<p><strong>ಕೆರೂರ:</strong> ಮಲಪ್ರಭಾ ನದಿ ತಟದ ನೆರೆ ಪೀಡಿತ ತಳಕವಾಡ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ಕುಸಿದ ಮನೆಯೊಳಗಿದ್ದ ಎಮ್ಮೆ ಕರು ಸತ್ತಿದ್ದು, ಅಪಾರ ಪ್ರಮಾಣದ ಬೆಳೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ.<br /> <br /> ಮಳೆಯಿಂದಾಗಿ ಚನ್ನಯ್ಯ ಮೂಗನೂರ ಅವರ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಮೂರು ಆಕಳು, ಎರಡು ಎತ್ತು, ಒಂದು ಎಮ್ಮೆಗೆ ಗಾಯಗಳಾಗಿವೆ. ಎಮ್ಮೆ ಕರುವೊಂದು ಅವಶೇಷಗಳಡಿ ಸಿಕ್ಕು ಸತ್ತಿದೆ. ಮನೆ ಮಾಲೀಕ ಚನ್ನಯ್ಯ ಅವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.<br /> <br /> ಘಟನಾ ಸ್ಥಳಕ್ಕೆ ಎಎಸ್ಐ ಎಸ್.ವೈ. ನಡವಿನಮನಿ, ಕುಳಗೇರಿ ಠಾಣೆಯ ಪೊಲೀಸ್ ಸಿಬ್ಬಂದಿ, ಪಶು ವೈದ್ಯಾಧಿಕಾರಿ ಡಾ. ಬೇನಾಳ ಭೇಟಿ ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.<br /> <br /> <strong>ಹಂಚಿಕೆ ಆಗದ `ಆಸರೆ~: </strong>ತಳಕವಾಡ ಸೇರಿದಂತೆ ಹಲವು ಪ್ರವಾಹ ಪೀಡಿತ ಗ್ರಾಮದ ಸಂತ್ರಸ್ತರಿಗಾಗಿ ನಿರ್ಮಿಸಲಾದ ಆಸರೆ ಮನೆಗಳು ಪೂರ್ಣಗೊಂಡಿವೆ. ಆದರೆ ಇದುವರೆಗೆ ಸರ್ಕಾರ ಮನೆಗಳನ್ನು ಹಂಚಿಕೆ ಮಾಡಿಲ್ಲ. ಇದೇ ಸಮಸ್ಯೆಗೆ ಕಾರಣ ಎಂಬುದು ಸಂತ್ರಸ್ತರ ಆರೋಪ.<br /> <br /> ಸತತ ನೆರೆಯಿಂದಾಗಿ ಮನೆಗಳು ಶಿಥಿಲಗೊಂಡಿವೆ. ಪರ್ಯಾಯ ವ್ಯವಸ್ಥೆ ಇಲ್ಲದೆ ಹಳೆಯ ದುರಾವಸ್ಥೆಯಲ್ಲಿರುವ ಮನೆಯಲ್ಲಿಯೇ ಬದುಕು ಸವೆಸಬೇಕಾಗಿದೆ. ಈಗಾಗಲೇ ಮನೆ ವಿತರಿಸುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ದೂರಿದರು.<br /> <br /> ನೆರೆಪೀಡಿತ ಪ್ರದೇಶಗಳನ್ನು 2005ಕ್ಕೂ ಮುಂಚೆ ಮುಳುಗಡೆ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿತ್ತು. ಆ ಹಿನ್ನೆಲೆಯಲ್ಲಿಯೇ ಹೊಸ ಮನೆಗಳನ್ನು ನಿರ್ಮಿಸಿದೆ. ಇದುವರೆಗೂ ಮನೆ ಹಂಚಿಕೆ ಮಾಡಿ, ಹಕ್ಕುಪತ್ರ ವಿತರಿಸಲು ನಿರಾಸಕ್ತಿ ತೋರುತ್ತಿದೆ ಎಂದು ಹೇಳಿದರು.<br /> <br /> ಇಲ್ಲಿನ ಹಳೆಯ ಮನೆಗಳು ಕುಸಿಯುವ ಭೀತಿಯಲ್ಲಿದ್ದು ಗ್ರಾಮಸ್ಥರು ಜೀವಾಪಾಯದ ಭೀತಿಯಲ್ಲಿದ್ದಾರೆ. ಸಿದ್ಧವಾಗಿರುವ ಹೊಸ ಮನೆಗಳ ಹಂಚಿಕೆಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಸೊಸೈಟಿ ಅಧ್ಯಕ್ಷ ಮಹಾದೇವಗೌಡ ರಾಮನಗೌಡ್ರ, ಮುರಗಯ್ಯ ಮೇಟಿ, ಈರಯ್ಯ ಮೂಗನೂರ, ಶೇಖರಯ್ಯ ಕಲ್ಲನ್ನವರ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆರೂರ:</strong> ಮಲಪ್ರಭಾ ನದಿ ತಟದ ನೆರೆ ಪೀಡಿತ ತಳಕವಾಡ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ಕುಸಿದ ಮನೆಯೊಳಗಿದ್ದ ಎಮ್ಮೆ ಕರು ಸತ್ತಿದ್ದು, ಅಪಾರ ಪ್ರಮಾಣದ ಬೆಳೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ.