<p><strong>ಬಾಗಲಕೋಟೆ: </strong>ಮುಳುಗಡೆ ಸಂತ್ರಸ್ತರಿಗೆ ನವನಗರ ಯೂನಿಟ್ 1ರಲ್ಲಿ ನಿವೇಶನ ಹಂಚಿಕೆ ಮಾಡಿದ ಮಾದರಿಯಲ್ಲೇ ಯುನಿಟ್ 2ರಲ್ಲೂ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಆಗ್ರಹಿಸಿದೆ.<br /> <br /> ಯೂನಿಟ್ 2ರಲ್ಲಿ ನಿವೇಶನ ಹಂಚಿಕೆ ಸಂಬಂಧ ಬಿಟಿಡಿಎ ಸಂತ್ರಸ್ತರಿಗೆ ನೀಡಿರುವ ತಿಳಿವಳಿಕೆ ಪತ್ರದಲ್ಲಿ ಸಂತ್ರಸ್ತರು ಕೇಳಿದ ನಿವೇಶನಗಳನ್ನು ಮಂಜೂರು ಮಾಡಿಲ್ಲದಿರುವುದರಿಂದ ಆ ನಿವೇಶನ ಒಪ್ಪಿಗೆಯಿಲ್ಲ. ಕಾರಣ ಇದೇ 3ರಂದು ತಿಳಿವಳಿಕೆ ಪತ್ರವನ್ನು ಬಿಟಿಡಿಎಗೆ ಸಾಮೂಹಿಕವಾಗಿ ಹಿಂತಿರುಗಿಸುವುದಾಗಿ ಸಮಿತಿ ಅಧ್ಯಕ್ಷ ಸಂಗಯ್ಯ ಸರಗಣಾಚಾರಿ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.<br /> <br /> ಯೂನಿಟ್ 2ರ ವ್ಯಾಪ್ತಿಯಲ್ಲಿ ಬರುವ 3,170 ಸಂತ್ರಸ್ತರು ಅಂದು ಬೆಳಗ್ಗೆ 10ಕ್ಕೆ ಹಳೆನಗರದ ವಲ್ಲಭಬಾಯಿ ಚೌಕದಿಂದ ಉಪವಿಭಾಗಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ಬಳಿಕ ವಾಹನಗಳ ಮೂಲಕ ಬಿಟಿಡಿಎ ಕಚೇರಿಗೆ ತೆರಳಿ ತಿಳಿವಳಿಕೆ ಪತ್ರವನ್ನು ಮರಳಿಸುವುದಾಗಿ ಹೇಳಿದರು.<br /> <br /> ಯೂನಿಟ್ 1ರಲ್ಲಿ ಸಂತ್ರಸ್ತರಿಗೆ ಮತ್ತು ಬಾಡಿಗೆದಾರರಿಗೆ ಕೇಳಿದ ನಿವೇಶನಗಳನ್ನು ಕೊಡಲಾಗಿದೆ. ಅವರಂತೆಯೇ ನಾವೂ ಸಂತ್ರಸ್ತರಾಗಿರುವುದರಿಂದ ಸಂತ್ರಸ್ತರಲ್ಲಿ ತಾರತಮ್ಯ ಮಾಡದೇ ಕೇಳಿದ ನಿವೇಶನಗಳನ್ನು ಮಂಜೂರು ಮಾಡಬೇಕು ಇಲ್ಲವಾದರೆ ಹೋರಾಟದ ಹಾದಿ ಹಿಡಿಯುವುದಾಗಿ ಅವರು ಎಚ್ಚರಿಕೆ ನೀಡಿದರು.<br /> <br /> ಯೂನಿಟ್ 1ರಲ್ಲಿ ಸಂತ್ರಸ್ತರಿಗೆ ನೀಡಿದ ಮಾದರಿಯಲ್ಲೇ ಯೂನಿಟ್ 2ರಲ್ಲಿ ಸಂತ್ರಸ್ತರಿಗೆ ನಿವೇಶನ ನೀಡುವಂತೆ ಪುನರ್ವಸತಿ ಆಯುಕ್ತ, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಮಾನವಹಕ್ಕು ಆಯೋಗ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಶಾಸಕರಿಗೆ ಮನವಿ ಮಾಡಲಾಗಿದೆ. ಇದುವರೆಗೆ ಯಾವುದೇ ಭರವಸೆ ಸಿಕ್ಕಿಲ್ಲ ಎಂದರು.<br /> <br /> 521ರಿಂದ 523 ಮತ್ತು 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಕೆಲವು ದೇವಸ್ಥಾನಗಳನ್ನು ಸ್ವಾಧೀನಪಡಿಸಿಕೊಂಡಿರುವುದಿಲ್ಲ, ಅವುಗಳನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ಹಣ ಮತ್ತು ನಿವೇಶನವನ್ನು ಆ ವಾರ್ಡಿನ ಜನ ಇರುವ ಸೆಕ್ಟರ್ನಲ್ಲಿ ಹಂಚಿಕೆ ಮಾಡಬೇಕು ಎಂದರು.<br /> ಯೂನಿಟ್ 2ರಲ್ಲಿ ಪ್ರಮುಖ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಇದರಲ್ಲಿ ಬರುವ ಸಂತ್ರಸ್ತರು ಮತ್ತು ಹೋರಾಟ ಸಮಿತಿಯೊಂದಿಗೆ ಚರ್ಚಿಸಬೇಕು ಎಂದು ಹೇಳಿದರು.