<p><strong>ಕಂಪ್ಲಿ</strong>: ಕರ್ನಾಟಕ ಜೈನ್ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಇಲ್ಲಿಯ ಜೈನ್ ಸೇವಾ ಟ್ರಸ್ಟ್ ಅಧ್ಯಕ್ಷ ಶಾಂತಿಲಾಲ್ ಸಿಂಘ್ವಿ ಒತ್ತಾಯಿಸಿದರು.</p>.<p>ಮಹಾವೀರ ಜಯಂತ್ಯುತ್ಸವ ನಿಮಿತ್ತ ಇಲ್ಲಿಯ ಶ್ರೀಮುನಿ ಸುರತ್ ಜೈನ್ ಶ್ವೇತಾಂಬರ ಮಂದಿರದಿಂದ ಭಗವಾನ್ ಮಹಾವೀರರ ಭಾವಚಿತ್ರ, ರಜತ ಪ್ರತಿಮೆ ಮೆರವಣಿಗೆ ಕಾರ್ಯಕ್ರಮಕ್ಕೆ ಮುನ್ನ ಅವರು ಮಾತನಾಡಿದರು.</p>.<p>‘ಕಳೆದ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ನಿಗಮ ಅಥವಾ ಮಂಡಳಿ ಘೋಷಿಸದೇ ಸಮುದಾಯದ ನಿರೀಕ್ಷೆ ಹುಸಿಗೊಳಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆದ ಬಳಿಕ ಮಂದಿರದಲ್ಲಿ ಭಜನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>.<p>ಶಾಸಕ ಜೆ.ಎನ್. ಗಣೇಶ್, ಪ್ರಮುಖರಾದ ಪಾರಸ್ಮಲ್ ಹುಂಡಿಯಾ, ಫತೇಕುಮಾರ್ ಬಾಫ್ಣಾ, ಅಮೃತ್ ಲಾಲ್ ಜೈನ್, ರಾಜು ಜೈನ್, ಹೀರಾಚಂದ್, ಜೈನ್ ಶ್ವೇತಾಂಬರ್ ಸಂಘ, ಜೈನ್ ಸೇವಾ ಟ್ರಸ್ಟ್, ಪದ್ಮಾವತಿ ಮಹಿಳಾ ಮಂಡಲ, ಬಾಲಾಶ್ರೀ ಮಹಿಳಾ ಮಂಡಲ, ಕಲಾಪೂರ್ಣ ಯುವಕ ಮಂಡಲದವರು ಹಾಜರಿದ್ದರು.</p>.<p>ತಾಲ್ಲೂಕು ಆಡಳಿತ: ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಮಹಾವೀರ ಜಯಂತ್ಯುತ್ಸವ ಆಚರಿಸಲಾಯಿತು.</p>.<p>ತಹಶೀಲ್ದಾರ್ ಎಸ್. ಶಿವರಾಜ, ಗ್ರೇಡ್-2 ತಹಶೀಲ್ದಾರ್ ಎಂ.ಆರ್. ಷಣ್ಮುಖ, ಸಿಬ್ಬಂದಿ, ಜೈನ ಸಮುದಾಯದ ಪ್ರಮುಖರಾದ ಶಾಂತಿಲಾಲ್ ಬಾಲಾರ್, ಶಾಂತಿಲಾಲ್ ಸಿಂಘ್ವಿ, ಗೌತಮ್ಚಂದ್ ಬಾಗ್ರೇಚಾ, ನವೀನ್ ಬಾಗ್ರೇಚಾ, ರಾಕೇಶ್ ಬಾಗ್ರೇಚಾ, ಚೇತನ್ ಹುಂಡಿಯಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ</strong>: ಕರ್ನಾಟಕ ಜೈನ್ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಇಲ್ಲಿಯ ಜೈನ್ ಸೇವಾ ಟ್ರಸ್ಟ್ ಅಧ್ಯಕ್ಷ ಶಾಂತಿಲಾಲ್ ಸಿಂಘ್ವಿ ಒತ್ತಾಯಿಸಿದರು.</p>.<p>ಮಹಾವೀರ ಜಯಂತ್ಯುತ್ಸವ ನಿಮಿತ್ತ ಇಲ್ಲಿಯ ಶ್ರೀಮುನಿ ಸುರತ್ ಜೈನ್ ಶ್ವೇತಾಂಬರ ಮಂದಿರದಿಂದ ಭಗವಾನ್ ಮಹಾವೀರರ ಭಾವಚಿತ್ರ, ರಜತ ಪ್ರತಿಮೆ ಮೆರವಣಿಗೆ ಕಾರ್ಯಕ್ರಮಕ್ಕೆ ಮುನ್ನ ಅವರು ಮಾತನಾಡಿದರು.</p>.<p>‘ಕಳೆದ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ನಿಗಮ ಅಥವಾ ಮಂಡಳಿ ಘೋಷಿಸದೇ ಸಮುದಾಯದ ನಿರೀಕ್ಷೆ ಹುಸಿಗೊಳಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆದ ಬಳಿಕ ಮಂದಿರದಲ್ಲಿ ಭಜನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>.<p>ಶಾಸಕ ಜೆ.ಎನ್. ಗಣೇಶ್, ಪ್ರಮುಖರಾದ ಪಾರಸ್ಮಲ್ ಹುಂಡಿಯಾ, ಫತೇಕುಮಾರ್ ಬಾಫ್ಣಾ, ಅಮೃತ್ ಲಾಲ್ ಜೈನ್, ರಾಜು ಜೈನ್, ಹೀರಾಚಂದ್, ಜೈನ್ ಶ್ವೇತಾಂಬರ್ ಸಂಘ, ಜೈನ್ ಸೇವಾ ಟ್ರಸ್ಟ್, ಪದ್ಮಾವತಿ ಮಹಿಳಾ ಮಂಡಲ, ಬಾಲಾಶ್ರೀ ಮಹಿಳಾ ಮಂಡಲ, ಕಲಾಪೂರ್ಣ ಯುವಕ ಮಂಡಲದವರು ಹಾಜರಿದ್ದರು.</p>.<p>ತಾಲ್ಲೂಕು ಆಡಳಿತ: ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಮಹಾವೀರ ಜಯಂತ್ಯುತ್ಸವ ಆಚರಿಸಲಾಯಿತು.</p>.<p>ತಹಶೀಲ್ದಾರ್ ಎಸ್. ಶಿವರಾಜ, ಗ್ರೇಡ್-2 ತಹಶೀಲ್ದಾರ್ ಎಂ.ಆರ್. ಷಣ್ಮುಖ, ಸಿಬ್ಬಂದಿ, ಜೈನ ಸಮುದಾಯದ ಪ್ರಮುಖರಾದ ಶಾಂತಿಲಾಲ್ ಬಾಲಾರ್, ಶಾಂತಿಲಾಲ್ ಸಿಂಘ್ವಿ, ಗೌತಮ್ಚಂದ್ ಬಾಗ್ರೇಚಾ, ನವೀನ್ ಬಾಗ್ರೇಚಾ, ರಾಕೇಶ್ ಬಾಗ್ರೇಚಾ, ಚೇತನ್ ಹುಂಡಿಯಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>