<p><strong>ಬಳ್ಳಾರಿ: ‘</strong>ಸಮಕಾಲೀನ ರಂಗಭೂಮಿಗೆ ಹೊಸ ಹೊಸ ವಿಚಾರ, ನಟರ ವೇದಿಕೆಗೆ ಬಂದರೂ ಅಲ್ಲಿ ವಿಜೃಂಭಿಸುವುದು ರಂಗಕಲೆಯೇ ಆಗಿರುತ್ತದೆ’ ಎಂದು ‘ತಿಂಡಿಗೆ ಬಂದ ತುಂಡೆರಾಯ’ ನಾಟಕದ ನಿರ್ದೇಶಕ ಶಕೀಲ್ ಅಹ್ಮದ್ ಅಭಿಪ್ರಾಯಪಟ್ಟರು. </p>.<p>‘ಸಂಗಂ’ ಸಾಹಿತ್ಯ ಪುರಸ್ಕಾರ ಸಮಾರಂಭದ ಕವಿಗೋಷ್ಠಿಯಲ್ಲಿ ‘ಅಸ್ಸಲಾಮ್ ಅಲೈಕುಂ’ ಎನ್ನುತ್ತಲೇ ಶಕೀಲ್ ಅಹ್ಮದ್ ಮಾತು ಆರಂಭಿಸಿದರು. </p>.<p>‘ಸಮಕಾಲೀನ ಕನ್ನಡ ರಂಗಭೂಮಿ ಮತ್ತು ನಾನು' ಗೋಷ್ಠಿಯಲ್ಲಿ ಪ್ರವೀಣ್ ರೆಡ್ಡಿ ಗುಂಜಳ್ಳಿ ರಂಗಭೂಮಿ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು.</p>.<p>‘ರಂಗ ಕಲಾವಿದನ ಭಾವನೆಗಳನ್ನು ಗೌರವಿಸಬೇಕೇ ಹೊರತು ಇದನ್ನು ಮಾಡಬಾರದು ಎಂದು ವಿರೋಧಿಸಬಾರದು. ನಾಟಕ, ಅದು ಆಡುವುದು, ಮಾಡುವುದು ಮತ್ತು ನೋಡುವುದು. ಆದರೆ ಇದು ಓದುವುದು ಬರೆಯುವುದಲ್ಲ’ ಎಂದು ಸಮಕಾಲೀನ ರಂಗಭೂಮಿ ಕುರಿತು ವಿವರಿಸಿದರು.</p>.<p>ಸಿರಿಗೇರಿಯ ರಂಗಧಾತ್ರಿ ಸಂಸ್ಥೆಯ ‘ತಿರುಗಾಟ’ ತಂಡದ ಮಂಜು ಸಿರಿಗೇರಿ, ರಂಗಭೂಮಿಯ ಕಲಾವಿದರ ಸಂಕಟ, ನೋವು ಹಾಗೂ ಸಮಾಜದ ದೃಷ್ಟಿಕೋನ ಕುರಿತು ವಿವರಿಸಿದರು.</p>.<p>ಭಾವೈಕ್ಯತಾ ವೇದಿಕೆಯ ಹೊಸಪೇಟೆಯ ಸಹನಾ ಪಿಂಜಾರ್, ‘ಹೆಣ್ಣುಮಕ್ಕಳು ರಂಗಭೂಮಿಗೆ ಬರಲು ಹಿಂಜರಿಯುವ ಕಾಲ ಇದೆ. ಬೀದಿ ನಾಟಕಗಳಲ್ಲಿ ಪಾಲ್ಗೊಂಡ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಉತ್ತರ ಕರ್ನಾಟಕ ರಂಗಭೂಮಿಯ ಗಂಡು ಮೆಟ್ಟಿನ ನಾಡು. ರಾಜ್ಯ ಸರ್ಕಾರ ರಂಗಭೂಮಿಗೆ ಬಹಳ ಉತ್ತೇಜನ ನೀಡುತ್ತಿದೆ’ ಎಂದು ಮೆಚ್ಚುಗೆ ಸೂಚಿಸಿದರು.</p>.<p>‘ವಿಷಯ ಮತ್ತು ವಸ್ತುವಿನ ಆಧಾರದ ಮೇಲೆ ಸಮಕಾಲೀನ ರಂಗಭೂಮಿ ಸ್ಪಂದಿಸುತ್ತದೆ. ಆದರೆ ಕಲಾವಿದರಿಗೆ ವೇದಿಕೆ ಸಿಗುವುದೆ ದುರ್ಲಭವಾಗಿದೆ’ ಎಂದು ನಟ, ನಿರ್ದೇಶಕ ರಂಗಭೂಮಿ ಕಲಾವಿದೆ ಮಹಾದೇವ ಹಡಪದ್ ಬೇಸರಿಸಿದರು.</p>.<p>ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಂಗಕಲಾವಿದರೊಂದಿಗೆ ಬೆರೆತು ಪ್ರಶ್ನೆ ಕೇಳುವ ಮೂಲಕ ಮಾತುಕತೆಗೆ ಮೆರಗು ನೀಡಿದರು.