ತಾಲ್ಲೂಕಿನ ರಾಮನಗರದ ಪರಿಶಿಷ್ಟ ಪಂಗಡದವರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವಂತೂ ವೆಂಕೋಬಣ್ಣನವರ ಧರ್ಮಛತ್ರದಲ್ಲಿ ನಡೆಯುತ್ತಿದೆ. ಕಳೆದ ಐದು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯು ಈ ಕಟ್ಟಡವನ್ನು ಬಾಡಿಗೆಗೆ ಪಡೆದು ನಡೆಸುತ್ತಿದೆ. ಇದಕ್ಕೂ ಮುನ್ನ ಬಂಡಿಹಳ್ಳಿ ರಸ್ತೆಯ ಖಾಸಗಿ ಕಟ್ಟಡದಲ್ಲಿತ್ತು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇಲ್ಲದ ಕಾರಣ ಸ್ಥಳಾಂತರಿಸಲಾಗಿದೆ. ಧರ್ಮಛತ್ರದಲ್ಲಿ ವಿದ್ಯಾರ್ಥಿಗಳ ವಾಸಕ್ಕೆ ಅಗತ್ಯ ಕೊಠಡಿಗಳಿವೆ. ಆದರೆ, ಕಟ್ಟಡ ಹಳೆಯದಾಗಿರುವುದರಿಂದ ಮಳೆ ಬಂದರೆ ನೀರು ಜಿನುಗುತ್ತದೆ. ವಿದ್ಯಾರ್ಥಿಗಳು ಉಪಾಹಾರ, ಊಟ ಮತ್ತು ಅಧ್ಯಯನ ಒಂದೇ ಸಭಾಂಗಣದಲ್ಲೇ ಮಾಡುತ್ತಿದ್ದಾರೆ.