ಸಾವಳಗಿ: ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಒಂದು ಗಂಟೆಗೂ ಹೆಚ್ಚು ಹೊತ್ತು ಸುರಿದ ಮಳೆ ರೈತರ ಮುಖದಲ್ಲಿ ಹರ್ಷ ಮೂಡಿಸಿದೆ.
ಸಮೀಪದ ತುಂಗಳ, ಕುರಗೋಡ, ಗದ್ಯಾಳ, ಗೋಠೆ, ಅಡಿಹುಡಿ, ತೋದಲಬಾಗಿ ಸೇರಿದಂತೆ ವಿವಿಧ ಗ್ರಾಮದ ರೈತರು ಕಳೆದ ಎರಡು ತಿಂಗಳಿಂದ ದ್ರಾಕ್ಷಿಗಿಡಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರು ತಂದು ಗಿಡಗಳು ಒಣಗದಂತೆ ನೋಡಿಕೊಂಡಿದ್ದರು, ಈಗ ಉತ್ತಮ ಮಳೆಯಾಗಿರುವುದರಿಂದ ರೈತರು ನಿಟ್ಟುಸಿರು ಬಿಟ್ಟರು.