<p><strong>ರಬಕವಿ ಬನಹಟ್ಟಿ:</strong> ಇಂದಿನ ದಿನಗಳಲ್ಲಿ ನಾವು ನಿತ್ಯ ಹೊಸತನ್ನು ಕಲಿಯುವಂತಾಗಬೇಕು. ಆಧುನಿಕ ಜಗತ್ತಿಗೆ ಬೇಕಾದ ಜ್ಞಾನ ಮತ್ತು ಕೌಶಲಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಯಾವಾಗಲೂ ನಾವು ಹೊಸ ಚಿಂತನೆಗಳತ್ತ ನಮ್ಮ ಗಮನ ನೀಡಬೇಕು. ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ಗೌರವವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎಸ್.ಹೂಲಿ ತಿಳಿಸಿದರು.</p>.<p>ಅವರು ಭಾನುವಾರ ಇಲ್ಲಿನ ಎಸ್ಟಿಸಿ ಕಾಲೇಜು ಸಭಾಭವನದಲ್ಲಿ 2011-14ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರು ವಂದನೆ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಪ್ರಾಚಾರ್ಯ ಡಾ. ಜಿ.ಆರ್.ಜುನ್ನಾಯ್ಕರ್ ಮಾತನಾಡಿ, ಹಳೆಯ ವಿದ್ಯಾರ್ಥಿಗಳೇ ಶಿಕ್ಷಣ ಸಂಸ್ಥೆಯ ಆಸ್ತಿ. ಕಾಲೇಜು ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ಜೀವನದಲ್ಲಿ ಏಳು ಬೀಳುಗಳ ಮಧ್ಯದಲ್ಲಿಯೂ ಸುಂದರವಾದ ಬದುಕನ್ನು ಕಟ್ಟಿಕೊಳ್ಳುವುದು ಸಾಧನೆಯ ಸಂಗತಿಯಾಗಿದೆ ಎಂದರು.</p>.<p>ನಿವೃತ್ತ ಉಪನ್ಯಾಸಕ ಎಂ.ಎಸ್.ಬದಾಮಿ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಲೆದಾಡದೆ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು ಉದ್ಯೋಗಪತಿಗಳಾಗಲು ಶ್ರಮಿಸಬೇಕು ಎಂದರು.</p>.<p>ಉಪನ್ಯಾಸಕರಾದ ಮಲ್ಲಿಕಾರ್ಜುನ ಸಜ್ಜನವರ, ಎಸ್.ಬಿ.ಉಕ್ಕಲಿ, ವೈ.ಬಿ.ಕೊರಡೂರ, ವಿ.ಎಸ್.ಕೊಟಕನೂರ, ಸುವರ್ಣಾ ವರದಾಯಿ ಮಾತನಾಡಿದರು.</p>.<p>ರಶ್ಮಿ ಕೊಟಕನೂರ, ವೆಂಕಟೇಶ ಕುಲಕರ್ಣಿ, ವಿಶ್ವಜ ಕಾಡದೇವರ, ಕಾವೇರಿ ಜಗದಾಳ, ಲಕ್ಷ್ಮಿ ಖವಾಸಿ ಸೇರಿದಂತೆ ಅನೇಕ ಶಿಕ್ಷಕರನ್ನು ಸನ್ಮಾನಿಸಿದರು.</p>.<p>ಸಚಿನ ಬರಗಲ್, ಕುಮಾರ ಮೈತ್ರಿ, ಹರೀಶ ಹುಕ್ಕೇರಿ, ಅಶ್ವಿನಿ ಸಾರವಾಡ, ಅಮೀನ ಮುಲ್ಲಾ, ರಮೇಶ ಕುಂಬಾರ, ಮಧು ಗಿಡವೀರ, ಮಹಾದೇವ ಮೇಲಗಿರಿ, ಅರ್ಪಿತಾ ಭದ್ರನವರ, ಮಹಾದೇವ ಮೇಲಗಿರಿ ಮತ್ತು ಅಕ್ಷತಾ ಹೊಸಕೋಟಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ ಬನಹಟ್ಟಿ:</strong> ಇಂದಿನ ದಿನಗಳಲ್ಲಿ ನಾವು ನಿತ್ಯ ಹೊಸತನ್ನು ಕಲಿಯುವಂತಾಗಬೇಕು. ಆಧುನಿಕ ಜಗತ್ತಿಗೆ ಬೇಕಾದ ಜ್ಞಾನ ಮತ್ತು ಕೌಶಲಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಯಾವಾಗಲೂ ನಾವು ಹೊಸ ಚಿಂತನೆಗಳತ್ತ ನಮ್ಮ ಗಮನ ನೀಡಬೇಕು. ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ಗೌರವವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎಸ್.ಹೂಲಿ ತಿಳಿಸಿದರು.</p>.<p>ಅವರು ಭಾನುವಾರ ಇಲ್ಲಿನ ಎಸ್ಟಿಸಿ ಕಾಲೇಜು ಸಭಾಭವನದಲ್ಲಿ 2011-14ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರು ವಂದನೆ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಪ್ರಾಚಾರ್ಯ ಡಾ. ಜಿ.ಆರ್.ಜುನ್ನಾಯ್ಕರ್ ಮಾತನಾಡಿ, ಹಳೆಯ ವಿದ್ಯಾರ್ಥಿಗಳೇ ಶಿಕ್ಷಣ ಸಂಸ್ಥೆಯ ಆಸ್ತಿ. ಕಾಲೇಜು ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ಜೀವನದಲ್ಲಿ ಏಳು ಬೀಳುಗಳ ಮಧ್ಯದಲ್ಲಿಯೂ ಸುಂದರವಾದ ಬದುಕನ್ನು ಕಟ್ಟಿಕೊಳ್ಳುವುದು ಸಾಧನೆಯ ಸಂಗತಿಯಾಗಿದೆ ಎಂದರು.</p>.<p>ನಿವೃತ್ತ ಉಪನ್ಯಾಸಕ ಎಂ.ಎಸ್.ಬದಾಮಿ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಲೆದಾಡದೆ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು ಉದ್ಯೋಗಪತಿಗಳಾಗಲು ಶ್ರಮಿಸಬೇಕು ಎಂದರು.</p>.<p>ಉಪನ್ಯಾಸಕರಾದ ಮಲ್ಲಿಕಾರ್ಜುನ ಸಜ್ಜನವರ, ಎಸ್.ಬಿ.ಉಕ್ಕಲಿ, ವೈ.ಬಿ.ಕೊರಡೂರ, ವಿ.ಎಸ್.ಕೊಟಕನೂರ, ಸುವರ್ಣಾ ವರದಾಯಿ ಮಾತನಾಡಿದರು.</p>.<p>ರಶ್ಮಿ ಕೊಟಕನೂರ, ವೆಂಕಟೇಶ ಕುಲಕರ್ಣಿ, ವಿಶ್ವಜ ಕಾಡದೇವರ, ಕಾವೇರಿ ಜಗದಾಳ, ಲಕ್ಷ್ಮಿ ಖವಾಸಿ ಸೇರಿದಂತೆ ಅನೇಕ ಶಿಕ್ಷಕರನ್ನು ಸನ್ಮಾನಿಸಿದರು.</p>.<p>ಸಚಿನ ಬರಗಲ್, ಕುಮಾರ ಮೈತ್ರಿ, ಹರೀಶ ಹುಕ್ಕೇರಿ, ಅಶ್ವಿನಿ ಸಾರವಾಡ, ಅಮೀನ ಮುಲ್ಲಾ, ರಮೇಶ ಕುಂಬಾರ, ಮಧು ಗಿಡವೀರ, ಮಹಾದೇವ ಮೇಲಗಿರಿ, ಅರ್ಪಿತಾ ಭದ್ರನವರ, ಮಹಾದೇವ ಮೇಲಗಿರಿ ಮತ್ತು ಅಕ್ಷತಾ ಹೊಸಕೋಟಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>