<p><strong>ಬಾಗಲಕೋಟೆ</strong>: ಇಲ್ಲಿನ ಐತಿಹಾಸಿಕ ಹೋಳಿ ಸಂಭ್ರಮಕ್ಕೆ ಭಾನುವಾರ ತೆರೆ ಬಿದ್ದಿತು. ಮೂರು ದಿನಗಳ ಕಾಲ ಅತ್ಯಂತ ವೈಭವದಿಂದ ಬಣ್ಣದಾಟ ನಡೆಯಿತು. ಮಕ್ಕಳು, ಯುವಕರು, ಹಿರಿಯರು ಪಾಲ್ಗೊಳ್ಳುವ ಮೂಲಕ ಬಣ್ಣದಾಟದ ರಂಗು ಹೆಚ್ಚಿಸಿದರು.</p>.<p>ಸಣ್ಣ–ಪುಟ್ಟ ಮಾತಿನ ಚಕಮಕಿ ಹೊರತುಪಡಿಸಿದರೆ ಹೋಳಿ ಹಬ್ಬ ಶಾಂತಿಯುತವಾಗಿ ನಡೆಯಿತು. ಜನರೂ ಸಂಭ್ರಮದಿಂದ ಪರಸ್ಪರ ಬಣ್ಣ ಎರಚಾಡಿದರು.</p>.<p>ಹಳೆಯ ಬಾಗಲಕೋಟೆಯಲ್ಲಿ ಮೂರನೇ ದಿನ ಬಣ್ಣದಾಟ ರಂಗೇರಿತ್ತು. ಶಿವರಾತ್ರಿ ಅಮವಾಸ್ಯೆಯಿಂದ ಹಲಗೆ ಸದ್ದಿನೊಂದಿಗೆ ಬಣ್ಣದಾಟ ದಿನದಿಂದ ದಿನಕ್ಕೆ ಮೆರುಗು ಪಡೆದಿತ್ತು.</p>.<p>ಕೊನೆಯ ದಿನವೂ ಬಾಗಲಕೋಟೆಯಲ್ಲಿ ರೇನ್ ಡ್ಯಾನ್ಸ್ ಇತ್ತು. ಯುವಕ, ಯುವತಿಯರು ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಎರಡು ದಿನಗಳಿಂದ ಮೇಲೆ ಮೆತ್ತಿಕೊಂಡಿದ್ದ ಬಣ್ಣದ ಮೇಲೆಯೇ ಮತ್ತೆ ಬಣ್ಣ ಹಚ್ಚಿ ಸಂಭ್ರಮಿಸಿದರು.</p>.<p>ನೂರಾರು ಟ್ರ್ಯಾಕ್ಟರ್ಗಳಲ್ಲಿ ಬ್ಯಾರಲ್ಗಳಲ್ಲಿ ಬಣ್ಣ ತುಂಬಿಕೊಂಡು ಕಿಲ್ಲಾ ಮೂಲಕ ಸಾಲಾಗಿ ಟ್ರ್ಯಾಕ್ಟರ್ಗಳು ಸಾಗಿದವು. ಪುನೀತ್ ರಾಜಕುಮಾರ್ ಫೋಟೊಗಳು ಅಲ್ಲಲ್ಲಿ ರಾರಾಜಿಸಿದವು. ವಿರಾಟ್ ಕೊಹ್ಲಿ ಫೋಟೊ ಹಿಡಿದುಕೊಂಡು ಟ್ರ್ಯಾಕ್ಟರ್ವೊಂದು ಮೆರವಣಿಗೆಯಲ್ಲಿತ್ತು. </p>.<p>ಟ್ರ್ಟಾಕ್ಟರ್ಗಳಲ್ಲಿದ್ದವರು ಬ್ಯಾರಲ್ಗಳಲ್ಲಿದ್ದ ಬಣ್ಣವನ್ನು ರಸ್ತೆ ಮೇಲಿದ್ದ ಯುವಕರಿಗೆ ಎರಚಿದರೆ, ಕೆಳಗಿದ್ದ ಯುವಕರು ಅಲ್ಲಿದ್ದ ಬ್ಯಾರೆಲ್ಗಳಲ್ಲಿ ಅಷ್ಟೇ ಜೋರಾಗಿ ಟ್ರ್ಯಾಕ್ಟರ್ಗಳಲ್ಲಿದ್ದವರತ್ತ ಎರಚುತ್ತಿದ್ದರು. ರಸ್ತೆ ಬದಿ, ಮನೆಯ ಮಾಳಿಗೆಯ ಮೇಲೆ ಕುಳಿತು ಮಹಿಳೆಯರು ವೀಕ್ಷಿಸುತ್ತಿದ್ದದ್ದು ಕಂಡು ಬಂದಿತು. </p>.<p>ಜೀವ ತುಂಬಿದ ಹಲಗೆ: ಬಾಗಲಕೋಟೆಯ ಬಣ್ಣದಾಟಕ್ಕೆ ಜೀವ ತುಂಬುವ ಕೆಲಸವನ್ನು ಹಲಗೆ ಮಾಡುತ್ತದೆ. ನಿತ್ಯ ಸಂಜೆ ಯುವಕರು ತಂಡಗಳಾಗಿ ವಿವಿಧೆಡೆ ಹಲಗೆ ಬಾರಿಸುವುದರ ಜತೆಗೆ ಅಲ್ಲಲ್ಲಿ ನಡೆಯುವ ಹಲಗೆ ಮೇಳಗಳು ಬಣ್ಣದಾಟದ ರಂಗು ಹೆಚ್ಚಿಸಿವೆ.