</p>.<p><strong>ಅಲೆದಾಟವೇ ಸಂಶೋಧನೆ: ಅರುಣ್ <br><br>ಬಳ್ಳಾರಿ:</strong> ಸಮಕಾಲೀನ ಕನ್ನಡ ಸಂಶೋಧನೆ ಮತ್ತು ನಾನು ಕುರಿತ ಗೋಷ್ಠಿಯಲ್ಲಿ ಸಮನ್ವಯಕಾರರಾಗಿ ಅರುಣ್ ಜೋಳದ ಕೂಡ್ಲಿಗಿ ಮಾತನಾಡಿದರು.</p>.<p>‘ಕನ್ನಡ ಸಾಹಿತ್ಯ ಸಂಶೋಧನೆ ಎಂದರೆ ಕೇವಲ ಶಾಸನ, ವೀರಗಲ್ಲು ನಾಣ್ಯಗಳ ಅಧ್ಯಯನ ಮಾತ್ರವಲ್ಲ ಜೀವನಾನುಭವ ನೀಡುವ ಬೆಟ್ಟ, ಗುಡ್ಡ, ಊರು, ಕೇರಿ ಅಲೆದಾಡಿ ಕೈಗೊಳ್ಳುವುದು ಸಂಶೋಧನೆ’ ಎಂದು ತಿಳಿಸಿದರು.</p>.<p>ಸಂಶೋಧನಾ ಲೇಖಕ ಚಂದ್ರಶೇಖರ ಮಂಡೆಕೋಲು ತಮ್ಮ ಸಂಶೋಧನೆ ಸಾಗಿಬಂದ ಹಾದಿ, ಎದುರಿಸಿದ ಸಮಸ್ಯೆ ಹಾಗೂ ಸಂಶೋಧನಾಕಾರನಿಗೆ ಇರಬೇಕಾದ ತುಡಿತ ಕುರಿತು ವಿವರಿಸಿದರು.</p>.<p>‘ಪಿಯುಸಿಯಲ್ಲಿ ವಿಜ್ಞಾನ ವಿಭಾಗದಿಂದ ಕಲಾವಿಭಾಗಕ್ಕೆ ಬದಲಾಯಿಸಿಕೊಂಡದ್ದು ಜೀವನದ ಮೊದಲ ಸಂಶೋಧನೆ’ ಎಂದು ಹಾಸ್ಯಾತ್ಮಕವಾಗಿ ಸಂಶೋಧಕ ರಾಜೇಂದ್ರ ಬಡಿಗೇರ್ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: ‘</strong>ಸಮಕಾಲೀನ ರಂಗಭೂಮಿಗೆ ಹೊಸ ಹೊಸ ವಿಚಾರ, ನಟರ ವೇದಿಕೆಗೆ ಬಂದರೂ ಅಲ್ಲಿ ವಿಜೃಂಭಿಸುವುದು ರಂಗಕಲೆಯೇ ಆಗಿರುತ್ತದೆ’ ಎಂದು ‘ತಿಂಡಿಗೆ ಬಂದ ತುಂಡೆರಾಯ’ ನಾಟಕದ ನಿರ್ದೇಶಕ ಶಕೀಲ್ ಅಹ್ಮದ್ ಅಭಿಪ್ರಾಯಪಟ್ಟರು. </p>.<p>‘ಸಂಗಂ’ ಸಾಹಿತ್ಯ ಪುರಸ್ಕಾರ ಸಮಾರಂಭದ ಕವಿಗೋಷ್ಠಿಯಲ್ಲಿ ‘ಅಸ್ಸಲಾಮ್ ಅಲೈಕುಂ’ ಎನ್ನುತ್ತಲೇ ಶಕೀಲ್ ಅಹ್ಮದ್ ಮಾತು ಆರಂಭಿಸಿದರು. </p>.<p>‘ಸಮಕಾಲೀನ ಕನ್ನಡ ರಂಗಭೂಮಿ ಮತ್ತು ನಾನು' ಗೋಷ್ಠಿಯಲ್ಲಿ ಪ್ರವೀಣ್ ರೆಡ್ಡಿ ಗುಂಜಳ್ಳಿ ರಂಗಭೂಮಿ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು.</p>.<p>‘ರಂಗ ಕಲಾವಿದನ ಭಾವನೆಗಳನ್ನು ಗೌರವಿಸಬೇಕೇ ಹೊರತು ಇದನ್ನು ಮಾಡಬಾರದು ಎಂದು ವಿರೋಧಿಸಬಾರದು. ನಾಟಕ, ಅದು ಆಡುವುದು, ಮಾಡುವುದು ಮತ್ತು ನೋಡುವುದು. ಆದರೆ ಇದು ಓದುವುದು ಬರೆಯುವುದಲ್ಲ’ ಎಂದು ಸಮಕಾಲೀನ ರಂಗಭೂಮಿ ಕುರಿತು ವಿವರಿಸಿದರು.</p>.