<p><strong>ತೆಕ್ಕಲಕೋಟೆ:</strong> ಸಮೀಪದ ಸಿರಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳೂರು ಗ್ರಾಮದ ಬಳಿಯ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ ಭತ್ತ ತುಂಬಿದ ಚೀಲಗಳ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.</p>.<p>ಖಚಿತ ಮಾಹಿತಿ ಮೇರೆಗೆ ಸಿರುಗುಪ್ಪ ಪೊಲೀಸ್ ಉಪಾಧೀಕ್ಷಕ ವೆಂಕಟೇಶ್, ತೆಕ್ಕಲಕೋಟೆ ವೃತ್ತ ನಿರೀಕ್ಷಕ ಸುಂದರೇಶ್ ಕೆ ಹೊಳೆಣ್ಣವರ್, ಪಿಎಸ್ಐ (ಕಾ-ಸು) ಶಾಂತಮೂರ್ತಿ, ಸಿರಿಗೇರಿ ಠಾಣೆಯ ಪಿಎಸ್ಐ (ತನಿಖೆ) ಶ್ರೀನಿವಾಸ ಇವರ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿ ಆರೋಪಿ ಚಿತ್ರದುರ್ಗ ಜಿಲ್ಲೆಯ ಚಿಪ್ಪಿನಕೆರೆ ಗ್ರಾಮದ ಮುದ್ದುರಾಜನನ್ನು ಬಂಧಿಸಿ ₹ 8 ಲಕ್ಷ ಮೌಲ್ಯದ 330 ಚೀಲ ಭತ್ತ ತುಂಬಿದ ಚೀಲ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಕಳೆದ ವರ್ಷ ಜುಲೈ 23ರಂದು ಪ್ರಕರಣ ದಾಖಲಾಗಿತ್ತು.</p>.<p>ದಾಳಿಯ ಸಂದರ್ಭದಲ್ಲಿ ತೆಕ್ಕಲಕೋಟೆ ಪೊಲೀಸರಾದ ನಾಗರಾಜ, ರಾಮದಾಸ್, ಅಯ್ಯಪ್ಪ, ಬಿ, ಕಾಸೀಮಸ್ತಾ ವಾಲೀಕಾರ್, ಚಂದ್ರಶೇಖರ್ ಸ್ವಾಮಿ ಎಆರ್ಎಸ್ಐ ಹಾಗು ಮೋಕಾ ಪೊಲೀಸ್ ಠಾಣೆಯ ಅನ್ವರ್ ಬಾಷಾ, ಸಿರಿಗೇರಿ ಪೊಲೀಸ್ ಠಾಣೆಯ ರಾಮಾಂಜಿನಿ, ವಿನೋದ್ಗೌಡ, ಅಮರೇಶ, ಪ್ರಭಾಕರ ಭಾಗವಹಿಸಿದ್ದರು.</p>.<p>ಪೊಲೀಸರ ಈ ಕಾರ್ಯವನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ:</strong> ಸಮೀಪದ ಸಿರಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳೂರು ಗ್ರಾಮದ ಬಳಿಯ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ ಭತ್ತ ತುಂಬಿದ ಚೀಲಗಳ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.</p>.<p>ಖಚಿತ ಮಾಹಿತಿ ಮೇರೆಗೆ ಸಿರುಗುಪ್ಪ ಪೊಲೀಸ್ ಉಪಾಧೀಕ್ಷಕ ವೆಂಕಟೇಶ್, ತೆಕ್ಕಲಕೋಟೆ ವೃತ್ತ ನಿರೀಕ್ಷಕ ಸುಂದರೇಶ್ ಕೆ ಹೊಳೆಣ್ಣವರ್, ಪಿಎಸ್ಐ (ಕಾ-ಸು) ಶಾಂತಮೂರ್ತಿ, ಸಿರಿಗೇರಿ ಠಾಣೆಯ ಪಿಎಸ್ಐ (ತನಿಖೆ) ಶ್ರೀನಿವಾಸ ಇವರ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿ ಆರೋಪಿ ಚಿತ್ರದುರ್ಗ ಜಿಲ್ಲೆಯ ಚಿಪ್ಪಿನಕೆರೆ ಗ್ರಾಮದ ಮುದ್ದುರಾಜನನ್ನು ಬಂಧಿಸಿ ₹ 8 ಲಕ್ಷ ಮೌಲ್ಯದ 330 ಚೀಲ ಭತ್ತ ತುಂಬಿದ ಚೀಲ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಕಳೆದ ವರ್ಷ ಜುಲೈ 23ರಂದು ಪ್ರಕರಣ ದಾಖಲಾಗಿತ್ತು.</p>.<p>ದಾಳಿಯ ಸಂದರ್ಭದಲ್ಲಿ ತೆಕ್ಕಲಕೋಟೆ ಪೊಲೀಸರಾದ ನಾಗರಾಜ, ರಾಮದಾಸ್, ಅಯ್ಯಪ್ಪ, ಬಿ, ಕಾಸೀಮಸ್ತಾ ವಾಲೀಕಾರ್, ಚಂದ್ರಶೇಖರ್ ಸ್ವಾಮಿ ಎಆರ್ಎಸ್ಐ ಹಾಗು ಮೋಕಾ ಪೊಲೀಸ್ ಠಾಣೆಯ ಅನ್ವರ್ ಬಾಷಾ, ಸಿರಿಗೇರಿ ಪೊಲೀಸ್ ಠಾಣೆಯ ರಾಮಾಂಜಿನಿ, ವಿನೋದ್ಗೌಡ, ಅಮರೇಶ, ಪ್ರಭಾಕರ ಭಾಗವಹಿಸಿದ್ದರು.</p>.<p>ಪೊಲೀಸರ ಈ ಕಾರ್ಯವನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>