<p><strong>ಬಳ್ಳಾರಿ</strong>: ಬಳ್ಳಾರಿ ತಾಲ್ಲೂಕಿನ ಅಸುಂಡಿಯಲ್ಲಿ ಸರ್ಕಾರದಿಂದ ಮರಳು ಯಾರ್ಡ್ ಗುತ್ತಿಗೆ ಪಡೆದಿರುವ ಗುತ್ತಿಗೆದಾರರೊಬ್ಬರ ವಿರುದ್ಧ ಅಕ್ರಮ ಮರಳುಗಾರಿಕೆಯ ಆರೋಪ ಕೇಳಿ ಬಂದಿದ್ದು, ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಇದರ ಆಧಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.</p>.<p>ಗುತ್ತಿಗೆದಾರ ತನ್ನ ಗುತ್ತಿಗೆ ಪ್ರದೇಶವನ್ನು ಹೊರತುಪಡಿಸಿ, ಬೇರೆ ಕಡೆಯಿಂದ ಅಕ್ರಮವಾಗಿ ಮರಳನ್ನು ತಂದು ತೊಲಮಾಮಿಡಿ ಮತ್ತು ಯಾಳ್ಪಿ ಗ್ರಾಮದ ಜಮೀನುಗಳಲ್ಲಿ ಸಂಗ್ರಹಿಸಿಟ್ಟಿರುವುದಾಗಿ ಅಸುಂಡಿ ಗ್ರಾಮದ ವಿಜಯ ಎಂಬುವವರು ದೂರು ನೀಡಿದ್ದರು. ಈ ದೂರು ಆಧರಿಸಿ ಸದ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ತನಿಖೆ ಕೈಗೊಂಡಿದೆ ಎಂದು ಗೊತ್ತಾಗಿದೆ. </p>.<p><strong>ದೂರಿನಲ್ಲಿ ಏನಿದೆ:</strong> ‘ಅಸುಂಡಿ ಗ್ರಾಮದ ವಿವಿಧ ಸರ್ವೆ ನಂಬರ್ಗಳ 11.15 ಎಕರೆಯಲ್ಲಿ ಬಳ್ಳಾರಿ ನಗರದ ರಾಮಕೃಷ್ಣ ರಾವ್ ಎಂಬುವವರಿಗೆ ಮರಳು ಯಾರ್ಡ್ ಮಂಜೂರಾಗಿದೆ. ಆದರೆ, ಈ ಸ್ಥಳದಲ್ಲಿ ಈಗ ಮರಳು ದಾಸ್ತಾನು ಖಾಲಿಯಾಗಿದೆ. ಆದ್ದರಿಂದ ವೇದಾವತಿ ನದಿಯಿಂದ ಮರಳನ್ನು ತಂದು ತಮ್ಮ ಜಮೀನುಗಳಲ್ಲಿ ಅಕ್ರಮವಾಗಿ ಶೇಖರಿಸಿಟ್ಟು, ಬಳಿಕ ತಮ್ಮ ಗುತ್ತಿಗೆಯಿಂದ ಮಾರಾಟ ಮಾಡುತ್ತಿದ್ದಾರೆ’ ಎಂದು ವಿಜಯ್ ಆರೋಪಿಸಿದ್ದಾರೆ. </p>.<p class="Subhead"><strong>ತಂಡ ರಚನೆ:</strong> ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ದೂರಿನ ತನಿಖೆಗೆ ಮುಂದಾಗಿದ್ದು, ಅದಕ್ಕಾಗಿ ಅಧಿಕಾರಿಗಳ ತಂಡ ರಚಿಸಿದೆ. ಮರಳಿನ ಪರೀಕ್ಷೆ ನಡೆಸುತ್ತಿದೆ. ಡ್ರೋಣ್ಗಳ ಮೂಲಕ ಸರ್ವೆ ಮಾಡಿಸುತ್ತಿದೆ. ತನಿಖಾ ತಂಡ ವರದಿ ಆಧರಿಸಿ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಇಲಾಖೆಯು ಅಲ್ಲಿಯ ವರೆಗೆ ಮರಳು ಸಾಗಣೆ ಮಾಡದಂತೆ ಗುತ್ತಿಗೆದಾರನಿಗೆ ತಾಕೀತು ಮಾಡಿದೆ. </p>.