<p><strong>ಕುರುಗೋಡು</strong>: ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿದ ಮುಂಗಾರು ಪೂರ್ವ ಮಳೆಯಿಂದ ಪುಳಕಿತರಾಗಿದ್ದ ರೈತರು ಹತ್ತಿ, ನವಣೆ, ಸಜ್ಜೆ, ಔಡಲ, ತೊಗರಿ ಬಿತ್ತನೆ ಮಾಡಿ ಗೆಲುವಿನ ನಗೆ ಬೀರಿದ್ದರು.</p>.<p>ಕಳೆದ ಮೂರುವಾರಗಳಿಂದ ಮಳೆ ಮಾಯವಾದ ಪರಿಣಾಮ ಬೆಳೆದಿರುವ ಬೆಳೆ ಬೆಳವಣಿಗೆಯ ಹಂತದಲ್ಲಿಯೇ ಬಾಡುವ ಹಂತ ತಲುಪಿದೆ. ನಿತ್ಯ ಮೋಡ ಕವಿದ ವಾತಾವರಣವಿದ್ದು ಬೀಸುವ ಬಿರುಗಾಳಿಗೆ ಮಳೆಯಾಗದೆ ಮೋಡ ಮಾಯವಾಗಿ ರೈತರಲ್ಲಿ ನಿರಾಸೆ ಮೂಡುತ್ತಿದೆ.</p>.<p>ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆಮಾಡಿರುವ ರೈತರು ಮಳೆ ಕೈಕೊಟ್ಟ ಪರಿಣಾಮ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ.</p>.<p>ಬೆಳೆಗ್ಗೆಯಿಂದ ಸಂಜೆಯ ವರೆಗೆ ಆಕಾಶದಲ್ಲಿ ದಟ್ಟಮೋಡ ಆವರಿಸಿದರೂ ಬೀಸುವ ಬಿರುಗಾಳಿಗೆ ಮೋಡ ಮಳೆಯಾಗದೆ ಮುಂದೆ ಸಾಗುತ್ತಿರುವುದು ಮಳೆಗಾಗಿ ಕಾಯುತ್ತಿರುವ ರೈತರಲ್ಲಿ ನಿರಾಸೆ ಮೂಡಿಸುತ್ತಿದೆ. </p>.<p>ನೀರಾವರಿ ಭೂಮಿಯಲ್ಲಿ ಬೆಳೆಯುವ ಮೆಣಸಿನಕಾಯಿ, ಹತ್ತಿ ಮತ್ತು ಮೆಕ್ಕೆಜೋಳದ ಬೆಳೆಗೆ ಕಾಲುವೆ ನೀರು ಸಮರ್ಪಕವಾಗಿ ದೊರೆಯುವುದೆ? ಎನ್ನುವ ಆತಂಕ ಮತ್ತು ದುಗುಡ ರೈತರಲ್ಲಿ ಮನೆಮಾಡಿದೆ.</p>.<p>ತಾಲ್ಲೂಕಿನಲ್ಲಿ 3,500 ಹೆಕ್ಟೇರ್ ಮಳೆಯಾಶ್ರಿತ ಮತ್ತು 36,000 ಹೆಕ್ಟೇರ್ ನೀರಾವರಿ ಭೂಮಿ ಇದೆ.</p>.<p>ಈವರೆಗೆ 11 ಮಳೆದಿನಗಳಲ್ಲಿ ಒಟ್ಟು 6.2 ಸೆಂ.ಮೀ. ಮಾತ್ರ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 11.3 ಸೆಂ.ಮೀ. ಮಳೆಯಾಗಿತ್ತು.</p>.<p>ಕಡಿಮೆ ಮಳೆಯ ದಿನಗಳ ಪರಿಣಾಮ ಭೂಮಿಯಲ್ಲಿನ ತೇವಾಂಶ ಕಡಿಮೆಯಾಗುತ್ತಿದೆ. ಹೋದ ವರ್ಷ ಮಳೆ ಸಂಪೂರ್ಣ ಕೈಕೊಟ್ಟು ನಷ್ಟ ಅನುಭವಿಸಬೇಕಾಯಿತು. ಈ ವರ್ಷ ರೈತರಲ್ಲಿ ಆಸೆ ಮೂಡಿಸಿದ ಮುಂಗಾರು ಪೂರ್ಣ ಮಳೆ ಬಿತ್ತನೆಯ ನಂತರ ಕೈಕೊಟ್ಟ ಪರಿಣಾಮ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತ ಶೇಖಣ್ಣ ಅಳಲು ತೋಡಿಕೊಂಡರು.</p>.