<p><strong>ಹೊಸಪೇಟೆ:</strong> ಇಲ್ಲಿನ ರೋಟರಿ ಕ್ಲಬ್ನಲ್ಲಿ ಆಯೋಜಿಸಿದ್ದ ಉಚಿತ ಶಿಬಿರದಲ್ಲಿ 200 ಜನರ ಹೃದಯದ ತಪಾಸಣೆ ಮಾಡಿಸಿಕೊಂಡರು.</p>.<p>19 ವಯಸ್ಕರು, ನಾಲ್ವರು ಮಕ್ಕಳಿಗೆ ಶಸ್ತ್ರ ಚಿಕಿತ್ಸೆಗೆ ವೈದ್ಯರು ಸಲಹೆ ಮಾಡಿದರು. ಇದಕ್ಕೂ ಮುನ್ನ ಶಿಬಿರಕ್ಕೆ ಚಾಲನೆ ನೀಡಿದ ಡಾ. ಎಸ್. ರಿಚರ್ಡ್ಸ್, ’ಧೂಮಪಾನ, ಮದ್ಯಪಾನ, ಆನುವಂಶೀಯತೆಯಿಂದ ಹೃದಯ, ಮಧುಮೇಹ ಕಾಯಿಲೆಗಳು ಬರುತ್ತವೆ. ಈ ಚಟಗಳಿಂದ ದೂರವಿರಬೇಕು. ನಿತ್ಯ ವ್ಯಾಯಾಮ ಮಾಡಿದರೆ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬಹುದು‘ ಎಂದು ಹೇಳಿದರು.</p>.<p>’ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದ ಹುಟ್ಟಿದ ಮಕ್ಕಳಲ್ಲಿಯೂ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದೇ ಶಿಬಿರದಲ್ಲಿ ಮೂರು ವರ್ಷಕ್ಕಿಂತ ಅನೇಕ ಮಕ್ಕಳು ಬಂದಿದ್ದಾರೆ‘ ಎಂದರು.</p>.<p>ವೈದ್ಯರಾದ ಮಧುಸೂದನ್, ಎಂ.ವಿ. ಜಾಲಿ, ನಿಶಿತ್, ಪ್ರಸಾದ್, ರೋಟರಿ ಕ್ಲಬ್ ಅಧ್ಯಕ್ಷ ಡಾ.ಪಿ. ಮುನಿವಾಸುದೇವ ರೆಡ್ಡಿ, ಕಾರ್ಯದರ್ಶಿ ಕೆ.ಎಸ್. ಕೃಷ್ಣಮೂರ್ತಿ, ಸಂಯೋಜಕ ಈಶ್ವರ,ಶಿಬಿರದ ಅಧ್ಯಕ್ಷ ಕೆ. ದೀಪಕ್ ಕುಮಾರ ಇದ್ದರು. ರೋಟರಿ ಕ್ಲಬ್ ಹಾಗೂ ಕೆ.ಎಲ್.ಇ. ಸಂಸ್ಥೆ ಸಹಭಾಗಿತ್ವದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ಇಲ್ಲಿನ ರೋಟರಿ ಕ್ಲಬ್ನಲ್ಲಿ ಆಯೋಜಿಸಿದ್ದ ಉಚಿತ ಶಿಬಿರದಲ್ಲಿ 200 ಜನರ ಹೃದಯದ ತಪಾಸಣೆ ಮಾಡಿಸಿಕೊಂಡರು.</p>.<p>19 ವಯಸ್ಕರು, ನಾಲ್ವರು ಮಕ್ಕಳಿಗೆ ಶಸ್ತ್ರ ಚಿಕಿತ್ಸೆಗೆ ವೈದ್ಯರು ಸಲಹೆ ಮಾಡಿದರು. ಇದಕ್ಕೂ ಮುನ್ನ ಶಿಬಿರಕ್ಕೆ ಚಾಲನೆ ನೀಡಿದ ಡಾ. ಎಸ್. ರಿಚರ್ಡ್ಸ್, ’ಧೂಮಪಾನ, ಮದ್ಯಪಾನ, ಆನುವಂಶೀಯತೆಯಿಂದ ಹೃದಯ, ಮಧುಮೇಹ ಕಾಯಿಲೆಗಳು ಬರುತ್ತವೆ. ಈ ಚಟಗಳಿಂದ ದೂರವಿರಬೇಕು. ನಿತ್ಯ ವ್ಯಾಯಾಮ ಮಾಡಿದರೆ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬಹುದು‘ ಎಂದು ಹೇಳಿದರು.</p>.<p>’ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದ ಹುಟ್ಟಿದ ಮಕ್ಕಳಲ್ಲಿಯೂ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದೇ ಶಿಬಿರದಲ್ಲಿ ಮೂರು ವರ್ಷಕ್ಕಿಂತ ಅನೇಕ ಮಕ್ಕಳು ಬಂದಿದ್ದಾರೆ‘ ಎಂದರು.</p>.<p>ವೈದ್ಯರಾದ ಮಧುಸೂದನ್, ಎಂ.ವಿ. ಜಾಲಿ, ನಿಶಿತ್, ಪ್ರಸಾದ್, ರೋಟರಿ ಕ್ಲಬ್ ಅಧ್ಯಕ್ಷ ಡಾ.ಪಿ. ಮುನಿವಾಸುದೇವ ರೆಡ್ಡಿ, ಕಾರ್ಯದರ್ಶಿ ಕೆ.ಎಸ್. ಕೃಷ್ಣಮೂರ್ತಿ, ಸಂಯೋಜಕ ಈಶ್ವರ,ಶಿಬಿರದ ಅಧ್ಯಕ್ಷ ಕೆ. ದೀಪಕ್ ಕುಮಾರ ಇದ್ದರು. ರೋಟರಿ ಕ್ಲಬ್ ಹಾಗೂ ಕೆ.ಎಲ್.ಇ. ಸಂಸ್ಥೆ ಸಹಭಾಗಿತ್ವದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>