<p><strong>ಬಾಗಲಕೋಟೆ</strong>: ಆಟಿಸಮ್ ಆರಂಭಿಕದಲ್ಲಿಯೇ ಪತ್ತೆ ಮಾಡಿದರೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು ಎಂದು ಹೈದರಾಬಾದಿನ ಆಟಿಸಮ್ ತಜ್ಞೆ ಡಾ.ಆರ್.ಟಿ.ರಾಜೇಶ್ವರಿ ಹೇಳಿದರು.</p>.<p>ಬಿ.ವಿ.ವಿ. ಸಂಘದ ಹೋಮಿಯೋಪಥಿಕ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ವಿಶ್ವ ಆಟಿಸಮ್ ದಿನ ಅಂಗವಾಗಿ ಆಯೋಜಿಸಿದ್ದ ‘ಆರೋಗ್ಯ-ಅರಿವು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರೋಗ ಲಕ್ಷಣದಲ್ಲಿ ಒಬ್ಬ ವ್ಯಕ್ತಿ ಹೇಗೆ ವರ್ತಿಸುತ್ತಾನೆ. ಇತರರೊಂದಿಗೆ ಹೇಗೆ ಸಂವಹನ ನಡೆಸುತ್ತಾನೆ ಎಂಬುದು ಗೊತ್ತಿರಬೇಕು ಎಂದರು.</p>.<p>ಮಕ್ಕಳ ತಜ್ಞ ಡಾ.ವಿ.ಎಸ್. ಸೋಬಾನಿ ಮಾತನಾಡಿ, ತಜ್ಞ ವೈದ್ಯರು ರೋಗ ನಿರ್ಣಯ ಮಾಡಿದಾಗ ಪಾಲಕರು ಸಕಾರಾತ್ಮಕವಾಗಿ ಸ್ಪಂದಿಸದೆ ಚಿಕಿತ್ಸೆ ಕೊಡಿಸಲು ಹಿಂದೇಟು ಹಾಕುತ್ತಾರೆ, ಮಗುವಿಗೆ ಇರುವ ತೊಂದರೆ ಒಪ್ಪಿಕೊಂಡು ಚಿಕಿತ್ಸೆಗಾಗಿ ಮುಂದೆ ಬಂದಾಗ ರೋಗವನ್ನು ಬೇಗ ಹತೋಟಿಗೆ ತರಬಹುದು ಎಂದರು.</p>.<p>ಪ್ರಾಚಾರ್ಯ ಡಾ.ಅರುಣ ಹೂಲಿ ಮಾತನಾಡಿ, ವೈದ್ಯಕೀಯ ರಂಗಕ್ಕೆ ಸವಾಲಾದ ಹಲವಾರು ರೋಗಗಳಿಗೆ ಗುಣಮಟ್ಟದ ಹೋಮಿಯೋಪಥಿ ಚಿಕಿತ್ಸಾ ಸೌಲಭ್ಯಗಳಿವೆ ಎಂದು ಹೇಳಿರು.</p>.<p>ಪ್ರಾಧ್ಯಾಪಕರಾದ ಡಾ.ರವಿ.ಕೋಟೆಣ್ಣವರ, ಡಾ.ಅಮರೇಶ ಬಳಗಾನೂರ, ಡಾ.ಸುಧೀರ ಬೆಟಗೇರಿ, ಡಾ.ರುದ್ರೇಶ ಕೊಪ್ಪಳ, ಡಾ.ವಿಜಯಲಕ್ಷ್ಮಿ, ಡಾ.ಪವನ ಟಾವನಿ. ಡಾ.ಸುನೀಲ ಭೋಸಲೆ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಆಟಿಸಮ್ ಆರಂಭಿಕದಲ್ಲಿಯೇ ಪತ್ತೆ ಮಾಡಿದರೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು ಎಂದು ಹೈದರಾಬಾದಿನ ಆಟಿಸಮ್ ತಜ್ಞೆ ಡಾ.ಆರ್.ಟಿ.ರಾಜೇಶ್ವರಿ ಹೇಳಿದರು.</p>.<p>ಬಿ.ವಿ.ವಿ. ಸಂಘದ ಹೋಮಿಯೋಪಥಿಕ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ವಿಶ್ವ ಆಟಿಸಮ್ ದಿನ ಅಂಗವಾಗಿ ಆಯೋಜಿಸಿದ್ದ ‘ಆರೋಗ್ಯ-ಅರಿವು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರೋಗ ಲಕ್ಷಣದಲ್ಲಿ ಒಬ್ಬ ವ್ಯಕ್ತಿ ಹೇಗೆ ವರ್ತಿಸುತ್ತಾನೆ. ಇತರರೊಂದಿಗೆ ಹೇಗೆ ಸಂವಹನ ನಡೆಸುತ್ತಾನೆ ಎಂಬುದು ಗೊತ್ತಿರಬೇಕು ಎಂದರು.</p>.<p>ಮಕ್ಕಳ ತಜ್ಞ ಡಾ.ವಿ.ಎಸ್. ಸೋಬಾನಿ ಮಾತನಾಡಿ, ತಜ್ಞ ವೈದ್ಯರು ರೋಗ ನಿರ್ಣಯ ಮಾಡಿದಾಗ ಪಾಲಕರು ಸಕಾರಾತ್ಮಕವಾಗಿ ಸ್ಪಂದಿಸದೆ ಚಿಕಿತ್ಸೆ ಕೊಡಿಸಲು ಹಿಂದೇಟು ಹಾಕುತ್ತಾರೆ, ಮಗುವಿಗೆ ಇರುವ ತೊಂದರೆ ಒಪ್ಪಿಕೊಂಡು ಚಿಕಿತ್ಸೆಗಾಗಿ ಮುಂದೆ ಬಂದಾಗ ರೋಗವನ್ನು ಬೇಗ ಹತೋಟಿಗೆ ತರಬಹುದು ಎಂದರು.</p>.<p>ಪ್ರಾಚಾರ್ಯ ಡಾ.ಅರುಣ ಹೂಲಿ ಮಾತನಾಡಿ, ವೈದ್ಯಕೀಯ ರಂಗಕ್ಕೆ ಸವಾಲಾದ ಹಲವಾರು ರೋಗಗಳಿಗೆ ಗುಣಮಟ್ಟದ ಹೋಮಿಯೋಪಥಿ ಚಿಕಿತ್ಸಾ ಸೌಲಭ್ಯಗಳಿವೆ ಎಂದು ಹೇಳಿರು.</p>.<p>ಪ್ರಾಧ್ಯಾಪಕರಾದ ಡಾ.ರವಿ.ಕೋಟೆಣ್ಣವರ, ಡಾ.ಅಮರೇಶ ಬಳಗಾನೂರ, ಡಾ.ಸುಧೀರ ಬೆಟಗೇರಿ, ಡಾ.ರುದ್ರೇಶ ಕೊಪ್ಪಳ, ಡಾ.ವಿಜಯಲಕ್ಷ್ಮಿ, ಡಾ.ಪವನ ಟಾವನಿ. ಡಾ.ಸುನೀಲ ಭೋಸಲೆ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>