<p><strong>ಬಳ್ಳಾರಿ</strong>: ಬ್ಯಾಂಕ್ನಿಂದ ₹5 ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ನಗರದ ವ್ಯಾಪಾರಿಯೊಬ್ಬರಿಗೆ ₹15 ಲಕ್ಷ ವಂಚನೆ ಮಾಡಿರುವುದು ಬುಧವಾರ ಬೆಳಕಿಗೆ ಬಂದಿದೆ.</p>.<p>ನಗರದ ಸಿಇಎನ್ ಠಾಣೆಯಲ್ಲಿ ಈ ಕುರಿತುಪ್ರಕರಣ ದಾಖಲಾಗಿದೆ. ಕೋಯಮತ್ತೂರು ನಿವಾಸಿಗಳಾದ ಸತೀಶ್ ರಾವ್ ಮಟ್ಟು ಮತ್ತು ಶಿವರಾಜಕುಮಾರ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. </p>.<p>ಬಳ್ಳಾರಿಯ ವ್ಯಾಪಾರಿಗೆ ಬೆಂಗಳೂರಿನಲ್ಲಿ ಸತೀಶ್ ರಾವ್ ಮಟ್ಟು ಪರಿಚಯವಾಗಿದ್ದರು. ತನಗೆ ಬ್ಯಾಂಕ್ವೊಂದರ ಅಧಿಕಾರಿ ಪರಿಚಯವಿದ್ದು ಅವರಿಂದ ₹5 ಕೋಟಿ ಕೊಡಿಸುವುದಾಗಿ ಸತೀಶ್ ಅವರನ್ನು ನಂಬಿಸಿದ್ದ. ಆತನ ಮಾತು ನಂಬಿದ ವ್ಯಾಪಾರಿ, ಬಳ್ಳಾರಿಗೆ ಬರಲು ತಿಳಿಸಿದ್ದರು. ಅದರಂತೆ, ಶಿವರಾಜ್ಕುಮಾರ್ ಎಂಬುವವರನ್ನು ತನ್ನೊಂದಿಗೆ ಬಳ್ಳಾರಿಗೆ ಕರೆತಂದಿದ್ದ ಸತೀಶ್, ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿದ್ದ ಎನ್ನಲಾಗಿದೆ. </p>.<p>ಸಾಲ ಕೊಡಿಸಲು ₹15 ಲಕ್ಷ ಪಡೆದಿದ್ದು ಅಲ್ಲದೇ ವ್ಯಾಪಾರಿಯ ಬ್ಯಾಂಕ್ ಖಾತೆಯೊಂದರ ವಿವರಗಳನ್ನು ಸತೀಶ್ ಪಡೆದುಕೊಂಡಿದ್ದ. ಆ ಖಾತೆ ಮೂಲಕ ಸತೀಶ್ ಅಕ್ರಮವಾಗಿ ₹3.74 ಕೋಟಿ ವ್ಯವಹಾರವನ್ನು ವ್ಯಾಪಾರಿ ಗಮನಕ್ಕೆ ಬಾರದಂತೆ ನಡೆಸಿದ್ದಾನೆ ಎನ್ನಲಾಗಿದೆ.</p>.<p>ಇದೆಲ್ಲದರ ಬಳಿಕ ಸಾಲ ಕೊಡಿಸದೇ ವಂಚಿಸಿದ್ದಾನೆ. ವಂಚನೆಗೊಳಗಾದ ವ್ಯಾಪಾರಿ ಈಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ಬ್ಯಾಂಕ್ನಿಂದ ₹5 ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ನಗರದ ವ್ಯಾಪಾರಿಯೊಬ್ಬರಿಗೆ ₹15 ಲಕ್ಷ ವಂಚನೆ ಮಾಡಿರುವುದು ಬುಧವಾರ ಬೆಳಕಿಗೆ ಬಂದಿದೆ.</p>.<p>ನಗರದ ಸಿಇಎನ್ ಠಾಣೆಯಲ್ಲಿ ಈ ಕುರಿತುಪ್ರಕರಣ ದಾಖಲಾಗಿದೆ. ಕೋಯಮತ್ತೂರು ನಿವಾಸಿಗಳಾದ ಸತೀಶ್ ರಾವ್ ಮಟ್ಟು ಮತ್ತು ಶಿವರಾಜಕುಮಾರ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. </p>.<p>ಬಳ್ಳಾರಿಯ ವ್ಯಾಪಾರಿಗೆ ಬೆಂಗಳೂರಿನಲ್ಲಿ ಸತೀಶ್ ರಾವ್ ಮಟ್ಟು ಪರಿಚಯವಾಗಿದ್ದರು. ತನಗೆ ಬ್ಯಾಂಕ್ವೊಂದರ ಅಧಿಕಾರಿ ಪರಿಚಯವಿದ್ದು ಅವರಿಂದ ₹5 ಕೋಟಿ ಕೊಡಿಸುವುದಾಗಿ ಸತೀಶ್ ಅವರನ್ನು ನಂಬಿಸಿದ್ದ. ಆತನ ಮಾತು ನಂಬಿದ ವ್ಯಾಪಾರಿ, ಬಳ್ಳಾರಿಗೆ ಬರಲು ತಿಳಿಸಿದ್ದರು. ಅದರಂತೆ, ಶಿವರಾಜ್ಕುಮಾರ್ ಎಂಬುವವರನ್ನು ತನ್ನೊಂದಿಗೆ ಬಳ್ಳಾರಿಗೆ ಕರೆತಂದಿದ್ದ ಸತೀಶ್, ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿದ್ದ ಎನ್ನಲಾಗಿದೆ. </p>.<p>ಸಾಲ ಕೊಡಿಸಲು ₹15 ಲಕ್ಷ ಪಡೆದಿದ್ದು ಅಲ್ಲದೇ ವ್ಯಾಪಾರಿಯ ಬ್ಯಾಂಕ್ ಖಾತೆಯೊಂದರ ವಿವರಗಳನ್ನು ಸತೀಶ್ ಪಡೆದುಕೊಂಡಿದ್ದ. ಆ ಖಾತೆ ಮೂಲಕ ಸತೀಶ್ ಅಕ್ರಮವಾಗಿ ₹3.74 ಕೋಟಿ ವ್ಯವಹಾರವನ್ನು ವ್ಯಾಪಾರಿ ಗಮನಕ್ಕೆ ಬಾರದಂತೆ ನಡೆಸಿದ್ದಾನೆ ಎನ್ನಲಾಗಿದೆ.</p>.<p>ಇದೆಲ್ಲದರ ಬಳಿಕ ಸಾಲ ಕೊಡಿಸದೇ ವಂಚಿಸಿದ್ದಾನೆ. ವಂಚನೆಗೊಳಗಾದ ವ್ಯಾಪಾರಿ ಈಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>