<p><strong>ತೆಕ್ಕಲಕೋಟೆ:</strong> 'ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಅಡಿ 2023-24ನೇ ಸಾಲಿನಲ್ಲಿ ತಾಲ್ಲೂಕಿನ 1297 ಫಲಾನುಭವಿ ರೈತರು ಒಟ್ಟು ₹22.24 ಕೋಟಿ ವಿಮೆ ಪರಿಹಾರ ಪಡೆದಿದ್ದಾರೆ' ಎಂದು ತಾಲ್ಲೂಕು ಕೃಷಿ ಉಪನಿರ್ದೇಶಕ ಮಂಜುನಾಥ ರೆಡ್ಡಿ ತಿಳಿಸಿದರು.</p>.<p>ಪಟ್ಟಣದ ಕೃಷಿ ಸಂಪರ್ಕ ಕೇಂದ್ರದಲ್ಲಿ ಬುಧವಾರ ನಡೆದ ಫಸಲ್ ಭೀಮಾ ಯೋಜನೆ ಅಭಿಯಾನ ಕುರಿತು ರೈತರಿಗೆ ಕರಪತ್ರ ಹಂಚುವ ಮೂಲಕ ಚಾಲನೆ ನೀಡಿ ಮಾತನಾಡಿದರು.</p>.<p>ಬಲಕುಂದಿ, ಕರೂರು, ಬೀರಹಳ್ಳಿ, ಕೆ.ಬೆಳಗಲ್ಲು, ಕೊಂಚಗೇರಿ, ಕುರುವಳ್ಳಿ, ರಾವಿಹಾಳ್, ಶಾನವಾಸಪುರ, ಸಿರಿಗೇರಿ ತೆಕ್ಕಲಕೋಟೆ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಬೆಳೆವಿಮೆ ಲಾಭ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.</p>.<p>'ಸಿರುಗುಪ್ಪ ತಾಲ್ಲೂಕಿನ ರೈತರು ಮುಂಗಾರು ಬೆಳೆಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಅಡಿಯಲ್ಲಿ ಬೆಳೆವಿಮೆ ಮಾಡಿಸಿ ಯೋಜನೆಯ ಲಾಭ ಪಡೆಯಿರಿ' ಎಂದು ಸಲಹೆ ನೀಡಿದರು.</p>.<p>2025-26 ಸಾಲಿನ ಮುಂಗಾರು ಮಳೆ ಆಶ್ರಿತ ಭತ್ತಕ್ಕೆ ₹516, ನೀರಾವರಿ ಭತ್ತ ಪ್ರತಿ ಎಕರೆಗೆ ₹755 ಹಾಗೂ ನೀರಾವರಿ ಜೋಳ ಪ್ರತಿ ಎಕರೆಗೆ ₹367 ಪಾವತಿಸಿ ಬೆಳೆ ವಿಮೆಯನ್ನು ಮಾಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಒನ್ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.</p>.<p>ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶಕ್ಕೆ ಆಗಸ್ಟ್ 16 ಒಳಗಾಗಿ ವಿಮಾ ಕಂತು ಪಾವತಿಸಿ ನೋಂದಾಯಿಸಿ ಕೊಳ್ಳುವಂತೆ ಸಲಹೆ ನೀಡಿದರು.</p>.<p>ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪುರುಷೋತ್ತಮ, ಪರಮೇಶ್ವರರೆಡ್ಡಿ, ರಾಜಶೇಖರ, ಸಿಬ್ಬಂದಿ ನಾಗೇಶ ಹಾಗೂ ರೈತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ:</strong> 'ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಅಡಿ 2023-24ನೇ ಸಾಲಿನಲ್ಲಿ ತಾಲ್ಲೂಕಿನ 1297 ಫಲಾನುಭವಿ ರೈತರು ಒಟ್ಟು ₹22.24 ಕೋಟಿ ವಿಮೆ ಪರಿಹಾರ ಪಡೆದಿದ್ದಾರೆ' ಎಂದು ತಾಲ್ಲೂಕು ಕೃಷಿ ಉಪನಿರ್ದೇಶಕ ಮಂಜುನಾಥ ರೆಡ್ಡಿ ತಿಳಿಸಿದರು.</p>.<p>ಪಟ್ಟಣದ ಕೃಷಿ ಸಂಪರ್ಕ ಕೇಂದ್ರದಲ್ಲಿ ಬುಧವಾರ ನಡೆದ ಫಸಲ್ ಭೀಮಾ ಯೋಜನೆ ಅಭಿಯಾನ ಕುರಿತು ರೈತರಿಗೆ ಕರಪತ್ರ ಹಂಚುವ ಮೂಲಕ ಚಾಲನೆ ನೀಡಿ ಮಾತನಾಡಿದರು.</p>.<p>ಬಲಕುಂದಿ, ಕರೂರು, ಬೀರಹಳ್ಳಿ, ಕೆ.ಬೆಳಗಲ್ಲು, ಕೊಂಚಗೇರಿ, ಕುರುವಳ್ಳಿ, ರಾವಿಹಾಳ್, ಶಾನವಾಸಪುರ, ಸಿರಿಗೇರಿ ತೆಕ್ಕಲಕೋಟೆ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಬೆಳೆವಿಮೆ ಲಾಭ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.</p>.<p>'ಸಿರುಗುಪ್ಪ ತಾಲ್ಲೂಕಿನ ರೈತರು ಮುಂಗಾರು ಬೆಳೆಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಅಡಿಯಲ್ಲಿ ಬೆಳೆವಿಮೆ ಮಾಡಿಸಿ ಯೋಜನೆಯ ಲಾಭ ಪಡೆಯಿರಿ' ಎಂದು ಸಲಹೆ ನೀಡಿದರು.</p>.<p>2025-26 ಸಾಲಿನ ಮುಂಗಾರು ಮಳೆ ಆಶ್ರಿತ ಭತ್ತಕ್ಕೆ ₹516, ನೀರಾವರಿ ಭತ್ತ ಪ್ರತಿ ಎಕರೆಗೆ ₹755 ಹಾಗೂ ನೀರಾವರಿ ಜೋಳ ಪ್ರತಿ ಎಕರೆಗೆ ₹367 ಪಾವತಿಸಿ ಬೆಳೆ ವಿಮೆಯನ್ನು ಮಾಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಒನ್ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.</p>.<p>ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶಕ್ಕೆ ಆಗಸ್ಟ್ 16 ಒಳಗಾಗಿ ವಿಮಾ ಕಂತು ಪಾವತಿಸಿ ನೋಂದಾಯಿಸಿ ಕೊಳ್ಳುವಂತೆ ಸಲಹೆ ನೀಡಿದರು.</p>.<p>ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪುರುಷೋತ್ತಮ, ಪರಮೇಶ್ವರರೆಡ್ಡಿ, ರಾಜಶೇಖರ, ಸಿಬ್ಬಂದಿ ನಾಗೇಶ ಹಾಗೂ ರೈತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>