<p><strong>ಬಾಗಲಕೋಟೆ</strong>: ಮಾನವ ಏನೇ ಸಾಧನೆ ಮಾಡಿದರೂ ಸಂತೃಪ್ತಿ ಸಾಧಿಸಿಲ್ಲ. ಮಾನವ ಅತೃಪ್ತನಾಗಿರುವುದರಿಂದ ಸಂತೃಪ್ತನಾಗಲಾರ. ಮನಸ್ಸು ಸಂತನಾದರೆ ಸಂತೃಪ್ತನಾಗುತ್ತಾನೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.</p>.<p>ಶ್ರಾವಣ ಮಾಸದ ಎರಡನೇ ಶರಣಬಸವ ಪಲ್ಲಕ್ಕಿ ಉತ್ಸವದ ನೇತೃತ್ವವಹಿಸಿ ಮಾತನಾಡಿದ ಅವರು, ಮಾನವನು ಏನೆಲ್ಲ ಸಂಪಾದಿಸಿದ್ದಾನೆ. ಆದರೆ, ಸಂತೃಪ್ತಿ ಸಂಪಾದಿಸಿಲ್ಲ. ಮಹಾಸತ್ಯ ಸಂಪತ್ತನ್ನೇ ಸಂಪಾದಿಸುವುದನ್ನು ಮಾನವ ಮರೆತಿದ್ದಾನೆ. ಅರಿವಿನ ಬೆಳಕಿನಲ್ಲಿ ತನ್ನ ಸ್ವರೂಪವನ್ನು ಅರಿತುಕೊಳ್ಳಬೇಕು ಎಂದರು.</p>.<p>ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ಇಡೀ ವಿಶ್ವಕ್ಕೆ ವಿನೂತನವಾದ ವೈಜ್ಞಾನಿಕ ವಾತ್ಸವದ ಸತ್ಯವನ್ನು, ಸಮ, ಸಮವಾಗಿ ಸಾಮರಸ್ಯದ ಬದುಕನ್ನು ಬಾಳುವ ಕಲೆಯನ್ನು ಬಸವಾದಿ ಶರಣರು ನೀಡಿದ್ದಾರೆ ಎಂದು ಹೇಳಿದರು.</p>.<p>ಮಸ್ಕಿ ಇರಕಲ್ ಮಠದ ಬಸವ ಪ್ರಸಾದ ಸ್ವಾಮೀಜಿ ಮಾತನಾಡಿ, ಮಾನವನು ತನು, ಮನ, ಭಾವದ ಮೂಲಕ ಪರಮ ಶಿವಸ್ವರೂಪ ಆಗಬೇಕಾಗಿದೆ. ಜೀವನ ಸಾರ್ಥಕಗೊಳಿಸಿಕೊಳ್ಳಲು ಶರಣ ಸಂದೇಶ ಪಾಲನೆಯೊಂದೇ ದಾರಿ ಎಂದರು.</p>.<p>ಪಲ್ಲಕ್ಕಿಯು ಕಾರೇಹಳ್ಳದ ಪ್ರಮುಖ ರಸ್ತೆಗಳಲ್ಲಿ ಕಲಾ ತಂಡಗಳೊಂದಿಗೆ ಸಂಚರಿಸಿ ಶ್ರೀಪೀಠ ತಲುಪಿತು. ಅಕ್ಕನ ಬಳಗದವರು ಶಿವಭಜನೆಯೊಂದಿಗೆ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಮಾನವ ಏನೇ ಸಾಧನೆ ಮಾಡಿದರೂ ಸಂತೃಪ್ತಿ ಸಾಧಿಸಿಲ್ಲ. ಮಾನವ ಅತೃಪ್ತನಾಗಿರುವುದರಿಂದ ಸಂತೃಪ್ತನಾಗಲಾರ. ಮನಸ್ಸು ಸಂತನಾದರೆ ಸಂತೃಪ್ತನಾಗುತ್ತಾನೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.</p>.<p>ಶ್ರಾವಣ ಮಾಸದ ಎರಡನೇ ಶರಣಬಸವ ಪಲ್ಲಕ್ಕಿ ಉತ್ಸವದ ನೇತೃತ್ವವಹಿಸಿ ಮಾತನಾಡಿದ ಅವರು, ಮಾನವನು ಏನೆಲ್ಲ ಸಂಪಾದಿಸಿದ್ದಾನೆ. ಆದರೆ, ಸಂತೃಪ್ತಿ ಸಂಪಾದಿಸಿಲ್ಲ. ಮಹಾಸತ್ಯ ಸಂಪತ್ತನ್ನೇ ಸಂಪಾದಿಸುವುದನ್ನು ಮಾನವ ಮರೆತಿದ್ದಾನೆ. ಅರಿವಿನ ಬೆಳಕಿನಲ್ಲಿ ತನ್ನ ಸ್ವರೂಪವನ್ನು ಅರಿತುಕೊಳ್ಳಬೇಕು ಎಂದರು.</p>.<p>ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ಇಡೀ ವಿಶ್ವಕ್ಕೆ ವಿನೂತನವಾದ ವೈಜ್ಞಾನಿಕ ವಾತ್ಸವದ ಸತ್ಯವನ್ನು, ಸಮ, ಸಮವಾಗಿ ಸಾಮರಸ್ಯದ ಬದುಕನ್ನು ಬಾಳುವ ಕಲೆಯನ್ನು ಬಸವಾದಿ ಶರಣರು ನೀಡಿದ್ದಾರೆ ಎಂದು ಹೇಳಿದರು.</p>.<p>ಮಸ್ಕಿ ಇರಕಲ್ ಮಠದ ಬಸವ ಪ್ರಸಾದ ಸ್ವಾಮೀಜಿ ಮಾತನಾಡಿ, ಮಾನವನು ತನು, ಮನ, ಭಾವದ ಮೂಲಕ ಪರಮ ಶಿವಸ್ವರೂಪ ಆಗಬೇಕಾಗಿದೆ. ಜೀವನ ಸಾರ್ಥಕಗೊಳಿಸಿಕೊಳ್ಳಲು ಶರಣ ಸಂದೇಶ ಪಾಲನೆಯೊಂದೇ ದಾರಿ ಎಂದರು.</p>.<p>ಪಲ್ಲಕ್ಕಿಯು ಕಾರೇಹಳ್ಳದ ಪ್ರಮುಖ ರಸ್ತೆಗಳಲ್ಲಿ ಕಲಾ ತಂಡಗಳೊಂದಿಗೆ ಸಂಚರಿಸಿ ಶ್ರೀಪೀಠ ತಲುಪಿತು. ಅಕ್ಕನ ಬಳಗದವರು ಶಿವಭಜನೆಯೊಂದಿಗೆ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>