<p><strong>ಹೂವಿನಹಡಗಲಿ</strong>: ತಾಲ್ಲೂಕಿನ ಮದಲಗಟ್ಟಿ ಸುಕ್ಷೇತ್ರದಲ್ಲಿ ಸಮುದಾಯ ಭವನ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಇ.ತುಕಾರಾಂ ಶನಿವಾರ ಭೂಮಿಪೂಜೆ ನೆರವೇರಿಸಿದರು.</p>.<p>‘ಮದಲಗಟ್ಟಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಿಂದಾಲ್ ಕಂಪೆನಿಯ ಸಿಎಸ್ಆರ್ ನಿಧಿಯಡಿ ₹50 ಲಕ್ಷ ಬಿಡುಗಡೆಯಾಗಿದೆ. ಹೆಚ್ಚುವರಿ ₹50 ಲಕ್ಷ ಅನುದಾನ ಒದಗಿಸಿ, ಸುಸಜ್ಜಿತ ಸಮುದಾಯ ಭವನ, ಸ್ನಾನಗೃಹ, ಶೌಚಾಲಯ ನಿರ್ಮಿಸುತ್ತೇವೆ. ಭಕ್ತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಂಸದರು ಹೇಳಿದರು.</p>.<p>ಮಾಜಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ಮದಲಗಟ್ಟಿ ಸುಕ್ಷೇತ್ರಕ್ಕೆ ನೆರೆಯ ಜಿಲ್ಲೆಗಳಿಂದ ಅಪಾರ ಭಕ್ತರು ಬರುತ್ತಾರೆ. ಮೂಲಸೌಕರ್ಯ ಕಲ್ಪಿಸುವ ಅಗತ್ಯವಿದ್ದು, ಸ್ಥಳೀಯರ ನಿರೀಕ್ಷೆ ಮೀರಿ ಅನುದಾನ ನೀಡಿರುವ ಸಂಸದ ತುಕಾರಾಂ ಅವರನ್ನು ಅಭಿನಂದಿಸುವೆ ಎಂದರು.</p>.<p>ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿಜಯಕುಮಾರ್, ಮುಖಂಡರಾದ ಅಕ್ಕಿ ತೋಟೇಶ, ಸೋಗಿ ಹಾಲೇಶ, ಎಸ್.ದೂದನಾಯ್ಕ, ಕುರಿ ಶಿವಮೂರ್ತಿ, ಪಿ.ಟಿ.ಭರತ್, ಕೆ.ಎಸ್.ಶಾಂತನಗೌಡ ಪಾಲ್ಗೊಂಡಿದ್ದರು.</p>.<p> ಅಂಚೆ ಕಚೇರಿಗೆ ₹1.60 ಕೋಟಿ ಮಂಜೂರು ಹೂವಿನಹಡಗಲಿ: ಪಟ್ಟಣದಲ್ಲಿ ಅಂಚೆ ಕಚೇರಿ ನಿರ್ಮಾಣಕ್ಕೆ ₹1.60 ಕೋಟಿ ಮಂಜೂರಾಗಿದೆ ಎಂದು ಸಂಸದ ಇ.ತುಕಾರಾಂ ತಿಳಿಸಿದರು. ಮುಂದಿನ ತಿಂಗಳು ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಅಂಚೆ ಇಲಾಖೆಗೆ ಕಾಯ್ದಿಟ್ಟ ನಿವೇಶನದಲ್ಲಿ ಸುಸಜ್ಜಿತ ಕಚೇರಿ ನಿರ್ಮಿಸಲಾಗುವುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ತಾಲ್ಲೂಕಿನ ಮದಲಗಟ್ಟಿ ಸುಕ್ಷೇತ್ರದಲ್ಲಿ ಸಮುದಾಯ ಭವನ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಇ.ತುಕಾರಾಂ ಶನಿವಾರ ಭೂಮಿಪೂಜೆ ನೆರವೇರಿಸಿದರು.</p>.<p>‘ಮದಲಗಟ್ಟಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಿಂದಾಲ್ ಕಂಪೆನಿಯ ಸಿಎಸ್ಆರ್ ನಿಧಿಯಡಿ ₹50 ಲಕ್ಷ ಬಿಡುಗಡೆಯಾಗಿದೆ. ಹೆಚ್ಚುವರಿ ₹50 ಲಕ್ಷ ಅನುದಾನ ಒದಗಿಸಿ, ಸುಸಜ್ಜಿತ ಸಮುದಾಯ ಭವನ, ಸ್ನಾನಗೃಹ, ಶೌಚಾಲಯ ನಿರ್ಮಿಸುತ್ತೇವೆ. ಭಕ್ತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಂಸದರು ಹೇಳಿದರು.</p>.<p>ಮಾಜಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ಮದಲಗಟ್ಟಿ ಸುಕ್ಷೇತ್ರಕ್ಕೆ ನೆರೆಯ ಜಿಲ್ಲೆಗಳಿಂದ ಅಪಾರ ಭಕ್ತರು ಬರುತ್ತಾರೆ. ಮೂಲಸೌಕರ್ಯ ಕಲ್ಪಿಸುವ ಅಗತ್ಯವಿದ್ದು, ಸ್ಥಳೀಯರ ನಿರೀಕ್ಷೆ ಮೀರಿ ಅನುದಾನ ನೀಡಿರುವ ಸಂಸದ ತುಕಾರಾಂ ಅವರನ್ನು ಅಭಿನಂದಿಸುವೆ ಎಂದರು.</p>.<p>ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿಜಯಕುಮಾರ್, ಮುಖಂಡರಾದ ಅಕ್ಕಿ ತೋಟೇಶ, ಸೋಗಿ ಹಾಲೇಶ, ಎಸ್.ದೂದನಾಯ್ಕ, ಕುರಿ ಶಿವಮೂರ್ತಿ, ಪಿ.ಟಿ.ಭರತ್, ಕೆ.ಎಸ್.ಶಾಂತನಗೌಡ ಪಾಲ್ಗೊಂಡಿದ್ದರು.</p>.<p> ಅಂಚೆ ಕಚೇರಿಗೆ ₹1.60 ಕೋಟಿ ಮಂಜೂರು ಹೂವಿನಹಡಗಲಿ: ಪಟ್ಟಣದಲ್ಲಿ ಅಂಚೆ ಕಚೇರಿ ನಿರ್ಮಾಣಕ್ಕೆ ₹1.60 ಕೋಟಿ ಮಂಜೂರಾಗಿದೆ ಎಂದು ಸಂಸದ ಇ.ತುಕಾರಾಂ ತಿಳಿಸಿದರು. ಮುಂದಿನ ತಿಂಗಳು ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಅಂಚೆ ಇಲಾಖೆಗೆ ಕಾಯ್ದಿಟ್ಟ ನಿವೇಶನದಲ್ಲಿ ಸುಸಜ್ಜಿತ ಕಚೇರಿ ನಿರ್ಮಿಸಲಾಗುವುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>