<br /> <br /> ಆಲಮಟ್ಟಿ ಅಣೆಕಟ್ಟೆಯನ್ನು 524 ಮೀಟರ್ ವರೆಗೆ ಎತ್ತರಿಸಲು ಕೃಷ್ಣಾ ನ್ಯಾಯಾಧಿಕರಣ ತೀರ್ಪು ನೀಡಿರುವ ಕಾರಣ ಬಾಗಲಕೋಟೆ ಪಟ್ಟಣದ ಸಂಪೂರ್ಣ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಬೇಕು ಎಂದರು.<br /> <br /> 521ರಿಂದ 523 ಮತ್ತು 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನದಾರರಿಗೂ ನವನಗರದಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.<br /> <br /> ಕೇಂದ್ರ ಸರ್ಕಾರದ ಹೊಸ ಭೂಸ್ವಾಧೀನ ಕಾಯ್ದೆಯನ್ನು 521ರಿಂದ 523 ಮತ್ತು 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಸಂತ್ರಸ್ತರಿಗೆ ಅನ್ವಯಿಸಬೇಕು ಎಂದು ಒತ್ತಾಯಿಸಿದರು.<br /> <br /> ಸಮಿತಿ ಕಾರ್ಯಾಧ್ಯಕ್ಷ ಸದಾನಂದ ನಾರಾ, ಪ್ರಧಾನ ಕಾರ್ಯದರ್ಶಿ ಸಂಗಮೇಶ ಹೊಸಮನಿ, ಉಪಾಧ್ಯಕ್ಷರಾದ ಸುರೇಶ ಕುದರಿಕಾರ, ಗುಂಡೂರಾವ್ ಸಿಂಧೆ, ಕಾರ್ಯದರ್ಶಿ ಬಾಷಾಸಾಬ ಹೊನ್ಯಾಳ, ಶರಣಪ್ಪ ಕೆರೂರ, ಸಂಘಟನಾ ಕಾರ್ಯದರ್ಶಿ ಬಸವರಾಜ ಕಟಗೇರಿ, ಮಂಜುನಾಥ ಏಳೆಮ್ಮಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ: </strong>ಮುಳುಗಡೆ ಸಂತ್ರಸ್ತರಿಗೆ ನವನಗರ ಯೂನಿಟ್ 1ರಲ್ಲಿ ನಿವೇಶನ ಹಂಚಿಕೆ ಮಾಡಿದ ಮಾದರಿಯಲ್ಲೇ ಯುನಿಟ್ 2ರಲ್ಲೂ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಆಗ್ರಹಿಸಿದೆ.<br /> <br /> ಯೂನಿಟ್ 2ರಲ್ಲಿ ನಿವೇಶನ ಹಂಚಿಕೆ ಸಂಬಂಧ ಬಿಟಿಡಿಎ ಸಂತ್ರಸ್ತರಿಗೆ ನೀಡಿರುವ ತಿಳಿವಳಿಕೆ ಪತ್ರದಲ್ಲಿ ಸಂತ್ರಸ್ತರು ಕೇಳಿದ ನಿವೇಶನಗಳನ್ನು ಮಂಜೂರು ಮಾಡಿಲ್ಲದಿರುವುದರಿಂದ ಆ ನಿವೇಶನ ಒಪ್ಪಿಗೆಯಿಲ್ಲ. ಕಾರಣ ಇದೇ 3ರಂದು ತಿಳಿವಳಿಕೆ ಪತ್ರವನ್ನು ಬಿಟಿಡಿಎಗೆ ಸಾಮೂಹಿಕವಾಗಿ ಹಿಂತಿರುಗಿಸುವುದಾಗಿ ಸಮಿತಿ ಅಧ್ಯಕ್ಷ ಸಂಗಯ್ಯ ಸರಗಣಾಚಾರಿ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.<br /> <br /> ಯೂನಿಟ್ 2ರ ವ್ಯಾಪ್ತಿಯಲ್ಲಿ ಬರುವ 3,170 ಸಂತ್ರಸ್ತರು ಅಂದು ಬೆಳಗ್ಗೆ 10ಕ್ಕೆ ಹಳೆನಗರದ ವಲ್ಲಭಬಾಯಿ ಚೌಕದಿಂದ ಉಪವಿಭಾಗಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ಬಳಿಕ ವಾಹನಗಳ ಮೂಲಕ ಬಿಟಿಡಿಎ ಕಚೇರಿಗೆ ತೆರಳಿ ತಿಳಿವಳಿಕೆ ಪತ್ರವನ್ನು ಮರಳಿಸುವುದಾಗಿ ಹೇಳಿದರು.