ಹೊಸಪೇಟೆ: ‘ಜಿಲ್ಲೆಯ ಜನಸಂಖ್ಯೆ 16 ಲಕ್ಷವಿದ್ದು, ಶೇ 1ರಷ್ಟು ರಕ್ತ ಸಂಗ್ರಹವಿರಬೇಕು. ಆದರೆ, ಅದಕ್ಕಿಂತ ತೀರ ಕಡಿಮೆ ಇರುವುದು ಕಳವಳಕಾರಿ. ತಿಂಗಳಲ್ಲಿ ಒಂದು ದಿನ ಕಡ್ಡಾಯವಾಗಿ ರಕ್ತದಾನ ದಿನ ಆಂದೋಲನ ನಡೆಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.