<p><strong>ಕೆರೂರ: </strong>ಎಲ್ಲರಂತೆಯೇ ಶಾಸ್ತ್ರೋಕ್ತ ವಾಗಿ ನಡೆದರೂ ಸಹ ಇದೊಂದು ವಿಶಿಷ್ಟ ರೀತಿಯ ಮದುವೆ. ವರನಿಗೆ ಮಾತ್ರ ಯಾವುದೇ ಖರ್ಚಿನ ಗೊಡವೆ ಇಲ್ಲ. <br /> <br /> ಮದು ಮಗನ ಹೆಸರು ಬಸವರಾಜ ರೂಢಗಿ. ನಿರಕ್ಷರ ಕುಕ್ಷಿ. ವೃತ್ತಿ ಕೂಲಿ ಇಲ್ಲವೇ ಅಲ್ಲಲ್ಲಿ ಅಂಗಡಿಗಳಿಗೆ ಸೈಕಲ್ ಗಾಡಿಯಲ್ಲಿ ನೀರು ಹಾಕಿ ದುಡಿ ಯುವುದೇ ಸಂಪಾದನೆ. ಇದಿಷ್ಟೇ ಆಗಿದ್ದರೆ ಈ ಕಥೆಯ ಔಚಿತ್ಯ ಇರಲಿಲ್ಲ. ಉಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರ ಬಂದಾತ ಬಸವನಿಗೆ ನೆರಳು ಸೇರಿದಂತೆ ಯಾವುದೇ ಆಸರೆ ಸಹ ಇಲ್ಲ. <br /> <br /> ಹಾಗಂತ ಈತ ದುಡ್ಡು ಗಳಿಸ ದಿದ್ದರೂ ತನ್ನ ಮುಗ್ಧ ವ್ಯಕ್ತಿತ್ವ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವನೆಯಿಂದ ಇಲ್ಲಿನ ಬಸರಿಗಿಡ ಪೇಟೆ ಓಣಿ ಸೇರಿದಂತೆ ಹೊಸಪೇಟೆ ಪ್ರದೇಶದಲ್ಲಿ ಜನರ, ಪ್ರೀತಿ ವಿಶ್ವಾಸ ಗಳಿಸಿದ್ದ. ಪಟ್ಟಣದ ವಿವಿಧ ಓಣಿಗಳಲ್ಲಿ ಯಾರೇ ಹುಟ್ಟಲಿ ಅಥವಾ ಸಾಯಲಿ ಈ ಬಸವ ಹಾಜರ್.ಮೊದ ಲಿನಿಂದ ಹಿಡಿದು ಎಲ್ಲ ಕೆಲಸ (ಅಂತ್ಯ ಸಂಸ್ಕಾರ ಸಹ) ಪೂರೈಸಿ, ಅವರಿಂದ ಏನನ್ನೂ ಅಪೇಕ್ಷಿಸದೇ ಏನೆಲ್ಲ ಸೇವೆ ಮಾಡುವ ಕಾಯಕ ಯೋಗಿ. ಎಲ್ಲರ ಅಚ್ಚುಮೆಚ್ಚಿನ ಬಸವ ನಾಗಿದ್ದ. ಪುಣ್ಯವಂತರೊಬ್ಬರು ತಮ್ಮ ಮನೆಯಲ್ಲಿ ಇವನಿಗೆ ಆಸರೆ ನೀಡಿದ್ದಾರೆ.<br /> <br /> ಬಸರಿಗಿಡಪೇಟೆ ಹಿರಿಯರು, ಯುವಕರು ಸೇರಿ ಬಡ ಬಸವನ ಮದುವೆಯನ್ನು ಅದ್ದೂರಿಯಾಗಿ ಮಾಡಿದರು. <br /> ಪ್ರಾಮಾಣಿಕತೆಯಿಂದ ಎಲ್ಲ ಮನ ಗೆದ್ದ ನಿರ್ಗತಿಕನೊಬ್ಬನ ಬಾಳು ಪೂರೈಸಿದ ನೆಮ್ಮದಿ ಅಲ್ಲಿಯ ಜನರಲ್ಲಿ ಎದ್ದು ಕಾಣುತ್ತಿತ್ತು. <br /> <br /> ತಮ್ಮ ಮನೆಯ ಮದುವೆ ಎಂಬ ರೀತಿಯಲ್ಲಿ ಪೊಲೀಸರು, ಪತ್ರಕರ್ತರು, ಯುವಕರು ಬಂದಆಶೀರ್ವದಿಸಿದರು. ಅಲ್ಲದೆ ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಹೊಸ ಜೀವನಕ್ಕೆ ಶುಭ ಹಾರೈಸಿದರು. ಯಾರ ಕೆಲಸವೇ ಇದ್ದರೂ ಅದನ್ನು ಮನಸಾರೆ ಮಾಡಿಕೊಡುತ್ತಿದ್ದ ಈ ಸಜ್ಜನ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆರೂರ: </strong>ಎಲ್ಲರಂತೆಯೇ ಶಾಸ್ತ್ರೋಕ್ತ ವಾಗಿ ನಡೆದರೂ ಸಹ ಇದೊಂದು ವಿಶಿಷ್ಟ ರೀತಿಯ ಮದುವೆ. ವರನಿಗೆ ಮಾತ್ರ ಯಾವುದೇ ಖರ್ಚಿನ ಗೊಡವೆ ಇಲ್ಲ. <br /> <br /> ಮದು ಮಗನ ಹೆಸರು ಬಸವರಾಜ ರೂಢಗಿ. ನಿರಕ್ಷರ ಕುಕ್ಷಿ. ವೃತ್ತಿ ಕೂಲಿ ಇಲ್ಲವೇ ಅಲ್ಲಲ್ಲಿ ಅಂಗಡಿಗಳಿಗೆ ಸೈಕಲ್ ಗಾಡಿಯಲ್ಲಿ ನೀರು ಹಾಕಿ ದುಡಿ ಯುವುದೇ ಸಂಪಾದನೆ. ಇದಿಷ್ಟೇ ಆಗಿದ್ದರೆ ಈ ಕಥೆಯ ಔಚಿತ್ಯ ಇರಲಿಲ್ಲ. ಉಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರ ಬಂದಾತ ಬಸವನಿಗೆ ನೆರಳು ಸೇರಿದಂತೆ ಯಾವುದೇ ಆಸರೆ ಸಹ ಇಲ್ಲ. <br /> <br /> ಹಾಗಂತ ಈತ ದುಡ್ಡು ಗಳಿಸ ದಿದ್ದರೂ ತನ್ನ ಮುಗ್ಧ ವ್ಯಕ್ತಿತ್ವ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವನೆಯಿಂದ ಇಲ್ಲಿನ ಬಸರಿಗಿಡ ಪೇಟೆ ಓಣಿ ಸೇರಿದಂತೆ ಹೊಸಪೇಟೆ ಪ್ರದೇಶದಲ್ಲಿ ಜನರ, ಪ್ರೀತಿ ವಿಶ್ವಾಸ ಗಳಿಸಿದ್ದ. ಪಟ್ಟಣದ ವಿವಿಧ ಓಣಿಗಳಲ್ಲಿ ಯಾರೇ ಹುಟ್ಟಲಿ ಅಥವಾ ಸಾಯಲಿ ಈ ಬಸವ ಹಾಜರ್.ಮೊದ ಲಿನಿಂದ ಹಿಡಿದು ಎಲ್ಲ ಕೆಲಸ (ಅಂತ್ಯ ಸಂಸ್ಕಾರ ಸಹ) ಪೂರೈಸಿ, ಅವರಿಂದ ಏನನ್ನೂ ಅಪೇಕ್ಷಿಸದೇ ಏನೆಲ್ಲ ಸೇವೆ ಮಾಡುವ ಕಾಯಕ ಯೋಗಿ. ಎಲ್ಲರ ಅಚ್ಚುಮೆಚ್ಚಿನ ಬಸವ ನಾಗಿದ್ದ. ಪುಣ್ಯವಂತರೊಬ್ಬರು ತಮ್ಮ ಮನೆಯಲ್ಲಿ ಇವನಿಗೆ ಆಸರೆ ನೀಡಿದ್ದಾರೆ.<br /> <br /> ಬಸರಿಗಿಡಪೇಟೆ ಹಿರಿಯರು, ಯುವಕರು ಸೇರಿ ಬಡ ಬಸವನ ಮದುವೆಯನ್ನು ಅದ್ದೂರಿಯಾಗಿ ಮಾಡಿದರು. <br /> ಪ್ರಾಮಾಣಿಕತೆಯಿಂದ ಎಲ್ಲ ಮನ ಗೆದ್ದ ನಿರ್ಗತಿಕನೊಬ್ಬನ ಬಾಳು ಪೂರೈಸಿದ ನೆಮ್ಮದಿ ಅಲ್ಲಿಯ ಜನರಲ್ಲಿ ಎದ್ದು ಕಾಣುತ್ತಿತ್ತು. <br /> <br /> ತಮ್ಮ ಮನೆಯ ಮದುವೆ ಎಂಬ ರೀತಿಯಲ್ಲಿ ಪೊಲೀಸರು, ಪತ್ರಕರ್ತರು, ಯುವಕರು ಬಂದಆಶೀರ್ವದಿಸಿದರು. ಅಲ್ಲದೆ ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಹೊಸ ಜೀವನಕ್ಕೆ ಶುಭ ಹಾರೈಸಿದರು. ಯಾರ ಕೆಲಸವೇ ಇದ್ದರೂ ಅದನ್ನು ಮನಸಾರೆ ಮಾಡಿಕೊಡುತ್ತಿದ್ದ ಈ ಸಜ್ಜನ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>