<br /> <br /> ಮಳೆಯಿಂದಾಗಿ ಚನ್ನಯ್ಯ ಮೂಗನೂರ ಅವರ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಮೂರು ಆಕಳು, ಎರಡು ಎತ್ತು, ಒಂದು ಎಮ್ಮೆಗೆ ಗಾಯಗಳಾಗಿವೆ. ಎಮ್ಮೆ ಕರುವೊಂದು ಅವಶೇಷಗಳಡಿ ಸಿಕ್ಕು ಸತ್ತಿದೆ. ಮನೆ ಮಾಲೀಕ ಚನ್ನಯ್ಯ ಅವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.<br /> <br /> ಘಟನಾ ಸ್ಥಳಕ್ಕೆ ಎಎಸ್ಐ ಎಸ್.ವೈ. ನಡವಿನಮನಿ, ಕುಳಗೇರಿ ಠಾಣೆಯ ಪೊಲೀಸ್ ಸಿಬ್ಬಂದಿ, ಪಶು ವೈದ್ಯಾಧಿಕಾರಿ ಡಾ. ಬೇನಾಳ ಭೇಟಿ ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.<br /> <br /> <strong>ಹಂಚಿಕೆ ಆಗದ `ಆಸರೆ~: </strong>ತಳಕವಾಡ ಸೇರಿದಂತೆ ಹಲವು ಪ್ರವಾಹ ಪೀಡಿತ ಗ್ರಾಮದ ಸಂತ್ರಸ್ತರಿಗಾಗಿ ನಿರ್ಮಿಸಲಾದ ಆಸರೆ ಮನೆಗಳು ಪೂರ್ಣಗೊಂಡಿವೆ. ಆದರೆ ಇದುವರೆಗೆ ಸರ್ಕಾರ ಮನೆಗಳನ್ನು ಹಂಚಿಕೆ ಮಾಡಿಲ್ಲ. ಇದೇ ಸಮಸ್ಯೆಗೆ ಕಾರಣ ಎಂಬುದು ಸಂತ್ರಸ್ತರ ಆರೋಪ.<br /> <br /> ಸತತ ನೆರೆಯಿಂದಾಗಿ ಮನೆಗಳು ಶಿಥಿಲಗೊಂಡಿವೆ. ಪರ್ಯಾಯ ವ್ಯವಸ್ಥೆ ಇಲ್ಲದೆ ಹಳೆಯ ದುರಾವಸ್ಥೆಯಲ್ಲಿರುವ ಮನೆಯಲ್ಲಿಯೇ ಬದುಕು ಸವೆಸಬೇಕಾಗಿದೆ. ಈಗಾಗಲೇ ಮನೆ ವಿತರಿಸುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ದೂರಿದರು.<br /> <br /> ನೆರೆಪೀಡಿತ ಪ್ರದೇಶಗಳನ್ನು 2005ಕ್ಕೂ ಮುಂಚೆ ಮುಳುಗಡೆ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿತ್ತು. ಆ ಹಿನ್ನೆಲೆಯಲ್ಲಿಯೇ ಹೊಸ ಮನೆಗಳನ್ನು ನಿರ್ಮಿಸಿದೆ. ಇದುವರೆಗೂ ಮನೆ ಹಂಚಿಕೆ ಮಾಡಿ, ಹಕ್ಕುಪತ್ರ ವಿತರಿಸಲು ನಿರಾಸಕ್ತಿ ತೋರುತ್ತಿದೆ ಎಂದು ಹೇಳಿದರು.<br /> <br /> ಇಲ್ಲಿನ ಹಳೆಯ ಮನೆಗಳು ಕುಸಿಯುವ ಭೀತಿಯಲ್ಲಿದ್ದು ಗ್ರಾಮಸ್ಥರು ಜೀವಾಪಾಯದ ಭೀತಿಯಲ್ಲಿದ್ದಾರೆ. ಸಿದ್ಧವಾಗಿರುವ ಹೊಸ ಮನೆಗಳ ಹಂಚಿಕೆಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಸೊಸೈಟಿ ಅಧ್ಯಕ್ಷ ಮಹಾದೇವಗೌಡ ರಾಮನಗೌಡ್ರ, ಮುರಗಯ್ಯ ಮೇಟಿ, ಈರಯ್ಯ ಮೂಗನೂರ, ಶೇಖರಯ್ಯ ಕಲ್ಲನ್ನವರ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>