<p><strong>ಬಳ್ಳಾರಿ:</strong> ನಗರದ ಗಡಿಗಿ ಚನ್ನಪ್ಪ (ರಾಯಲ್) ವೃತ್ತದಲ್ಲಿದ್ದ ಪಾಲಿಕೆಯ ವಾಣಿಜ್ಯ ಕಟ್ಟಡವನ್ನು ಪಾಲಿಕೆ ಸೋಮವಾರ ತೆರವುಗೊಳಿಸಿದೆ.</p>.<p>ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಸದ್ಯ ಬೃಹತ್ ಗಡಿಯಾರ ಗೋಪುರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ವೃತ್ತದಲ್ಲಿ ನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು. ಇದನ್ನು ಪರಿಹರಿಸಲು ಪಾಲಿಕೆ ತನ್ನ ಸ್ವಂತ ವಾಣಿಜ್ಯ ಕಟ್ಟಡವನ್ನು ಧ್ವಂಸ ಮಾಡಿದೆ.</p>.<p>ಭಾನುವಾರ ರಾತ್ರಿ ಆರಂಭವಾದ ಕಟ್ಟಡ ತೆರವು ಕಾರ್ಯ ಸೋಮವಾರ ಸಂಜೆವರೆಗೆ ಮುಂದುವರಿದಿತ್ತು. ಹೀಗಾಗಿ ವೃತ್ತದಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಯಿತು. ಪಾಲಿಕೆಯ ಎರಡು ಅಂತಸ್ಥಿನ ಈ ಕಟ್ಟಡದಲ್ಲಿ ಒಟ್ಟು 12 ಮಳಿಗೆಗಳಿದ್ದವು. ಬಟ್ಟೆ ಅಂಗಡಿ, ಹೋಟೆಲ್ಗಳು ಇದರಲ್ಲಿದ್ದವು.</p>.<p>‘ಕಟ್ಟಡ ಧ್ವಂಸಗೊಳಿಸಿರುವುದು ಪಾಲಿಕೆಗೆ ಆಗಿರುವ ನಷ್ಟವೇ ಆದರೂ, ನಗರದ ನಾಗರಿಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕಟ್ಟಡ ತೆರವಾದರೆ ಗಡಿಗಿ ಚನ್ನಪ್ಪ ವೃತ್ತದಲ್ಲಿ ಸಂಚಾರ ಸಮಸ್ಯೆ ನಿವಾರಣೆಯಾಗಲಿದೆ’ ಎಂದು ಪಾಲಿಕೆಯ ವಲಯ ಆಯುಕ್ತ ಗುರುರಾಜ್ ಸವದಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ನಗರದ ಗಡಿಗಿ ಚನ್ನಪ್ಪ (ರಾಯಲ್) ವೃತ್ತದಲ್ಲಿದ್ದ ಪಾಲಿಕೆಯ ವಾಣಿಜ್ಯ ಕಟ್ಟಡವನ್ನು ಪಾಲಿಕೆ ಸೋಮವಾರ ತೆರವುಗೊಳಿಸಿದೆ.</p>.<p>ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಸದ್ಯ ಬೃಹತ್ ಗಡಿಯಾರ ಗೋಪುರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ವೃತ್ತದಲ್ಲಿ ನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು. ಇದನ್ನು ಪರಿಹರಿಸಲು ಪಾಲಿಕೆ ತನ್ನ ಸ್ವಂತ ವಾಣಿಜ್ಯ ಕಟ್ಟಡವನ್ನು ಧ್ವಂಸ ಮಾಡಿದೆ.</p>.<p>ಭಾನುವಾರ ರಾತ್ರಿ ಆರಂಭವಾದ ಕಟ್ಟಡ ತೆರವು ಕಾರ್ಯ ಸೋಮವಾರ ಸಂಜೆವರೆಗೆ ಮುಂದುವರಿದಿತ್ತು. ಹೀಗಾಗಿ ವೃತ್ತದಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಯಿತು. ಪಾಲಿಕೆಯ ಎರಡು ಅಂತಸ್ಥಿನ ಈ ಕಟ್ಟಡದಲ್ಲಿ ಒಟ್ಟು 12 ಮಳಿಗೆಗಳಿದ್ದವು. ಬಟ್ಟೆ ಅಂಗಡಿ, ಹೋಟೆಲ್ಗಳು ಇದರಲ್ಲಿದ್ದವು.</p>.<p>‘ಕಟ್ಟಡ ಧ್ವಂಸಗೊಳಿಸಿರುವುದು ಪಾಲಿಕೆಗೆ ಆಗಿರುವ ನಷ್ಟವೇ ಆದರೂ, ನಗರದ ನಾಗರಿಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕಟ್ಟಡ ತೆರವಾದರೆ ಗಡಿಗಿ ಚನ್ನಪ್ಪ ವೃತ್ತದಲ್ಲಿ ಸಂಚಾರ ಸಮಸ್ಯೆ ನಿವಾರಣೆಯಾಗಲಿದೆ’ ಎಂದು ಪಾಲಿಕೆಯ ವಲಯ ಆಯುಕ್ತ ಗುರುರಾಜ್ ಸವದಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>