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು ಸಂಜೆ ಮನೆ ಆವರಣದಲ್ಲಿ ಬಣ್ಣದಾಟ ಏರ್ಪಡಿಸಿದ್ದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಇಲ್ಲಿನ ಐತಿಹಾಸಿಕ ಹೋಳಿ ಸಂಭ್ರಮಕ್ಕೆ ಭಾನುವಾರ ತೆರೆ ಬಿದ್ದಿತು. ಮೂರು ದಿನಗಳ ಕಾಲ ಅತ್ಯಂತ ವೈಭವದಿಂದ ಬಣ್ಣದಾಟ ನಡೆಯಿತು. ಮಕ್ಕಳು, ಯುವಕರು, ಹಿರಿಯರು ಪಾಲ್ಗೊಳ್ಳುವ ಮೂಲಕ ಬಣ್ಣದಾಟದ ರಂಗು ಹೆಚ್ಚಿಸಿದರು.</p>.<p>ಸಣ್ಣ–ಪುಟ್ಟ ಮಾತಿನ ಚಕಮಕಿ ಹೊರತುಪಡಿಸಿದರೆ ಹೋಳಿ ಹಬ್ಬ ಶಾಂತಿಯುತವಾಗಿ ನಡೆಯಿತು. ಜನರೂ ಸಂಭ್ರಮದಿಂದ ಪರಸ್ಪರ ಬಣ್ಣ ಎರಚಾಡಿದರು.</p>.<p>ಹಳೆಯ ಬಾಗಲಕೋಟೆಯಲ್ಲಿ ಮೂರನೇ ದಿನ ಬಣ್ಣದಾಟ ರಂಗೇರಿತ್ತು. ಶಿವರಾತ್ರಿ ಅಮವಾಸ್ಯೆಯಿಂದ ಹಲಗೆ ಸದ್ದಿನೊಂದಿಗೆ ಬಣ್ಣದಾಟ ದಿನದಿಂದ ದಿನಕ್ಕೆ ಮೆರುಗು ಪಡೆದಿತ್ತು.</p>.<p>ಕೊನೆಯ ದಿನವೂ ಬಾಗಲಕೋಟೆಯಲ್ಲಿ ರೇನ್ ಡ್ಯಾನ್ಸ್ ಇತ್ತು. ಯುವಕ, ಯುವತಿಯರು ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಎರಡು ದಿನಗಳಿಂದ ಮೇಲೆ ಮೆತ್ತಿಕೊಂಡಿದ್ದ ಬಣ್ಣದ ಮೇಲೆಯೇ ಮತ್ತೆ ಬಣ್ಣ ಹಚ್ಚಿ ಸಂಭ್ರಮಿಸಿದರು.</p>.<p>ನೂರಾರು ಟ್ರ್ಯಾಕ್ಟರ್ಗಳಲ್ಲಿ ಬ್ಯಾರಲ್ಗಳಲ್ಲಿ ಬಣ್ಣ ತುಂಬಿಕೊಂಡು ಕಿಲ್ಲಾ ಮೂಲಕ ಸಾಲಾಗಿ ಟ್ರ್ಯಾಕ್ಟರ್ಗಳು ಸಾಗಿದವು. ಪುನೀತ್ ರಾಜಕುಮಾರ್ ಫೋಟೊಗಳು ಅಲ್ಲಲ್ಲಿ ರಾರಾಜಿಸಿದವು. ವಿರಾಟ್ ಕೊಹ್ಲಿ ಫೋಟೊ ಹಿಡಿದುಕೊಂಡು ಟ್ರ್ಯಾಕ್ಟರ್ವೊಂದು ಮೆರವಣಿಗೆಯಲ್ಲಿತ್ತು. </p>.<p>ಟ್ರ್ಟಾಕ್ಟರ್ಗಳಲ್ಲಿದ್ದವರು ಬ್ಯಾರಲ್ಗಳಲ್ಲಿದ್ದ ಬಣ್ಣವನ್ನು ರಸ್ತೆ ಮೇಲಿದ್ದ ಯುವಕರಿಗೆ ಎರಚಿದರೆ, ಕೆಳಗಿದ್ದ ಯುವಕರು ಅಲ್ಲಿದ್ದ ಬ್ಯಾರೆಲ್ಗಳಲ್ಲಿ ಅಷ್ಟೇ ಜೋರಾಗಿ ಟ್ರ್ಯಾಕ್ಟರ್ಗಳಲ್ಲಿದ್ದವರತ್ತ ಎರಚುತ್ತಿದ್ದರು. ರಸ್ತೆ ಬದಿ, ಮನೆಯ ಮಾಳಿಗೆಯ ಮೇಲೆ ಕುಳಿತು ಮಹಿಳೆಯರು ವೀಕ್ಷಿಸುತ್ತಿದ್ದದ್ದು ಕಂಡು ಬಂದಿತು. </p>.<p>ಜೀವ ತುಂಬಿದ ಹಲಗೆ: ಬಾಗಲಕೋಟೆಯ ಬಣ್ಣದಾಟಕ್ಕೆ ಜೀವ ತುಂಬುವ ಕೆಲಸವನ್ನು ಹಲಗೆ ಮಾಡುತ್ತದೆ. ನಿತ್ಯ ಸಂಜೆ ಯುವಕರು ತಂಡಗಳಾಗಿ ವಿವಿಧೆಡೆ ಹಲಗೆ ಬಾರಿಸುವುದರ ಜತೆಗೆ ಅಲ್ಲಲ್ಲಿ ನಡೆಯುವ ಹಲಗೆ ಮೇಳಗಳು ಬಣ್ಣದಾಟದ ರಂಗು ಹೆಚ್ಚಿಸಿವೆ.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು ಸಂಜೆ ಮನೆ ಆವರಣದಲ್ಲಿ ಬಣ್ಣದಾಟ ಏರ್ಪಡಿಸಿದ್ದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>