<p><strong>ಸಿರುಗುಪ್ಪ:</strong> ‘ಭಾರತದ ಹಿಂದೂ ಧರ್ಮದಲ್ಲಿ ವೇದ ಉಪನಿಷತ್ತು, ಪುರಾಣಗಳಲ್ಲಿ ವೈಚಾರಿಕ ಕ್ರಾಂತಿ ಅಡಗಿದೆ’ ಎಂದು ಹಾಲ್ವಿ ಮಠಾಧಿಪತಿ ಅಭಿನವ ಮಹಾಂತ ಸ್ವಾಮಿ ಹೇಳಿದರು.</p>.<p>ತಾಲ್ಲೂಕಿನ ಕರ್ಚಿಗನೂರು ಗ್ರಾಮದ ಹಾಲ್ವಿ ಮಹಾಂತೇಶ್ವರ ಮಠದಲ್ಲಿ ಹಿಂದೂ ಸಮಿತಿ, ಕರ್ಚಿಗನೂರು, ಬಗ್ಗೂರು ಮಂಡಲ ವತಿಯಿಂದ ಭಾನುವಾರ ಸಂಜೆ ನಡೆದ ಹಿಂದೂ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ‘ಹಿಂದೂಗಳು ಜಾತಿ ಜಾತಿಗಳ ಹೆಸರಿನಲ್ಲಿ ಬೇರ್ಪಡಬಾರದು, ಎಲ್ಲರೂ ಒಂದಾಗಬೇಕು’ ಎಂದರು.</p>.<p>ಹಿಂದು ಸಮಿತಿ ಜಿಲ್ಲಾ ಸಂಚಾಲಕ ಪ್ರಸನ್ನ ಮಾತನಾಡಿ, ‘ದೇಶದ ಸಂಪತ್ತು, ಪ್ರಕೃತಿ ಪರಿಸರ, ನದಿಗಳು, ಐತಿಹಾಸಿಕ ಕೋಟೆಗಳು ದೇವಾಲಯಗಳು ಎಲ್ಲವನ್ನು ಉಳಿಸಿ ಬೆಳೆಸುವ ಮೂಲಕ ದೇಶಪ್ರೇಮ ನಮ್ಮ ಸಂಸ್ಕೃತಿಯನ್ನು ಕಾಪಾಡುವ ಹೊಣೆ ನಮ್ಮದಾಗಬೇಕು’ ಎಂದು ಕರೆ ನೀಡಿದರು.</p>.<p>ಗ್ರಾಮದಲ್ಲಿ ಕೇಸರಿ ಶಾಲು ಹಾಕಿಕೊಂಡು ದೇಶ ಧರ್ಮ ಘೋಷಣೆಗಳನ್ನು ಕೂಗುತ್ತ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.</p>.<p>ಹಿಂದೂ ಸಮಿತಿಯ ಉಪಾಧ್ಯಕ್ಷ ಚಾಗಿ ಸುಬ್ಬಯ್ಯ, ಸಂಚಾಲಕರಾದ ಆರ್.ಸದಾಶಿವ, ತ್ರಿವೇಣಿ, ಜೆ. ನರಸಿಂಹಮೂರ್ತಿ, ಎರ್ರೆಪ್ಪಗೌಡ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ:</strong> ‘ಭಾರತದ ಹಿಂದೂ ಧರ್ಮದಲ್ಲಿ ವೇದ ಉಪನಿಷತ್ತು, ಪುರಾಣಗಳಲ್ಲಿ ವೈಚಾರಿಕ ಕ್ರಾಂತಿ ಅಡಗಿದೆ’ ಎಂದು ಹಾಲ್ವಿ ಮಠಾಧಿಪತಿ ಅಭಿನವ ಮಹಾಂತ ಸ್ವಾಮಿ ಹೇಳಿದರು.</p>.<p>ತಾಲ್ಲೂಕಿನ ಕರ್ಚಿಗನೂರು ಗ್ರಾಮದ ಹಾಲ್ವಿ ಮಹಾಂತೇಶ್ವರ ಮಠದಲ್ಲಿ ಹಿಂದೂ ಸಮಿತಿ, ಕರ್ಚಿಗನೂರು, ಬಗ್ಗೂರು ಮಂಡಲ ವತಿಯಿಂದ ಭಾನುವಾರ ಸಂಜೆ ನಡೆದ ಹಿಂದೂ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ‘ಹಿಂದೂಗಳು ಜಾತಿ ಜಾತಿಗಳ ಹೆಸರಿನಲ್ಲಿ ಬೇರ್ಪಡಬಾರದು, ಎಲ್ಲರೂ ಒಂದಾಗಬೇಕು’ ಎಂದರು.</p>.<p>ಹಿಂದು ಸಮಿತಿ ಜಿಲ್ಲಾ ಸಂಚಾಲಕ ಪ್ರಸನ್ನ ಮಾತನಾಡಿ, ‘ದೇಶದ ಸಂಪತ್ತು, ಪ್ರಕೃತಿ ಪರಿಸರ, ನದಿಗಳು, ಐತಿಹಾಸಿಕ ಕೋಟೆಗಳು ದೇವಾಲಯಗಳು ಎಲ್ಲವನ್ನು ಉಳಿಸಿ ಬೆಳೆಸುವ ಮೂಲಕ ದೇಶಪ್ರೇಮ ನಮ್ಮ ಸಂಸ್ಕೃತಿಯನ್ನು ಕಾಪಾಡುವ ಹೊಣೆ ನಮ್ಮದಾಗಬೇಕು’ ಎಂದು ಕರೆ ನೀಡಿದರು.</p>.<p>ಗ್ರಾಮದಲ್ಲಿ ಕೇಸರಿ ಶಾಲು ಹಾಕಿಕೊಂಡು ದೇಶ ಧರ್ಮ ಘೋಷಣೆಗಳನ್ನು ಕೂಗುತ್ತ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.</p>.<p>ಹಿಂದೂ ಸಮಿತಿಯ ಉಪಾಧ್ಯಕ್ಷ ಚಾಗಿ ಸುಬ್ಬಯ್ಯ, ಸಂಚಾಲಕರಾದ ಆರ್.ಸದಾಶಿವ, ತ್ರಿವೇಣಿ, ಜೆ. ನರಸಿಂಹಮೂರ್ತಿ, ಎರ್ರೆಪ್ಪಗೌಡ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>