<br /> <br /> ಯೂನಿಟ್ 1ರಲ್ಲಿ ಸಂತ್ರಸ್ತರಿಗೆ ಮತ್ತು ಬಾಡಿಗೆದಾರರಿಗೆ ಕೇಳಿದ ನಿವೇಶನಗಳನ್ನು ಕೊಡಲಾಗಿದೆ. ಅವರಂತೆಯೇ ನಾವೂ ಸಂತ್ರಸ್ತರಾಗಿರುವುದರಿಂದ ಸಂತ್ರಸ್ತರಲ್ಲಿ ತಾರತಮ್ಯ ಮಾಡದೇ ಕೇಳಿದ ನಿವೇಶನಗಳನ್ನು ಮಂಜೂರು ಮಾಡಬೇಕು ಇಲ್ಲವಾದರೆ ಹೋರಾಟದ ಹಾದಿ ಹಿಡಿಯುವುದಾಗಿ ಅವರು ಎಚ್ಚರಿಕೆ ನೀಡಿದರು.<br /> <br /> ಯೂನಿಟ್ 1ರಲ್ಲಿ ಸಂತ್ರಸ್ತರಿಗೆ ನೀಡಿದ ಮಾದರಿಯಲ್ಲೇ ಯೂನಿಟ್ 2ರಲ್ಲಿ ಸಂತ್ರಸ್ತರಿಗೆ ನಿವೇಶನ ನೀಡುವಂತೆ ಪುನರ್ವಸತಿ ಆಯುಕ್ತ, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಮಾನವಹಕ್ಕು ಆಯೋಗ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಶಾಸಕರಿಗೆ ಮನವಿ ಮಾಡಲಾಗಿದೆ. ಇದುವರೆಗೆ ಯಾವುದೇ ಭರವಸೆ ಸಿಕ್ಕಿಲ್ಲ ಎಂದರು.<br /> <br /> 521ರಿಂದ 523 ಮತ್ತು 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಕೆಲವು ದೇವಸ್ಥಾನಗಳನ್ನು ಸ್ವಾಧೀನಪಡಿಸಿಕೊಂಡಿರುವುದಿಲ್ಲ, ಅವುಗಳನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ಹಣ ಮತ್ತು ನಿವೇಶನವನ್ನು ಆ ವಾರ್ಡಿನ ಜನ ಇರುವ ಸೆಕ್ಟರ್ನಲ್ಲಿ ಹಂಚಿಕೆ ಮಾಡಬೇಕು ಎಂದರು.<br /> ಯೂನಿಟ್ 2ರಲ್ಲಿ ಪ್ರಮುಖ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಇದರಲ್ಲಿ ಬರುವ ಸಂತ್ರಸ್ತರು ಮತ್ತು ಹೋರಾಟ ಸಮಿತಿಯೊಂದಿಗೆ ಚರ್ಚಿಸಬೇಕು ಎಂದು ಹೇಳಿದರು.<br /> <br /> ಆಲಮಟ್ಟಿ ಅಣೆಕಟ್ಟೆಯನ್ನು 524 ಮೀಟರ್ ವರೆಗೆ ಎತ್ತರಿಸಲು ಕೃಷ್ಣಾ ನ್ಯಾಯಾಧಿಕರಣ ತೀರ್ಪು ನೀಡಿರುವ ಕಾರಣ ಬಾಗಲಕೋಟೆ ಪಟ್ಟಣದ ಸಂಪೂರ್ಣ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಬೇಕು ಎಂದರು.<br /> <br /> 521ರಿಂದ 523 ಮತ್ತು 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನದಾರರಿಗೂ ನವನಗರದಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.<br /> <br /> ಕೇಂದ್ರ ಸರ್ಕಾರದ ಹೊಸ ಭೂಸ್ವಾಧೀನ ಕಾಯ್ದೆಯನ್ನು 521ರಿಂದ 523 ಮತ್ತು 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಸಂತ್ರಸ್ತರಿಗೆ ಅನ್ವಯಿಸಬೇಕು ಎಂದು ಒತ್ತಾಯಿಸಿದರು.<br /> <br /> ಸಮಿತಿ ಕಾರ್ಯಾಧ್ಯಕ್ಷ ಸದಾನಂದ ನಾರಾ, ಪ್ರಧಾನ ಕಾರ್ಯದರ್ಶಿ ಸಂಗಮೇಶ ಹೊಸಮನಿ, ಉಪಾಧ್ಯಕ್ಷರಾದ ಸುರೇಶ ಕುದರಿಕಾರ, ಗುಂಡೂರಾವ್ ಸಿಂಧೆ, ಕಾರ್ಯದರ್ಶಿ ಬಾಷಾಸಾಬ ಹೊನ್ಯಾಳ, ಶರಣಪ್ಪ ಕೆರೂರ, ಸಂಘಟನಾ ಕಾರ್ಯದರ್ಶಿ ಬಸವರಾಜ ಕಟಗೇರಿ, ಮಂಜುನಾಥ ಏಳೆಮ್ಮಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>