ಬಳ್ಳಾರಿ: ಸಂಡೂರುನಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ನಿರಾಶೆ ಉಂಟಾಗಿದೆ.
ಸಂಡೂರು ವಿಜಯ ಸರ್ಕಲ್ನಲ್ಲಿ ಸುದೀಪ್ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಕಾರಿನಿಂದ ಕೆಳಗಡೆ ಇಳಿಯದ ಕಿಚ್ಚ ಸುದೀಪ್ ಸಂಡೂರುನಿಂದ ಕೂಡ್ಲಿಗಿಗೆ ತೆರಳಿದ್ದಾರೆ.
ಸಂಡೂರಿನ ವಿಜಯ ಸರ್ಕಲ್ನಲ್ಲಿ ಸುದೀಪ್ ಪ್ರಚಾರ ಮಾಡುತ್ತಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದರು. ಆದರೆ ಸುದೀಪ್ ತೆರಳಿದ್ದರಿಂದ ಅಭಿಮಾನಿಗಳಿಗೆ ನಿರಾಶೆಯಾಗಿದೆ.
ನಿನ್ಮೆ ಸಂಡೂರು ತಾಲೂಕಿನ ದೊಡ್ಡ ಅಂತಾಪುರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ ಪರ ಸುದೀಪ್ ಪ್ರಚಾರ ನಡೆಸಿದ್ದರು.