<p><strong>ಬಳ್ಳಾರಿ</strong>: ಜಿಲ್ಲೆಯಲ್ಲಿ ಮತ್ತೆ ‘ಡಿಜಿಟಲ್ ಅರೆಸ್ಟ್’ ಸದ್ದು ಮಾಡಿದ್ದು, ವೃದ್ಧರೊಬ್ಬರಿಂದ ₹27 ಲಕ್ಷ ಕಸಿದು ಮೋಸ ಮಾಡಲಾಗಿದೆ. </p>.<p>ಈ ಸಂಬಂಧ ನಗರದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ(ಸಿಇಎನ್) ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. </p>.<p>ಅ.31ರಂದು ಬೆಳಿಗ್ಗೆ ದೂರುದಾರ ವ್ಯಕ್ತಿಗೆ ವಾಟ್ಸ್ಆ್ಯಪ್ ಮೂಲಕ ಕರೆ ಮಾಡಿದ್ದ ಅಪರಿಚಿತರು ತಾವು ಟೆಲಿಕಾಂ, ಪೊಲೀಸರು, ಸಿಬಿಐ ಅಧಿಕಾರಿಗಳು ಎಂದು ಹೇಳಿದ್ದರು.</p>.<p>‘ನಿಮ್ಮ ಆಧಾರ್ ಕಾರ್ಡ್ ಮತ್ತು ಹೆಸರಿನಲ್ಲಿ ಅಕೌಂಟ್ ತೆಗೆದು ಅದರಿಂದ ₹2 ಸಾವಿರ ಕೋಟಿ ವರೆಗೆ ವಂಚನೆ ಮಾಡಲಾಗಿದೆ. ಮಹಿಳೆಯರಿಗೆ ಆಶ್ಲೀಲ ಸಂದೇಶಗಳನ್ನು ರವಾನಿಸಲಾಗಿದೆ. ಈ ಬಗ್ಗೆ ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಯುವ ವರೆಗೆ ನಿಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹಣದಲ್ಲಿ ಶೇ 90ರಷ್ಟು ಹಣವನ್ನು ನಮಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ನಿಮ್ಮನ್ನು ಬಂಧಿಸುತ್ತೇವೆ’ ಎಂದು ವ್ಯಕ್ತಿಯನ್ನು ಭಯ ಪಡಿಸಲಾಗಿದೆ.</p>.<p>ಇದಕ್ಕೆ ಹೆದರಿದ ವ್ಯಕ್ತಿ ಹಂತ ಹಂತವಾಗಿ ₹27,00,000 ಹಣವನ್ನು ವಂಚಕರು ಹೇಳಿದ ಖಾತೆಗೆ ಹಾಕಿದ್ದಾರೆ. ದೂರುದಾರ ವ್ಯಕ್ತಿ ಭಯಪಡುತ್ತಿದ್ದುದ್ದನ್ನು ಗಮನಿಸಿದ ಅವರ ಮಗ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. </p>.<p>ಜುಲೈ 18ರಂದು ನಗರದ ನಿವೃತ್ತ ಐಟಿ ಉದ್ಯೋಗಿಯೊಬ್ಬರು ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿ ₹1.37 ಕೋಟಿ ಕಳೆದುಕೊಂಡಿದ್ದರು. ಜುಲೈ 5ರಂದು ನಡೆದಿದ್ದ ಇನ್ನೊಂದು ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ₹88 ಲಕ್ಷ ವಂಚನೆ ಮಾಡಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ಜಿಲ್ಲೆಯಲ್ಲಿ ಮತ್ತೆ ‘ಡಿಜಿಟಲ್ ಅರೆಸ್ಟ್’ ಸದ್ದು ಮಾಡಿದ್ದು, ವೃದ್ಧರೊಬ್ಬರಿಂದ ₹27 ಲಕ್ಷ ಕಸಿದು ಮೋಸ ಮಾಡಲಾಗಿದೆ. </p>.<p>ಈ ಸಂಬಂಧ ನಗರದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ(ಸಿಇಎನ್) ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. </p>.<p>ಅ.31ರಂದು ಬೆಳಿಗ್ಗೆ ದೂರುದಾರ ವ್ಯಕ್ತಿಗೆ ವಾಟ್ಸ್ಆ್ಯಪ್ ಮೂಲಕ ಕರೆ ಮಾಡಿದ್ದ ಅಪರಿಚಿತರು ತಾವು ಟೆಲಿಕಾಂ, ಪೊಲೀಸರು, ಸಿಬಿಐ ಅಧಿಕಾರಿಗಳು ಎಂದು ಹೇಳಿದ್ದರು.</p>.<p>‘ನಿಮ್ಮ ಆಧಾರ್ ಕಾರ್ಡ್ ಮತ್ತು ಹೆಸರಿನಲ್ಲಿ ಅಕೌಂಟ್ ತೆಗೆದು ಅದರಿಂದ ₹2 ಸಾವಿರ ಕೋಟಿ ವರೆಗೆ ವಂಚನೆ ಮಾಡಲಾಗಿದೆ. ಮಹಿಳೆಯರಿಗೆ ಆಶ್ಲೀಲ ಸಂದೇಶಗಳನ್ನು ರವಾನಿಸಲಾಗಿದೆ. ಈ ಬಗ್ಗೆ ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಯುವ ವರೆಗೆ ನಿಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹಣದಲ್ಲಿ ಶೇ 90ರಷ್ಟು ಹಣವನ್ನು ನಮಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ನಿಮ್ಮನ್ನು ಬಂಧಿಸುತ್ತೇವೆ’ ಎಂದು ವ್ಯಕ್ತಿಯನ್ನು ಭಯ ಪಡಿಸಲಾಗಿದೆ.</p>.<p>ಇದಕ್ಕೆ ಹೆದರಿದ ವ್ಯಕ್ತಿ ಹಂತ ಹಂತವಾಗಿ ₹27,00,000 ಹಣವನ್ನು ವಂಚಕರು ಹೇಳಿದ ಖಾತೆಗೆ ಹಾಕಿದ್ದಾರೆ. ದೂರುದಾರ ವ್ಯಕ್ತಿ ಭಯಪಡುತ್ತಿದ್ದುದ್ದನ್ನು ಗಮನಿಸಿದ ಅವರ ಮಗ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. </p>.<p>ಜುಲೈ 18ರಂದು ನಗರದ ನಿವೃತ್ತ ಐಟಿ ಉದ್ಯೋಗಿಯೊಬ್ಬರು ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿ ₹1.37 ಕೋಟಿ ಕಳೆದುಕೊಂಡಿದ್ದರು. ಜುಲೈ 5ರಂದು ನಡೆದಿದ್ದ ಇನ್ನೊಂದು ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ₹88 ಲಕ್ಷ ವಂಚನೆ ಮಾಡಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>