ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗೆಲುವಿಗೆ ನೆರವಾಗಲಿವೆ 3 ಶಕ್ತಿಗಳು: ಬಿ. ಶ್ರೀರಾಮುಲು

ನರೇಂದ್ರ ಮೋದಿ, ಜೆಡಿಎಸ್‌ ಮೈತ್ರಿ, ರೆಡ್ಡಿ ಪಕ್ಷ ವಿಲೀನ ವರದಾನವೆಂದ ಶ್ರೀರಾಮುಲು
Published : 31 ಮಾರ್ಚ್ 2024, 15:11 IST
Last Updated : 31 ಮಾರ್ಚ್ 2024, 15:11 IST
ಫಾಲೋ ಮಾಡಿ
Comments
ಸೋನಿಯಾ ರಾಹುಲ್‌ ಮೇಲೂ ಕೇಸ್‌ಗಳಿವೆ...
ಶಾಸಕ ಜನಾರ್ದನ ರೆಡ್ಡಿ ತಮ್ಮ ವಿರುದ್ಧದ ಪ್ರಕರಣಗಳಿಗೆ ಹೆದರಿ ಬಿಜೆಪಿ ಸೇರಿದ್ದಾರೆ ಎಂಬ ಸಚಿವ ಬಿ. ನಾಗೇಂದ್ರ ಮಾತಿಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು ‘ಎಲ್ಲರ ಮೇಲೂ ಕೇಸುಗಳಿವೆ. ಆದರೆ ಅವರು ಅಪರಾಧಿಯೇ ಎಂಬುದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಈಗ ಯಾರ ಮೇಲೆ ಪ್ರಕರಣಗಳಿಲ್ಲ? ರಾಹುಲ್ ಗಾಂಧಿ ಸೋನಿಯಾ ಗಾಂಧಿ ಡಿ.ಕೆ ಶಿವಕುಮಾರ್‌ ಸಚಿವ ಬಿ. ನಾಗೇಂದ್ರ ಅವರ ಮೇಲೂ ಕೇಸುಗಳಿವೆ. ನ್ಯಾಯಾಲಯ ಶಿಕ್ಷೆ ಕೊಡುವವರೆಗೆ ಯಾರನ್ನೂ ತಪ್ಪಿತಸ್ಥರು ಎಂದು ಹೇಳಲಾಗದು ಎಂದರು. 
ಅರುಣಾ ಲಕ್ಷ್ಮೀ ಪ್ರಚಾರ ಏ. 4ರಿಂದ 
ಶಾಸಕ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರು ಬಿಜೆಪಿ ಸಮಾರಂಭಕ್ಕೆ ಬಾರದೇ ಇರುವ ಬಗ್ಗೆ ಕೇಳಲಾದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಶ್ರೀರಾಮುಲು  ‘ಅರುಣಾ ಲಕ್ಷ್ಮೀ ಅವರು ಅನಿವಾರ್ಯ ಕಾರಣದಿಂದ ಹೊರಗಡೆ ಹೋಗಿದ್ದಾರೆ. ಏ. 4 ರಿಂದ ಬಳ್ಳಾರಿಯಲ್ಲಿ ನಮ್ಮ ಜೊತೆಗೆ ಪ್ರಚಾರಕ್ಕೆ ಬರುತ್ತಾರೆ. ಕೆಆರ್‌ಪಿಪಿ ಕಾರ್ಯಕರ್ತರೂ ಬಿಜೆಪಿ ಪರ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT