<p><strong>ತೆಕ್ಕಲಕೋಟೆ:</strong> ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಮತ್ತು ಶನಿವಾರ ಬೆಳಗಿನ ಜಾವದಿಂದ ಎಡೆಬಿಡದೆ ಮಳೆ ಸುರಿದಿದ್ದು, ಸಂಜೆವರೆಗೂ ಮುಂದುವರೆಯಿತು. ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ.</p>.<p>ಪೊಪ್ಪನಾಳ ಗ್ರಾಮದ ಬಸವನಗೌಡ, ಕರೂರು ಗ್ರಾಮದ ರಾಧ ಸ್ವಾಮಿ, ಶೇಖಣ್ಣ, ಸಿರಿಗೇರಿ ಗ್ರಾಮದ ಸಣ್ಣ ಮೌಲಸಾಬ್, ಉಪ್ಪಾರ ಹೊಸಳ್ಳಿ ಗ್ರಾಮದ ಎಲಿಗಾರ್ ವೀರಭದ್ರಗೌಡ, ದರೂರು ಗ್ರಾಮದ ರೋಶಪ್ಪ, ಭೈರಾಪುರ ಗ್ರಾಮದ ಆದೆಪ್ಪ ಇವರ ವಾಸದ ಮನೆ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ 7 ಮನೆಗಳು ಭಾಗಶಃ ಬಿದ್ದಿರುತ್ತವೆ ಎಂದು ಕಂದಾಯ ಇಲಾಖೆ ವರದಿ ನೀಡಿದೆ.</p>.<p>ಉಪ್ಪಾರ ಹೊಸಳ್ಳಿ, ಬಲಕುಂದಿ, ನಿಟ್ಟೂರು, ಕರೂರು, ದೇವಿನಗರ, ಭೈರಾಪುರ, ಸಿರಿಗೇರಿ, ಎಂ.ಸುಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.</p>.<p>ಭಾನುವಾರ ಮತ್ತು ಸೋಮವಾರ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.</p>.<p><strong>ಮಳೆ ವಿವರ:</strong> </p><p>ತೆಕ್ಕಲಕೋಟೆ 5.58 ಸೆ.ಮೀ, ಸಿರಿಗೇರಿ 3.64 ಸೆ.ಮೀ, ಎಂ. ಸೂಗೂರು 4.24 ಸೆ.ಮೀ, ಕರೂರು 2.42 ಸೆ.ಮೀ, ಕುಡುದರ ಹಾಳು 8.30 ಸೆ.ಮೀ, ತಾಳೂರು 2.20 ಸೆ.ಮೀ ಮಳೆ ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ:</strong> ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಮತ್ತು ಶನಿವಾರ ಬೆಳಗಿನ ಜಾವದಿಂದ ಎಡೆಬಿಡದೆ ಮಳೆ ಸುರಿದಿದ್ದು, ಸಂಜೆವರೆಗೂ ಮುಂದುವರೆಯಿತು. ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ.</p>.<p>ಪೊಪ್ಪನಾಳ ಗ್ರಾಮದ ಬಸವನಗೌಡ, ಕರೂರು ಗ್ರಾಮದ ರಾಧ ಸ್ವಾಮಿ, ಶೇಖಣ್ಣ, ಸಿರಿಗೇರಿ ಗ್ರಾಮದ ಸಣ್ಣ ಮೌಲಸಾಬ್, ಉಪ್ಪಾರ ಹೊಸಳ್ಳಿ ಗ್ರಾಮದ ಎಲಿಗಾರ್ ವೀರಭದ್ರಗೌಡ, ದರೂರು ಗ್ರಾಮದ ರೋಶಪ್ಪ, ಭೈರಾಪುರ ಗ್ರಾಮದ ಆದೆಪ್ಪ ಇವರ ವಾಸದ ಮನೆ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ 7 ಮನೆಗಳು ಭಾಗಶಃ ಬಿದ್ದಿರುತ್ತವೆ ಎಂದು ಕಂದಾಯ ಇಲಾಖೆ ವರದಿ ನೀಡಿದೆ.</p>.<p>ಉಪ್ಪಾರ ಹೊಸಳ್ಳಿ, ಬಲಕುಂದಿ, ನಿಟ್ಟೂರು, ಕರೂರು, ದೇವಿನಗರ, ಭೈರಾಪುರ, ಸಿರಿಗೇರಿ, ಎಂ.ಸುಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.</p>.<p>ಭಾನುವಾರ ಮತ್ತು ಸೋಮವಾರ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.</p>.<p><strong>ಮಳೆ ವಿವರ:</strong> </p><p>ತೆಕ್ಕಲಕೋಟೆ 5.58 ಸೆ.ಮೀ, ಸಿರಿಗೇರಿ 3.64 ಸೆ.ಮೀ, ಎಂ. ಸೂಗೂರು 4.24 ಸೆ.ಮೀ, ಕರೂರು 2.42 ಸೆ.ಮೀ, ಕುಡುದರ ಹಾಳು 8.30 ಸೆ.ಮೀ, ತಾಳೂರು 2.20 ಸೆ.ಮೀ ಮಳೆ ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>