆಳೆಯಬೇಕೆಂದು ಯೋಚಿಸಿ ಎರಡೂವರೆ ಎಕರೆಯಲ್ಲಿ ತಾಳೆಮರವನ್ನು ಬೆಳೆಸಿರುವೆ ’ ಎಂದು ತಾಲ್ಲೂಕಿನ ಬಿ.ಎನ್. ಜಾಲಿಹಾಳ ಗ್ರಾಮದ ನಿವೃತ್ತ ಪ್ರೌಢಶಾಲೆ ಶಿಕ್ಷಕ ಶಿವನಗೌಡ ಹೊಸಗೌಡ್ರ ಹೇಳಿದರು.</p><p>ರೈತ ಶಿವನಗೌಡ ಚಿಕ್ಕಂದಿನಿಂದಲೇ ಮನೆಯಲ್ಲಿ ಒಕ್ಕಲುತನ ಬೇಸಾಯದ ಕುರಿತು ತಂದೆಯಿಂದ ಮಾರ್ಗದರ್ಶನ ಪಡೆದಿದ್ದಾರೆ. ನಿವೃತ್ತಿಯ ನಂತರವೂ ಭೂತಾಯಿಯ ಸೇವೆಯ ಕೃಷಿಯಲ್ಲಿ ತೊಡಗಿದ್ದಾರೆ. 71 ರ ವಯಸ್ಸಿನಲ್ಲಿಯೂ ಬೆಳೆಗೆ ನೀರು ಹಾಯಿಸಲು ಹೋಗುವ ಇವರ ಬಳಿ ಕೃಷಿ ಕುರಿತು ಯುವಕರು ಸಲಹೆ ಪಡೆಯುತ್ತಿದ್ದಾರೆ.</p><p>‘ಎರಡು ಎಕರೆ ಜಮೀನಿನಲ್ಲಿ 150 ತಾಳೆಮರ ಸಸಿಗಳನ್ನು ನೆಡಲಾಗಿದೆ. ಮೂರು ವರ್ಷ ತಾಳ್ಮೆಯಿಂದ ಇವುಗಳನ್ನು ಬೆಳೆಸಬೇಕು. ಮೂರು ವರ್ಷಗಳವರೆಗೆ ಇದರಲ್ಲಿ ಪರ್ಯಾಯವಾಗಿ ಮೆಕ್ಕೆಜೋಳ, ಶೇಂಗಾ ಮತ್ತು ತೊಗರಿ ಬೆಳೆಯನ್ನು ಬೆಳೆಯಬಹುದು’ ಎಂದು ರೈತ ಶಿವನಗೌಡ ಹೇಳಿದರು.</p><p>‘ಮೂರು ವರ್ಷಗಳ ನಂತರ ಇಳುವರಿ ಆರಂಭವಾಗುತ್ತದೆ. 15 ದಿನಗಳಿಗೊಮ್ಮೆ ಕಟಾವು ಮಾಡಬೇಕು. ತಿಂಗಳಿಗೆ ಆರಂಭದಲ್ಲಿ 1 ಟನ್ ತಾಳೆಹಣ್ಣು ಬರುವುದು. ಒಂದು ಟನ್ಗೆ ಅಂದಾಜು ₹ 10 ರಿಂದ ₹ 12 ಸಾವಿರ ದರ ಬರುವುದು. ಗಿಡಗಳು ದೊಡ್ಡದಾದಂತೆ ಇಳುವರಿ ಹೆಚ್ಚುತ್ತದೆ. 35 ವರ್ಷಗಳವರೆಗೆ ಇಳುವರಿ ಪಡೆಯಬಹುದು’ ಎನ್ನುತ್ತಾರೆ ಅವರು.</p><p>‘ಹೊಲದಲ್ಲಿ ಕಳೆ ಕಸ, ಮರದ ಎಲೆ ಸಂಗ್ರಹಿಸಿ ಕಾಂಪೋಸ್ಟ್ ಗೊಬ್ಬರ ಮತ್ತು ಜಾನುವಾರು ಶಗಣಿ ಗೊಬ್ಬರವನ್ನು ಬೆಳೆಗಳಿಗೆ ಬಳಸಲಾಗುವುದು. ಬದುವಿನ ಸುತ್ತ ತೆಂಗು, ಪೇರಲ ಮತ್ತು ಲಿಂಬೆ ಗಿಡಗಳನ್ನು ಬೆಳೆಸಲಾಗಿದೆ. ಆಯಾ ಋತುಮಾನಕ್ಕೆ ತಕ್ಕಂತೆ ಫಲ ನೀಡುತ್ತವೆ’ ಎಂದು ತಿಳಿಸಿದರು.</p><p>‘ರೈತರು ಶ್ರಮಪಟ್ಟರೆ ಭೂತಾಯಿ ಎಂದು ನಮ್ಮ ಕೈಬಿಡುವುದಿಲ್ಲ. ರೈತರು ಒಂದೇ ಬೆಳೆ ಬೆಳೆಯದೇ ಪರ್ಯಾಯ ಬೆಳೆ ಬೆಳೆಯಬೇಕು’ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>