<p><strong>ಬಳ್ಳಾರಿ: </strong>ಈ ಬಾರಿಯ ಚುನಾವಣೆಯಲ್ಲಿ ಸಿರುಗುಪ್ಪ ನಗರಸಭೆಯು ಕಾಂಗ್ರೆಸ್ ತೆಕ್ಕೆಗೆ ದೊರಕಿದರೆ, ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿಯು ಬಿಜೆಪಿಯ ಮಡಿಲು ಸೇರಿದೆ. ಜೆಡಿಎಸ್ ಲೆಕ್ಕಕ್ಕೇ ಇಲ್ಲದಂತಾಗಿದೆ.</p>.<p>ನಗರಸಭೆಯಾದ ಬಳಿಕ ಸಿರುಗುಪ್ಪದಲ್ಲಿ ಮೊದಲ ಚುನಾವಣೆ ನಡೆದಿದೆ. ಪಟ್ಟಣ ಪಂಚಾಯ್ತಿಯಾದ ತೆಕ್ಕಲಕೋಟೆಯು ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರ ಹುಟ್ಟೂರು, ಅವರ ನಿವಾಸ ಅಲ್ಲಿಯೇ ಇರುವುದರಿಂದ ಅವರು ಅಲ್ಲಿ ಬಹುಮತ ಪಡೆದುಕೊಂಡಿದ್ದಾರೆ.</p>.<p>ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಅವಕಾಶ ದೊರಕದಿದ್ದರೂ, ಈ ಬಾರಿ ಅತ್ಯುತ್ಸಾಹದಿಂದ ಕೆಲಸ ಮಾಡಿದ ಮಾಜಿ ಶಾಸಕ ಬಿ.ಎಂ.ನಾಗರಾಜ್ ನಗರಸಭೆಯಲ್ಲಿ ಮಾತ್ರ ತಮ್ಮ ತಂಡಕ್ಕೆ ಅಧಿಕಾರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಚುನಾವಣೆಗೆ ಮುಂಚೆಯೇ ಈ ಎರಡೂ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮುಖಂಡರು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಅದು ಸಂಪೂರ್ಣವಾಗಿ ಈಡೇರಿಲ್ಲ.</p>.<p>ವಿಶೇಷ ಎಂದರೆ ಹಿಂದಿನ ರೀತಿಯಲ್ಲಿ ಆದಂತೆ ಪಕ್ಷೇತರರು ಮತ್ತು ಇತರೆ ಪಕ್ಷಗಳ ಸದಸ್ಯರನ್ನು ಸೇರಿಸಿಕೊಂಡು ಅಧಿಕಾರ ಪಡೆಯುವ ಅನಿವಾರ್ಯತೆ ಎರಡೂ ಪಕ್ಷಗಳಿಗೆ ಎದುರಾಗಿಲ್ಲ. ಸ್ಪಷ್ಟ ಬಹುಮತವನ್ನು ಗಳಿಸಿರುವುದರಿಂದ ಈ ಸಮಸ್ಯೆ ಇಲ್ಲದೆಯೇ ಅಧಿಕಾರ ನಡೆಸುವ ಅವಕಾಶ ಸಿಕ್ಕಿದೆ.</p>.<p>ಸಿರುಗುಪ್ಪ ಪುರಸಭೆಗೆ ಹಿಂದೆ ನಡೆದಿದ್ದ ಚುನಾವಣೆಯಲ್ಲಿಯೂ ಕಾಂಗ್ರೆಸ್ ಬಹುಮತ ಗಳಿಸಿತ್ತು. ಬಿಎಸ್ಆರ್ ಕಾಂಗ್ರೆಸ್ನ ಒಬ್ಬರು ಮತ್ತು ಇಬ್ಬರು ಪಕ್ಷೇತರರೂ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು.</p>.<p>ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿಗೆ ಈ ಹಿಂದಿನ ಅವಧಿಯಲ್ಲಿ ಯಾರಿಗೂ ಬಹುಮತ ದೊರಕಿರಲಿಲ್ಲ. ಒಟ್ಟು 20 ಸದಸ್ಯರ ಪೈಕಿ ಬಿಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ತಲಾ 8 ಸ್ಥಾನ ಪಡೆದು ಸಮಾನ ಬಲ ಹೊಂದಿತ್ತು. ನಂತರದ ಬೆಳವಣಿಗೆಯಲ್ಲಿ ಬಿಎಸ್ಆರ್ನ 8 ಸದಸ್ಯರೂ ಕಾಂಗ್ರೆಸ್ನೊಂದಿಗೆ ವಿಲೀನಗೊಂಡು 12 ಸದಸ್ಯರು ಕೂಡಿ ಪಟ್ಟಣ ಪಂಚಾಯ್ತಿಯ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಇಲ್ಲಿ ಬಿಜೆಪಿ ವಿರೋಧ ಪಕ್ಷದವರಾಗಿ ಕೆಲಸ ಮಾಡಿತ್ತು.</p>.