<p>ಅಶ್ವಿನಿ ಮತ್ತು ಕೃತಿಕಾ ಮಳೆ ಕೈಕೊಟ್ಟಿವೆ. ಮೃಗಶಿರ ಮತ್ತು ಆರಿದ್ರ ಮಳೆ ರೈತರನ್ನು ಕೈಬಿಡುವುದಿಲ್ಲ ಎಂಬ ಮಾತು ಹುಸಿಯಾಗುವ ಹಂತ ತಲುಪಿದೆ.</p>.<p>ಪುನರ್ವಸು ಮತ್ತು ಪುಷ್ಯ ಮಳೆ ಬರಬಹುದು ಎನ್ನುವ ಆಶಾಭಾವನೆಯಲ್ಲಿ ರೈತಾಪಿ ವರ್ಗ ಮಳೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದೆ.</p>.<div><blockquote>ಮೋಡಮುಸುಕಿದ ವಾತಾವರಣವಿದ್ದರು ಮಳೆಯಾಗುತ್ತಿಲ್ಲ. ಸಾಲುಗಳ ಮಧ್ಯೆ ಹರಗುವುದರಿಂದ ಬೆಳೆ ಉಳಿಸಿಕೊಳ್ಳಬೇಕು. ರೈತರು ಕಡ್ಡಾಯವಾಗಿ ಬೆಳೆವಿಮೆ ಮಾಡಿಸಿಕೊಳ್ಳಬೇಕು </blockquote><span class="attribution">ಗರ್ಜೆಪ್ಪ ಸಹಾಯಕ ಕೃಷಿ ನಿರ್ದೇಶಕ ಕುರುಗೋಡು </span></div>.<p>ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆಯಾದ ಪ್ರದೇಶ 300 ಹೆಕ್ಟೇರ್ ತೊಗರಿ 25 ಹೆಕ್ಟೇರ್ ಔಡಲ 70 ಹೆಕ್ಟೇರ್ ಸಜ್ಜೆ 10 ಹೆಕ್ಟೇರ್ ನವಣೆ 5 ಹೆಕ್ಟೇರ್ ಶೇಂಗಾ ಮತ್ತು 70 ಹೆಕ್ಟೇರ್ ಹತ್ತಿ ಬಿತ್ತನೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು</strong>: ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿದ ಮುಂಗಾರು ಪೂರ್ವ ಮಳೆಯಿಂದ ಪುಳಕಿತರಾಗಿದ್ದ ರೈತರು ಹತ್ತಿ, ನವಣೆ, ಸಜ್ಜೆ, ಔಡಲ, ತೊಗರಿ ಬಿತ್ತನೆ ಮಾಡಿ ಗೆಲುವಿನ ನಗೆ ಬೀರಿದ್ದರು.</p>.<p>ಕಳೆದ ಮೂರುವಾರಗಳಿಂದ ಮಳೆ ಮಾಯವಾದ ಪರಿಣಾಮ ಬೆಳೆದಿರುವ ಬೆಳೆ ಬೆಳವಣಿಗೆಯ ಹಂತದಲ್ಲಿಯೇ ಬಾಡುವ ಹಂತ ತಲುಪಿದೆ. ನಿತ್ಯ ಮೋಡ ಕವಿದ ವಾತಾವರಣವಿದ್ದು ಬೀಸುವ ಬಿರುಗಾಳಿಗೆ ಮಳೆಯಾಗದೆ ಮೋಡ ಮಾಯವಾಗಿ ರೈತರಲ್ಲಿ ನಿರಾಸೆ ಮೂಡುತ್ತಿದೆ.</p>.<p>ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆಮಾಡಿರುವ ರೈತರು ಮಳೆ ಕೈಕೊಟ್ಟ ಪರಿಣಾಮ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ.</p>.<p>ಬೆಳೆಗ್ಗೆಯಿಂದ ಸಂಜೆಯ ವರೆಗೆ ಆಕಾಶದಲ್ಲಿ ದಟ್ಟಮೋಡ ಆವರಿಸಿದರೂ ಬೀಸುವ ಬಿರುಗಾಳಿಗೆ ಮೋಡ ಮಳೆಯಾಗದೆ ಮುಂದೆ ಸಾಗುತ್ತಿರುವುದು ಮಳೆಗಾಗಿ ಕಾಯುತ್ತಿರುವ ರೈತರಲ್ಲಿ ನಿರಾಸೆ ಮೂಡಿಸುತ್ತಿದೆ. </p>.