ಸೋನಿಯಾ ರಾಹುಲ್ ಮೇಲೂ ಕೇಸ್ಗಳಿವೆ...
ಶಾಸಕ ಜನಾರ್ದನ ರೆಡ್ಡಿ ತಮ್ಮ ವಿರುದ್ಧದ ಪ್ರಕರಣಗಳಿಗೆ ಹೆದರಿ ಬಿಜೆಪಿ ಸೇರಿದ್ದಾರೆ ಎಂಬ ಸಚಿವ ಬಿ. ನಾಗೇಂದ್ರ ಮಾತಿಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು ‘ಎಲ್ಲರ ಮೇಲೂ ಕೇಸುಗಳಿವೆ. ಆದರೆ ಅವರು ಅಪರಾಧಿಯೇ ಎಂಬುದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಈಗ ಯಾರ ಮೇಲೆ ಪ್ರಕರಣಗಳಿಲ್ಲ? ರಾಹುಲ್ ಗಾಂಧಿ ಸೋನಿಯಾ ಗಾಂಧಿ ಡಿ.ಕೆ ಶಿವಕುಮಾರ್ ಸಚಿವ ಬಿ. ನಾಗೇಂದ್ರ ಅವರ ಮೇಲೂ ಕೇಸುಗಳಿವೆ. ನ್ಯಾಯಾಲಯ ಶಿಕ್ಷೆ ಕೊಡುವವರೆಗೆ ಯಾರನ್ನೂ ತಪ್ಪಿತಸ್ಥರು ಎಂದು ಹೇಳಲಾಗದು ಎಂದರು.