<p>ಸಿರಿಗೇರಿಯ ರಂಗಧಾತ್ರಿ ಸಂಸ್ಥೆಯ ‘ತಿರುಗಾಟ’ ತಂಡದ ಮಂಜು ಸಿರಿಗೇರಿ, ರಂಗಭೂಮಿಯ ಕಲಾವಿದರ ಸಂಕಟ, ನೋವು ಹಾಗೂ ಸಮಾಜದ ದೃಷ್ಟಿಕೋನ ಕುರಿತು ವಿವರಿಸಿದರು.</p>.<p>ಭಾವೈಕ್ಯತಾ ವೇದಿಕೆಯ ಹೊಸಪೇಟೆಯ ಸಹನಾ ಪಿಂಜಾರ್, ‘ಹೆಣ್ಣುಮಕ್ಕಳು ರಂಗಭೂಮಿಗೆ ಬರಲು ಹಿಂಜರಿಯುವ ಕಾಲ ಇದೆ. ಬೀದಿ ನಾಟಕಗಳಲ್ಲಿ ಪಾಲ್ಗೊಂಡ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಉತ್ತರ ಕರ್ನಾಟಕ ರಂಗಭೂಮಿಯ ಗಂಡು ಮೆಟ್ಟಿನ ನಾಡು. ರಾಜ್ಯ ಸರ್ಕಾರ ರಂಗಭೂಮಿಗೆ ಬಹಳ ಉತ್ತೇಜನ ನೀಡುತ್ತಿದೆ’ ಎಂದು ಮೆಚ್ಚುಗೆ ಸೂಚಿಸಿದರು.</p>.<p>‘ವಿಷಯ ಮತ್ತು ವಸ್ತುವಿನ ಆಧಾರದ ಮೇಲೆ ಸಮಕಾಲೀನ ರಂಗಭೂಮಿ ಸ್ಪಂದಿಸುತ್ತದೆ. ಆದರೆ ಕಲಾವಿದರಿಗೆ ವೇದಿಕೆ ಸಿಗುವುದೆ ದುರ್ಲಭವಾಗಿದೆ’ ಎಂದು ನಟ, ನಿರ್ದೇಶಕ ರಂಗಭೂಮಿ ಕಲಾವಿದೆ ಮಹಾದೇವ ಹಡಪದ್ ಬೇಸರಿಸಿದರು.</p>.<p>ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಂಗಕಲಾವಿದರೊಂದಿಗೆ ಬೆರೆತು ಪ್ರಶ್ನೆ ಕೇಳುವ ಮೂಲಕ ಮಾತುಕತೆಗೆ ಮೆರಗು ನೀಡಿದರು.</p>.<p><strong>ಅಲೆದಾಟವೇ ಸಂಶೋಧನೆ: ಅರುಣ್ <br><br>ಬಳ್ಳಾರಿ:</strong> ಸಮಕಾಲೀನ ಕನ್ನಡ ಸಂಶೋಧನೆ ಮತ್ತು ನಾನು ಕುರಿತ ಗೋಷ್ಠಿಯಲ್ಲಿ ಸಮನ್ವಯಕಾರರಾಗಿ ಅರುಣ್ ಜೋಳದ ಕೂಡ್ಲಿಗಿ ಮಾತನಾಡಿದರು.</p>.<p>‘ಕನ್ನಡ ಸಾಹಿತ್ಯ ಸಂಶೋಧನೆ ಎಂದರೆ ಕೇವಲ ಶಾಸನ, ವೀರಗಲ್ಲು ನಾಣ್ಯಗಳ ಅಧ್ಯಯನ ಮಾತ್ರವಲ್ಲ ಜೀವನಾನುಭವ ನೀಡುವ ಬೆಟ್ಟ, ಗುಡ್ಡ, ಊರು, ಕೇರಿ ಅಲೆದಾಡಿ ಕೈಗೊಳ್ಳುವುದು ಸಂಶೋಧನೆ’ ಎಂದು ತಿಳಿಸಿದರು.</p>.<p>ಸಂಶೋಧನಾ ಲೇಖಕ ಚಂದ್ರಶೇಖರ ಮಂಡೆಕೋಲು ತಮ್ಮ ಸಂಶೋಧನೆ ಸಾಗಿಬಂದ ಹಾದಿ, ಎದುರಿಸಿದ ಸಮಸ್ಯೆ ಹಾಗೂ ಸಂಶೋಧನಾಕಾರನಿಗೆ ಇರಬೇಕಾದ ತುಡಿತ ಕುರಿತು ವಿವರಿಸಿದರು.</p>.<p>‘ಪಿಯುಸಿಯಲ್ಲಿ ವಿಜ್ಞಾನ ವಿಭಾಗದಿಂದ ಕಲಾವಿಭಾಗಕ್ಕೆ ಬದಲಾಯಿಸಿಕೊಂಡದ್ದು ಜೀವನದ ಮೊದಲ ಸಂಶೋಧನೆ’ ಎಂದು ಹಾಸ್ಯಾತ್ಮಕವಾಗಿ ಸಂಶೋಧಕ ರಾಜೇಂದ್ರ ಬಡಿಗೇರ್ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>