ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಹಾಗೂ ಆ ಪಕ್ಷದ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ಅವರು ಬೆಳಿಗ್ಗೆಯೇ ಮತದಾನ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ, ಜೆ.ಡಿ.ಎಸ್.ನ ಎನ್.ಎಂ. ನಬಿ ಅವರು ಈ ಕ್ಷೇತ್ರದ ಮತದಾರರಿಲ್ಲ.
ಸಿಂಗ್ ಅವರು ನಗರದ 21ನೇ ಮತಗಟ್ಟೆಯಲ್ಲಿ ತಂದೆ ಪೃಥ್ವಿರಾಜ್ ಸಿಂಗ್, ಪತ್ನಿ ಲಕ್ಷ್ಮಿ ಸಿಂಗ್, ಮಗ ಸಿದ್ಧಾರ್ಥ, ಮಗಳು ವೈಷ್ಣವಿ ಜತೆಗೆ ತೆರಳಿ ಮತ ಹಾಕಿದರು.
ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ಅವರು ತಾಲ್ಲೂಕಿನ ಕಲ್ಲಹಳ್ಳಿ ಮತಗಟ್ಟೆ ಸಂಖ್ಯೆ 198ರಲ್ಲಿ ಮತದಾನ ಮಾಡಿದರು.