<p><strong>ಮಹಾಲಿಂಗಪುರ:</strong> ‘ಭಾರತೀಯ ಸಂಸ್ಕೃತಿ ಅದ್ಭುತವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ’ ಎಂದು ಮೈಗೂರಿನ ಶಿವಾನಂದಮಠದ ಗುರುಪ್ರಸಾದ ಸ್ವಾಮೀಜಿ ಹೇಳಿದರು.</p>.<p>ಸಮೀಪದ ಢವಳೇಶ್ವರ ಗ್ರಾಮದ ಢವಳನಾಥ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಬಾಲಕಿಯರ ಸುಮೇಧಾ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.</p>.<p>ಬಾಲ್ಯವನ್ನು ತಾಯಿ ರಕ್ಷಣೆ ಮಾಡಬೇಕು. ಯೌವನದಲ್ಲಿ ದಾರಿ ತಪ್ಪುವ ಸಂದರ್ಭದಲ್ಲಿ ಮಹಾತ್ಮರು ಒಳ್ಳೆಯ ಬೋಧನೆ ಮಾಡಬೇಕು. ತಾರುಣ್ಯ ತುಂಬಿದ ಯುವಕರನ್ನು ಸಂಸ್ಕೃತಿಯತ್ತ ಒಯ್ಯಬೇಕು. ಮುಪ್ಪಿನಲ್ಲಿ ಪರಮಾತ್ಮ ರಕ್ಷಣೆ ಮಾಡಬೇಕು ಎಂದರು.</p>.<p>ಬೆಳಗಾವಿ ವಿಭಾಗ ಕಾರ್ಯವಾಹ ರಾಮಚಂದ್ರ ಏಡಕೆ ಮಾತನಾಡಿ, ನಾವೆಲ್ಲರೂ ಇನ್ನಷ್ಟು ವರ್ಷ ಬದುಕಬೇಕಿದೆ. ಹೀಗಾಗಿ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕೇವಲ ಓದು ಜೀವನವಲ್ಲ, ಸಾಮಾನ್ಯ ಜ್ಞಾನ ಬರಲು ಮನೆ ಬಿಟ್ಟು ಹೊರಗಿರಬೇಕು ಎಂದರು.</p>.<p>ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೇಮನ್ ಗಿರಡ್ಡಿ, ಕೆ.ಜಿ.ನೇಗಿನಹಾಳ, ಸಿ.ವಿ.ದಾದನಟ್ಟಿ, ಪೂರ್ಣೇಶ ಮಠಪತಿ, ಪ್ರಮೋದ ಜಿ., ನಾರಾಯಣ ಚನ್ನಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಲಿಂಗಪುರ:</strong> ‘ಭಾರತೀಯ ಸಂಸ್ಕೃತಿ ಅದ್ಭುತವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ’ ಎಂದು ಮೈಗೂರಿನ ಶಿವಾನಂದಮಠದ ಗುರುಪ್ರಸಾದ ಸ್ವಾಮೀಜಿ ಹೇಳಿದರು.</p>.<p>ಸಮೀಪದ ಢವಳೇಶ್ವರ ಗ್ರಾಮದ ಢವಳನಾಥ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಬಾಲಕಿಯರ ಸುಮೇಧಾ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.</p>.<p>ಬಾಲ್ಯವನ್ನು ತಾಯಿ ರಕ್ಷಣೆ ಮಾಡಬೇಕು. ಯೌವನದಲ್ಲಿ ದಾರಿ ತಪ್ಪುವ ಸಂದರ್ಭದಲ್ಲಿ ಮಹಾತ್ಮರು ಒಳ್ಳೆಯ ಬೋಧನೆ ಮಾಡಬೇಕು. ತಾರುಣ್ಯ ತುಂಬಿದ ಯುವಕರನ್ನು ಸಂಸ್ಕೃತಿಯತ್ತ ಒಯ್ಯಬೇಕು. ಮುಪ್ಪಿನಲ್ಲಿ ಪರಮಾತ್ಮ ರಕ್ಷಣೆ ಮಾಡಬೇಕು ಎಂದರು.</p>.<p>ಬೆಳಗಾವಿ ವಿಭಾಗ ಕಾರ್ಯವಾಹ ರಾಮಚಂದ್ರ ಏಡಕೆ ಮಾತನಾಡಿ, ನಾವೆಲ್ಲರೂ ಇನ್ನಷ್ಟು ವರ್ಷ ಬದುಕಬೇಕಿದೆ. ಹೀಗಾಗಿ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕೇವಲ ಓದು ಜೀವನವಲ್ಲ, ಸಾಮಾನ್ಯ ಜ್ಞಾನ ಬರಲು ಮನೆ ಬಿಟ್ಟು ಹೊರಗಿರಬೇಕು ಎಂದರು.</p>.<p>ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೇಮನ್ ಗಿರಡ್ಡಿ, ಕೆ.ಜಿ.ನೇಗಿನಹಾಳ, ಸಿ.ವಿ.ದಾದನಟ್ಟಿ, ಪೂರ್ಣೇಶ ಮಠಪತಿ, ಪ್ರಮೋದ ಜಿ., ನಾರಾಯಣ ಚನ್ನಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>