<p>ಈ ಬಾರಿ ಸನ್ನಿವೇಶ ಬದಲಾಗಿದೆ. ಶಾಸಕ ಸೋಮಲಿಂಗಪ್ಪ ತವರಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿ ಅಧಿಕಾರ ಚಲಾಯಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ಈ ಬಾರಿಯ ಚುನಾವಣೆಯಲ್ಲಿ ಸಿರುಗುಪ್ಪ ನಗರಸಭೆಯು ಕಾಂಗ್ರೆಸ್ ತೆಕ್ಕೆಗೆ ದೊರಕಿದರೆ, ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿಯು ಬಿಜೆಪಿಯ ಮಡಿಲು ಸೇರಿದೆ. ಜೆಡಿಎಸ್ ಲೆಕ್ಕಕ್ಕೇ ಇಲ್ಲದಂತಾಗಿದೆ.</p>.<p>ನಗರಸಭೆಯಾದ ಬಳಿಕ ಸಿರುಗುಪ್ಪದಲ್ಲಿ ಮೊದಲ ಚುನಾವಣೆ ನಡೆದಿದೆ. ಪಟ್ಟಣ ಪಂಚಾಯ್ತಿಯಾದ ತೆಕ್ಕಲಕೋಟೆಯು ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರ ಹುಟ್ಟೂರು, ಅವರ ನಿವಾಸ ಅಲ್ಲಿಯೇ ಇರುವುದರಿಂದ ಅವರು ಅಲ್ಲಿ ಬಹುಮತ ಪಡೆದುಕೊಂಡಿದ್ದಾರೆ.</p>.<p>ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಅವಕಾಶ ದೊರಕದಿದ್ದರೂ, ಈ ಬಾರಿ ಅತ್ಯುತ್ಸಾಹದಿಂದ ಕೆಲಸ ಮಾಡಿದ ಮಾಜಿ ಶಾಸಕ ಬಿ.ಎಂ.ನಾಗರಾಜ್ ನಗರಸಭೆಯಲ್ಲಿ ಮಾತ್ರ ತಮ್ಮ ತಂಡಕ್ಕೆ ಅಧಿಕಾರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಚುನಾವಣೆಗೆ ಮುಂಚೆಯೇ ಈ ಎರಡೂ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮುಖಂಡರು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಅದು ಸಂಪೂರ್ಣವಾಗಿ ಈಡೇರಿಲ್ಲ.</p>.<p>ವಿಶೇಷ ಎಂದರೆ ಹಿಂದಿನ ರೀತಿಯಲ್ಲಿ ಆದಂತೆ ಪಕ್ಷೇತರರು ಮತ್ತು ಇತರೆ ಪಕ್ಷಗಳ ಸದಸ್ಯರನ್ನು ಸೇರಿಸಿಕೊಂಡು ಅಧಿಕಾರ ಪಡೆಯುವ ಅನಿವಾರ್ಯತೆ ಎರಡೂ ಪಕ್ಷಗಳಿಗೆ ಎದುರಾಗಿಲ್ಲ. ಸ್ಪಷ್ಟ ಬಹುಮತವನ್ನು ಗಳಿಸಿರುವುದರಿಂದ ಈ ಸಮಸ್ಯೆ ಇಲ್ಲದೆಯೇ ಅಧಿಕಾರ ನಡೆಸುವ ಅವಕಾಶ ಸಿಕ್ಕಿದೆ.</p>.<p>ಸಿರುಗುಪ್ಪ ಪುರಸಭೆಗೆ ಹಿಂದೆ ನಡೆದಿದ್ದ ಚುನಾವಣೆಯಲ್ಲಿಯೂ ಕಾಂಗ್ರೆಸ್ ಬಹುಮತ ಗಳಿಸಿತ್ತು. ಬಿಎಸ್ಆರ್ ಕಾಂಗ್ರೆಸ್ನ ಒಬ್ಬರು ಮತ್ತು ಇಬ್ಬರು ಪಕ್ಷೇತರರೂ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು.</p>.<p>ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿಗೆ ಈ ಹಿಂದಿನ ಅವಧಿಯಲ್ಲಿ ಯಾರಿಗೂ ಬಹುಮತ ದೊರಕಿರಲಿಲ್ಲ. ಒಟ್ಟು 20 ಸದಸ್ಯರ ಪೈಕಿ ಬಿಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ತಲಾ 8 ಸ್ಥಾನ ಪಡೆದು ಸಮಾನ ಬಲ ಹೊಂದಿತ್ತು. ನಂತರದ ಬೆಳವಣಿಗೆಯಲ್ಲಿ ಬಿಎಸ್ಆರ್ನ 8 ಸದಸ್ಯರೂ ಕಾಂಗ್ರೆಸ್ನೊಂದಿಗೆ ವಿಲೀನಗೊಂಡು 12 ಸದಸ್ಯರು ಕೂಡಿ ಪಟ್ಟಣ ಪಂಚಾಯ್ತಿಯ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಇಲ್ಲಿ ಬಿಜೆಪಿ ವಿರೋಧ ಪಕ್ಷದವರಾಗಿ ಕೆಲಸ ಮಾಡಿತ್ತು.</p>.<p>ಈ ಬಾರಿ ಸನ್ನಿವೇಶ ಬದಲಾಗಿದೆ. ಶಾಸಕ ಸೋಮಲಿಂಗಪ್ಪ ತವರಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿ ಅಧಿಕಾರ ಚಲಾಯಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>