<p><strong>ಹಗರಿಬೊಮ್ಮನಹಳ್ಳಿ:</strong> ತಾಲ್ಲೂಕಿನ ಬ್ಯಾಲಾಳು ಕೆರೆ ಮೊದಲ ಬಾರಿಗೆ ಅಪರೂಪದ ಬಾನಾಡಿಗಳಿಗೆ ಆಶ್ರಯ ನೀಡಿದೆ. ಅಂಕಸಮುದ್ರ ಪಕ್ಷಿಧಾಮದಲ್ಲಿ ಕಲ್ಲು ಮರಳಿನ ಕೃತಕ ಹಾಸಿಗೆ ನಿರ್ಮಿಸಿದರೂ ಅತ್ತಕಡೆ ಸುಳಿಯದ ರಿವರ್ ಟರ್ನ್(ನದಿ ರೀವ) ಇಲ್ಲಿನ ಕೆರೆಯ ನಡುಗಡ್ಡೆಯಲ್ಲಿ ಆವಾಸ ಮಾಡಿಕೊಂಡಿದೆ, ಐದಕ್ಕೂ ಹೆಚ್ಚು ಈ ಪ್ರದೇಶದಲ್ಲಿ ಕಾಣಿಸಿಕೊಂಡಿವೆ.</p>.<p>ಜತೆಯಲ್ಲಿ ಸ್ಪೂನ್ಬಿಲ್ಡ್ ಸ್ಟಾರ್ಕ್(ಚಮಚದ ಕೊಕ್ಕರೆ), ಕಾಮನ್ ಗ್ರೀನ್ಶ್ಯಾಂಕ್, ಯೆಲ್ಲೋ ವಾಗ್ಟೆಲ್ (ಹಳದಿ ಸಿಪಿಲೆ), ಕಾರ್ಮೋರೆಂಟ್ (ನೀರು ಕಾಗೆ), ಸ್ಪಾಟ್ ಬಿಲ್ಡ್ ಡಕ್ (ವರಟೆ ಬಾತು), ಪೈಯ್ಡ್ ಕಿಂಗ್ಫಿಶರ್ (ಕಪ್ಪುಬಿಳಿ ಮಿಂಚುಳ್ಳಿ) ಕೆರೆಯ ಮಧ್ಯಭಾಗದ ಗಿಡಗಳಲ್ಲಿ ವಿಶ್ರಮಿಸುತ್ತಿವೆ.</p>.<p>ಮಾಲವಿ ಜಲಾಶಯದಿಂದ ಸತತ ಎರಡು ತಿಂಗಳು ಕಾಲುವೆ ಮೂಲಕ ಕೆರೆಗೆ ನೀರು ಹರಿಸಲಾಗಿತ್ತು, ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಪಕ್ಷಿಗಳಿಗೆ ವರವಾಗಿ ಪರಿಣಮಿಸಿದೆ. ಅವುಗಳಿಗೆ ಅಗತ್ಯವಾದ ಆಹಾರವೂ ಇಲ್ಲಿ ದೊರೆಯುತ್ತಿದೆ, ಇದರಿಂದಾಗಿ ಬ್ಯಾಲಾಳು ಕೆರೆಗೆ ಮಹತ್ವ ಬಂದಿದೆ.</p>.<p>ಕೆರೆಗಳಲ್ಲಿನ ಗಿಡಮರಗಳಲ್ಲಿ ಸ್ಥಳೀಯ ಮತ್ತು ವಿದೇಶಿ ಹಕ್ಕಿಗಳ ಕಲರವ ಕೇಳಿಸುತ್ತಿದೆ, ಇದರಿಂದಾಗಿ ಪಕ್ಷಿ ಪ್ರೇಮಿಗಳಲ್ಲಿ ಸಂತಸ ಮನೆ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ:</strong> ತಾಲ್ಲೂಕಿನ ಬ್ಯಾಲಾಳು ಕೆರೆ ಮೊದಲ ಬಾರಿಗೆ ಅಪರೂಪದ ಬಾನಾಡಿಗಳಿಗೆ ಆಶ್ರಯ ನೀಡಿದೆ. ಅಂಕಸಮುದ್ರ ಪಕ್ಷಿಧಾಮದಲ್ಲಿ ಕಲ್ಲು ಮರಳಿನ ಕೃತಕ ಹಾಸಿಗೆ ನಿರ್ಮಿಸಿದರೂ ಅತ್ತಕಡೆ ಸುಳಿಯದ ರಿವರ್ ಟರ್ನ್(ನದಿ ರೀವ) ಇಲ್ಲಿನ ಕೆರೆಯ ನಡುಗಡ್ಡೆಯಲ್ಲಿ ಆವಾಸ ಮಾಡಿಕೊಂಡಿದೆ, ಐದಕ್ಕೂ ಹೆಚ್ಚು ಈ ಪ್ರದೇಶದಲ್ಲಿ ಕಾಣಿಸಿಕೊಂಡಿವೆ.</p>.<p>ಜತೆಯಲ್ಲಿ ಸ್ಪೂನ್ಬಿಲ್ಡ್ ಸ್ಟಾರ್ಕ್(ಚಮಚದ ಕೊಕ್ಕರೆ), ಕಾಮನ್ ಗ್ರೀನ್ಶ್ಯಾಂಕ್, ಯೆಲ್ಲೋ ವಾಗ್ಟೆಲ್ (ಹಳದಿ ಸಿಪಿಲೆ), ಕಾರ್ಮೋರೆಂಟ್ (ನೀರು ಕಾಗೆ), ಸ್ಪಾಟ್ ಬಿಲ್ಡ್ ಡಕ್ (ವರಟೆ ಬಾತು), ಪೈಯ್ಡ್ ಕಿಂಗ್ಫಿಶರ್ (ಕಪ್ಪುಬಿಳಿ ಮಿಂಚುಳ್ಳಿ) ಕೆರೆಯ ಮಧ್ಯಭಾಗದ ಗಿಡಗಳಲ್ಲಿ ವಿಶ್ರಮಿಸುತ್ತಿವೆ.</p>.<p>ಮಾಲವಿ ಜಲಾಶಯದಿಂದ ಸತತ ಎರಡು ತಿಂಗಳು ಕಾಲುವೆ ಮೂಲಕ ಕೆರೆಗೆ ನೀರು ಹರಿಸಲಾಗಿತ್ತು, ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಪಕ್ಷಿಗಳಿಗೆ ವರವಾಗಿ ಪರಿಣಮಿಸಿದೆ. ಅವುಗಳಿಗೆ ಅಗತ್ಯವಾದ ಆಹಾರವೂ ಇಲ್ಲಿ ದೊರೆಯುತ್ತಿದೆ, ಇದರಿಂದಾಗಿ ಬ್ಯಾಲಾಳು ಕೆರೆಗೆ ಮಹತ್ವ ಬಂದಿದೆ.</p>.<p>ಕೆರೆಗಳಲ್ಲಿನ ಗಿಡಮರಗಳಲ್ಲಿ ಸ್ಥಳೀಯ ಮತ್ತು ವಿದೇಶಿ ಹಕ್ಕಿಗಳ ಕಲರವ ಕೇಳಿಸುತ್ತಿದೆ, ಇದರಿಂದಾಗಿ ಪಕ್ಷಿ ಪ್ರೇಮಿಗಳಲ್ಲಿ ಸಂತಸ ಮನೆ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>