<p><strong>ಸಂಡೂರು (ಬಳ್ಳಾರಿ</strong>): ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಒದಗಿಸಲು ನೀಡಿದ್ದ ಆದೇಶ ಪಾಲನೆ ಮಾಡುವಲ್ಲಿ ವಿಳಂಬ ಮಾಡಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (ಕೆಕೆಎಸ್ಆರ್ಟಿಸಿ) ಸಂಡೂರು ನ್ಯಾಯಾಲಯ ಬಿಸಿ ಮುಟ್ಟಿಸಿದೆ.</p>.<p>ಹೊಸಪೇಟೆ ವಿಭಾಗದ ಎರಡು ಬಸ್ಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಇದೇ ಆಗಸ್ಟ್ 16ರಂದು ಆದೇಶ ನೀಡಿತ್ತು. ಅದರಂತೆ ಶನಿವಾರ ಎರಡು ಬಸ್ಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.</p>.<p>2019ರ ಏಪ್ರಿಲ್ 25 ರಂದು ಇಲ್ಲಿನ ಎಚ್.ಆರ್.ಜಿ ಕ್ರಾಸ್ ಬಳಿ ಬೈಕ್ ಮತ್ತು ಬಸ್ ಮಧ್ಯೆ ಅಪಘಾತ ಸಂಭವಿಸಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಾಣ್ಯಾಪುರದ ಪಾಂಡುರಂಗ ಮತ್ತು ನಾಗರಾಜ್ ಎಂಬುವರು ಮೃತಪಟ್ಟಿದ್ದರು. ಪಾಂಡುರಂಗ ಕುಟುಂಬಕ್ಕೆ ಹೊಸಪೇಟೆ ವಿಭಾಗವು ₹28.31 ಲಕ್ಷ , ನಾಗರಾಜ ಕುಟುಂಬಕ್ಕೆ ₹30.77 ಲಕ್ಷ ಪರಿಹಾರ ನೀಡಬೇಕೆಂದು 2022ರ ನವೆಂಬರ್ 5 ರಂದು ಆದೇಶ ನೀಡಿತ್ತು.</p>.<p>ಆದರೆ, ಕೆಕೆಎಸ್ಆರ್ಟಿಸಿ ಆದೇಶ ಪಾಲನೆ ಮಾಡಿರಲಿಲ್ಲ. ಹೀಗಾಗಿ ಶೇ 6ರ ಬಡ್ಡಿ ಸೇರಿ ₹75 ಲಕ್ಷ ಬಾಕಿ ಲೆಕ್ಕ ಹಾಕಿ, ಎರಡು ಬಸ್ಗಳನ್ನು ಜಪ್ತಿ ಮಾಡುವಂತೆ ಸಂಡೂರಿನ ಹಿರಿಯ ಶ್ರೇಣಿ ನ್ಯಾಯಾಧೀಶ ಯೋಗೇಶ್ ಆದೇಶಿಸಿದ್ದರು. ವಕೀಲರಾದ ಅರಳಿ ಮಲ್ಲಪ್ಪ ಹಾಗೂ ಹೇಮರೆಡ್ಡಿ ಪ್ರಕರಣದಲ್ಲಿ ಮೃತರ ಕುಟುಂಬಗಳ ಪರ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಡೂರು (ಬಳ್ಳಾರಿ</strong>): ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಒದಗಿಸಲು ನೀಡಿದ್ದ ಆದೇಶ ಪಾಲನೆ ಮಾಡುವಲ್ಲಿ ವಿಳಂಬ ಮಾಡಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (ಕೆಕೆಎಸ್ಆರ್ಟಿಸಿ) ಸಂಡೂರು ನ್ಯಾಯಾಲಯ ಬಿಸಿ ಮುಟ್ಟಿಸಿದೆ.</p>.<p>ಹೊಸಪೇಟೆ ವಿಭಾಗದ ಎರಡು ಬಸ್ಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಇದೇ ಆಗಸ್ಟ್ 16ರಂದು ಆದೇಶ ನೀಡಿತ್ತು. ಅದರಂತೆ ಶನಿವಾರ ಎರಡು ಬಸ್ಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.</p>.<p>2019ರ ಏಪ್ರಿಲ್ 25 ರಂದು ಇಲ್ಲಿನ ಎಚ್.ಆರ್.ಜಿ ಕ್ರಾಸ್ ಬಳಿ ಬೈಕ್ ಮತ್ತು ಬಸ್ ಮಧ್ಯೆ ಅಪಘಾತ ಸಂಭವಿಸಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಾಣ್ಯಾಪುರದ ಪಾಂಡುರಂಗ ಮತ್ತು ನಾಗರಾಜ್ ಎಂಬುವರು ಮೃತಪಟ್ಟಿದ್ದರು. ಪಾಂಡುರಂಗ ಕುಟುಂಬಕ್ಕೆ ಹೊಸಪೇಟೆ ವಿಭಾಗವು ₹28.31 ಲಕ್ಷ , ನಾಗರಾಜ ಕುಟುಂಬಕ್ಕೆ ₹30.77 ಲಕ್ಷ ಪರಿಹಾರ ನೀಡಬೇಕೆಂದು 2022ರ ನವೆಂಬರ್ 5 ರಂದು ಆದೇಶ ನೀಡಿತ್ತು.</p>.<p>ಆದರೆ, ಕೆಕೆಎಸ್ಆರ್ಟಿಸಿ ಆದೇಶ ಪಾಲನೆ ಮಾಡಿರಲಿಲ್ಲ. ಹೀಗಾಗಿ ಶೇ 6ರ ಬಡ್ಡಿ ಸೇರಿ ₹75 ಲಕ್ಷ ಬಾಕಿ ಲೆಕ್ಕ ಹಾಕಿ, ಎರಡು ಬಸ್ಗಳನ್ನು ಜಪ್ತಿ ಮಾಡುವಂತೆ ಸಂಡೂರಿನ ಹಿರಿಯ ಶ್ರೇಣಿ ನ್ಯಾಯಾಧೀಶ ಯೋಗೇಶ್ ಆದೇಶಿಸಿದ್ದರು. ವಕೀಲರಾದ ಅರಳಿ ಮಲ್ಲಪ್ಪ ಹಾಗೂ ಹೇಮರೆಡ್ಡಿ ಪ್ರಕರಣದಲ್ಲಿ ಮೃತರ ಕುಟುಂಬಗಳ ಪರ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>