ಪೌರಾಣಿಕ ನಾಟಕಕ್ಕೆ ಆಧುನಿಕತೆಯ ಸ್ಪರ್ಷ ನೀಡಿದ್ದ ನಾಟಕದ ಸಂಭಾಷಣೆಗಳು ಕೈದಿಗಳಲ್ಲಿ ನಗೆ ಉಕ್ಕಿಸಿದವು. ಪುರುಷೋತ್ತಮ ಹಂದ್ಯಾಳ್ (ಸಾರಥಿ), ಚಂದ್ರಶೇಖರ್ ಆಚಾರಿ (ಗಣಪತಿ), ಅಂಬರೀಷ್(ದುರ್ಯೋಧನ), ಪಾರ್ವತಿ ಗೆಣಕಿಹಾಳ್ (ದುಶ್ಯಾಸನ), ವಿಜಯ್ ಆದೋನಿ (ದ್ರೌಪದಿ), ಎ.ಎರ್ರಿಸ್ವಾಮಿ (ಕೃಷ್ಣ), ಜಡೇಶ್ (ಭೀಮ), ಪುರುಷೋತ್ತಮ ಗೌಡ (ಗೌಡ), ಎಂ.ಅಹಿರಾಜ್ (ಕುಡುಕ) ಅವರೊಂದಿಗೆ ಕೈದಿಗಳಾದ ಸಿದ್ಧರೂಢ, ಸಿದ್ದಪ್ಪ ಅವರೂ ಅಭಿನಯಿಸಿ ಗಮನ ಸೆಳೆದರು. ಸಂಘದ ಜಡೇಶ ಮತ್ತು ತಂಡದವರು ಪ್ರಸ್ತುತಪಡಿಸಿದ ಜನಪದ ಮತ್ತು ತತ್ವ ಗೀತೆಗಳ ಗಾಯನವೂ ಗಮನ ಸೆಳೆಯಿತು.