<p>ನೀರಾವರಿ ಭೂಮಿಯಲ್ಲಿ ಬೆಳೆಯುವ ಮೆಣಸಿನಕಾಯಿ, ಹತ್ತಿ ಮತ್ತು ಮೆಕ್ಕೆಜೋಳದ ಬೆಳೆಗೆ ಕಾಲುವೆ ನೀರು ಸಮರ್ಪಕವಾಗಿ ದೊರೆಯುವುದೆ? ಎನ್ನುವ ಆತಂಕ ಮತ್ತು ದುಗುಡ ರೈತರಲ್ಲಿ ಮನೆಮಾಡಿದೆ.</p>.<p>ತಾಲ್ಲೂಕಿನಲ್ಲಿ 3,500 ಹೆಕ್ಟೇರ್ ಮಳೆಯಾಶ್ರಿತ ಮತ್ತು 36,000 ಹೆಕ್ಟೇರ್ ನೀರಾವರಿ ಭೂಮಿ ಇದೆ.</p>.<p>ಈವರೆಗೆ 11 ಮಳೆದಿನಗಳಲ್ಲಿ ಒಟ್ಟು 6.2 ಸೆಂ.ಮೀ. ಮಾತ್ರ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 11.3 ಸೆಂ.ಮೀ. ಮಳೆಯಾಗಿತ್ತು.</p>.<p>ಕಡಿಮೆ ಮಳೆಯ ದಿನಗಳ ಪರಿಣಾಮ ಭೂಮಿಯಲ್ಲಿನ ತೇವಾಂಶ ಕಡಿಮೆಯಾಗುತ್ತಿದೆ. ಹೋದ ವರ್ಷ ಮಳೆ ಸಂಪೂರ್ಣ ಕೈಕೊಟ್ಟು ನಷ್ಟ ಅನುಭವಿಸಬೇಕಾಯಿತು. ಈ ವರ್ಷ ರೈತರಲ್ಲಿ ಆಸೆ ಮೂಡಿಸಿದ ಮುಂಗಾರು ಪೂರ್ಣ ಮಳೆ ಬಿತ್ತನೆಯ ನಂತರ ಕೈಕೊಟ್ಟ ಪರಿಣಾಮ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತ ಶೇಖಣ್ಣ ಅಳಲು ತೋಡಿಕೊಂಡರು.</p>.<p>ಅಶ್ವಿನಿ ಮತ್ತು ಕೃತಿಕಾ ಮಳೆ ಕೈಕೊಟ್ಟಿವೆ. ಮೃಗಶಿರ ಮತ್ತು ಆರಿದ್ರ ಮಳೆ ರೈತರನ್ನು ಕೈಬಿಡುವುದಿಲ್ಲ ಎಂಬ ಮಾತು ಹುಸಿಯಾಗುವ ಹಂತ ತಲುಪಿದೆ.</p>.<p>ಪುನರ್ವಸು ಮತ್ತು ಪುಷ್ಯ ಮಳೆ ಬರಬಹುದು ಎನ್ನುವ ಆಶಾಭಾವನೆಯಲ್ಲಿ ರೈತಾಪಿ ವರ್ಗ ಮಳೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದೆ.</p>.<div><blockquote>ಮೋಡಮುಸುಕಿದ ವಾತಾವರಣವಿದ್ದರು ಮಳೆಯಾಗುತ್ತಿಲ್ಲ. ಸಾಲುಗಳ ಮಧ್ಯೆ ಹರಗುವುದರಿಂದ ಬೆಳೆ ಉಳಿಸಿಕೊಳ್ಳಬೇಕು. ರೈತರು ಕಡ್ಡಾಯವಾಗಿ ಬೆಳೆವಿಮೆ ಮಾಡಿಸಿಕೊಳ್ಳಬೇಕು </blockquote><span class="attribution">ಗರ್ಜೆಪ್ಪ ಸಹಾಯಕ ಕೃಷಿ ನಿರ್ದೇಶಕ ಕುರುಗೋಡು </span></div>.<p>ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆಯಾದ ಪ್ರದೇಶ 300 ಹೆಕ್ಟೇರ್ ತೊಗರಿ 25 ಹೆಕ್ಟೇರ್ ಔಡಲ 70 ಹೆಕ್ಟೇರ್ ಸಜ್ಜೆ 10 ಹೆಕ್ಟೇರ್ ನವಣೆ 5 ಹೆಕ್ಟೇರ್ ಶೇಂಗಾ ಮತ್ತು 70 ಹೆಕ್ಟೇರ್ ಹತ್ತಿ ಬಿತ್ತನೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>