<p><strong>ಹೊಸಪೇಟೆ(ವಿಜಯನಗರ)</strong>: ಕೆಳವರ್ಗದ ವಚನಕಾರರಿಂದ ಹೊಸ ದರ್ಶನ ಮಾಡಿಸಲು ಶೂನ್ಯ ಸಂಪಾದನೆಗಳು ಪ್ರಯತ್ನಿಸಿದ್ದು, ಶೂನ್ಯ ಸಂಪಾದನೆಗಳು ಮಹಿಳಾ ವಚನಕಾರ್ತಿಯರ ಘನತೆಯನ್ನು ಎತ್ತಿಹಿಡಿದಿವೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅಮರೇಶ ನುಗಡೋಣಿ ಹೇಳಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜ್ಞಾನನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಅನುಭವ ಮಂಟಪದ ಚರ್ಚೆಯಲ್ಲಿ ಸಂದರ್ಭಾನುಸಾರ ಸಂವಾದ ಸ್ವರೂಪದಲ್ಲಿ ವಚನಕಾರರು ಆಡಿದ ಮಾತುಗಳೇ ವಚನಗಳಾಗುತ್ತವೆ. ಶರಣರ ವಚನಗಳನ್ನು ಹೀಗೆಯೇ ಓದಿ ಎಂದು ಶಿವಗಣಪ್ರಸಾದಿ ಮಹಾದೇವಯ್ಯನವರು ಹೇಳಿದ್ದಾರೆ ಎಂದರು.</p>.<p>ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಹಿರಿಯ ಪ್ರಾಧ್ಯಾಪಕ ಪ್ರೊ.ಕೆ. ರವೀಂದ್ರನಾಥ, ಅಧ್ಯಾಪಕ ಪ್ರೊ.ಯರ್ರಿಸ್ವಾಮಿ, ಪ್ರೊ.ಡಿ. ಮೀನಾಕ್ಷಿ, ಶಕುಂತಲ, ಕೃಪಾಶಂಕರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ(ವಿಜಯನಗರ)</strong>: ಕೆಳವರ್ಗದ ವಚನಕಾರರಿಂದ ಹೊಸ ದರ್ಶನ ಮಾಡಿಸಲು ಶೂನ್ಯ ಸಂಪಾದನೆಗಳು ಪ್ರಯತ್ನಿಸಿದ್ದು, ಶೂನ್ಯ ಸಂಪಾದನೆಗಳು ಮಹಿಳಾ ವಚನಕಾರ್ತಿಯರ ಘನತೆಯನ್ನು ಎತ್ತಿಹಿಡಿದಿವೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅಮರೇಶ ನುಗಡೋಣಿ ಹೇಳಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜ್ಞಾನನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಅನುಭವ ಮಂಟಪದ ಚರ್ಚೆಯಲ್ಲಿ ಸಂದರ್ಭಾನುಸಾರ ಸಂವಾದ ಸ್ವರೂಪದಲ್ಲಿ ವಚನಕಾರರು ಆಡಿದ ಮಾತುಗಳೇ ವಚನಗಳಾಗುತ್ತವೆ. ಶರಣರ ವಚನಗಳನ್ನು ಹೀಗೆಯೇ ಓದಿ ಎಂದು ಶಿವಗಣಪ್ರಸಾದಿ ಮಹಾದೇವಯ್ಯನವರು ಹೇಳಿದ್ದಾರೆ ಎಂದರು.</p>.<p>ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಹಿರಿಯ ಪ್ರಾಧ್ಯಾಪಕ ಪ್ರೊ.ಕೆ. ರವೀಂದ್ರನಾಥ, ಅಧ್ಯಾಪಕ ಪ್ರೊ.ಯರ್ರಿಸ್ವಾಮಿ, ಪ್ರೊ.ಡಿ. ಮೀನಾಕ್ಷಿ, ಶಕುಂತಲ, ಕೃಪಾಶಂಕರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>