ಗುಜರಾತಿ ಸಾಹಿತಿ ಪ್ರೊ. ಸೇಜಲ್ ಷಾ ಮಾತನಾಡಿ, ‘ಕನ್ನಡದಲ್ಲಿ ಜೈನ ಪರಂಪರೆಗೆ ಸಂಬಂಧಪಟ್ಟಂತೆ ಸಾಕಷ್ಟು ವಿಚಾರಗಳು ಕನ್ನಡ ಭಾಷೆಯಲ್ಲಿ ಪ್ರಕಟವಾಗಿವೆ. ಪೊನ್ನನ ಶಾಂತಿನಾಥ ಪುರಾಣ, ರನ್ನನ ಅಜಿತನಾಥ ಪುರಾಣ ಪ್ರಸ್ತಾಪಿಸಿದರು. ಕೃತಕ ಬುದ್ಧಿಮತ್ತೆಯ ರೋಬೊಟ್ಗಳ ಸಂದರ್ಭದಲ್ಲಿ ಜೈನ ಸಾಹಿತ್ಯವು ಪ್ರೀತಿ, ವಿಶ್ವಾಸ, ಕರುಣೆಯಂತಹ ಹಲವಾರು ಅಂಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಕೆಲಸ ಮಾಡಿದೆ’ ಎಂದರು.