ನಾನು ಬಳ್ಳಾರಿ ನಗರ ಶಾಸಕ ಆದ ನಂತರ ಎಸ್ಸಿ, ಎಸ್ಟಿ ಜನಾಂಗದವರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಸತಿ ಸಚಿವ ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಪ್ರಯತ್ನದ ಫಲವಾಗಿ ಇಂದು ಬಡವರಿಗೆ ಹಕ್ಕುಪತ್ರ ನೀಡಿದ್ದೇನೆ. ಬಳ್ಳಾರಿ ನಗರದಲ್ಲಿ 12 ಸಾವಿರ ಮನೆಗಳ ಹಕ್ಕುಪತ್ರ ನೀಡಿದ್ದೇನೆ. ಕಾಂಗ್ರೆಸ್'ನವರು ಕೇವಲ ತಮ್ಮ ಭಾವಚಿತ್ರವಿರುವ ಪತ್ರ ನೀಡಿ ಕೈತೊಳಿದುಕೊಂಡಿದ್ದರು ಎಂದರು.