<p>ಸ್ಥಳದಲ್ಲಿ ಅಂದಾಜು 30 ಸಾವಿರ ಟನ್ನಷ್ಟು ಮರಳು ದಾಸ್ತಾನಿರಬಹುದು ಎಂದು ಬಲ್ಲ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ಬಳ್ಳಾರಿ ತಾಲ್ಲೂಕಿನ ಅಸುಂಡಿಯಲ್ಲಿ ಸರ್ಕಾರದಿಂದ ಮರಳು ಯಾರ್ಡ್ ಗುತ್ತಿಗೆ ಪಡೆದಿರುವ ಗುತ್ತಿಗೆದಾರರೊಬ್ಬರ ವಿರುದ್ಧ ಅಕ್ರಮ ಮರಳುಗಾರಿಕೆಯ ಆರೋಪ ಕೇಳಿ ಬಂದಿದ್ದು, ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಇದರ ಆಧಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.</p>.<p>ಗುತ್ತಿಗೆದಾರ ತನ್ನ ಗುತ್ತಿಗೆ ಪ್ರದೇಶವನ್ನು ಹೊರತುಪಡಿಸಿ, ಬೇರೆ ಕಡೆಯಿಂದ ಅಕ್ರಮವಾಗಿ ಮರಳನ್ನು ತಂದು ತೊಲಮಾಮಿಡಿ ಮತ್ತು ಯಾಳ್ಪಿ ಗ್ರಾಮದ ಜಮೀನುಗಳಲ್ಲಿ ಸಂಗ್ರಹಿಸಿಟ್ಟಿರುವುದಾಗಿ ಅಸುಂಡಿ ಗ್ರಾಮದ ವಿಜಯ ಎಂಬುವವರು ದೂರು ನೀಡಿದ್ದರು. ಈ ದೂರು ಆಧರಿಸಿ ಸದ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ತನಿಖೆ ಕೈಗೊಂಡಿದೆ ಎಂದು ಗೊತ್ತಾಗಿದೆ. </p>.<p><strong>ದೂರಿನಲ್ಲಿ ಏನಿದೆ:</strong> ‘ಅಸುಂಡಿ ಗ್ರಾಮದ ವಿವಿಧ ಸರ್ವೆ ನಂಬರ್ಗಳ 11.15 ಎಕರೆಯಲ್ಲಿ ಬಳ್ಳಾರಿ ನಗರದ ರಾಮಕೃಷ್ಣ ರಾವ್ ಎಂಬುವವರಿಗೆ ಮರಳು ಯಾರ್ಡ್ ಮಂಜೂರಾಗಿದೆ. ಆದರೆ, ಈ ಸ್ಥಳದಲ್ಲಿ ಈಗ ಮರಳು ದಾಸ್ತಾನು ಖಾಲಿಯಾಗಿದೆ. ಆದ್ದರಿಂದ ವೇದಾವತಿ ನದಿಯಿಂದ ಮರಳನ್ನು ತಂದು ತಮ್ಮ ಜಮೀನುಗಳಲ್ಲಿ ಅಕ್ರಮವಾಗಿ ಶೇಖರಿಸಿಟ್ಟು, ಬಳಿಕ ತಮ್ಮ ಗುತ್ತಿಗೆಯಿಂದ ಮಾರಾಟ ಮಾಡುತ್ತಿದ್ದಾರೆ’ ಎಂದು ವಿಜಯ್ ಆರೋಪಿಸಿದ್ದಾರೆ. </p>.<p class="Subhead"><strong>ತಂಡ ರಚನೆ:</strong> ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ದೂರಿನ ತನಿಖೆಗೆ ಮುಂದಾಗಿದ್ದು, ಅದಕ್ಕಾಗಿ ಅಧಿಕಾರಿಗಳ ತಂಡ ರಚಿಸಿದೆ. ಮರಳಿನ ಪರೀಕ್ಷೆ ನಡೆಸುತ್ತಿದೆ. ಡ್ರೋಣ್ಗಳ ಮೂಲಕ ಸರ್ವೆ ಮಾಡಿಸುತ್ತಿದೆ. ತನಿಖಾ ತಂಡ ವರದಿ ಆಧರಿಸಿ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಇಲಾಖೆಯು ಅಲ್ಲಿಯ ವರೆಗೆ ಮರಳು ಸಾಗಣೆ ಮಾಡದಂತೆ ಗುತ್ತಿಗೆದಾರನಿಗೆ ತಾಕೀತು ಮಾಡಿದೆ. </p>.<p>ಸ್ಥಳದಲ್ಲಿ ಅಂದಾಜು 30 ಸಾವಿರ ಟನ್ನಷ್ಟು ಮರಳು ದಾಸ್ತಾನಿರಬಹುದು ಎಂದು ಬಲ್ಲ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>