<p><strong>ಬಳ್ಳಾರಿ</strong>: ‘ಗಣಿಗಾರಿಕೆ ಪರಿಣಾಮ ವಲಯದ ಸಮಗ್ರ ಪರಿಸರ ಯೋಜನೆಯಡಿ (ಸಿಇಪಿಎಂಐಜೆಡ್)’ ‘ಕರ್ನಾಟಕ ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನ ನಿಗಮವು (ಕೆಎಂಇಆರ್ಸಿ) ಒಟ್ಟು ₹12,049.51 ಕೋಟಿ ಮೌಲ್ಯದ 497 ಯೋಜನೆಗಳ ಪ್ರಸ್ತಾವಗಳಿಗೆ ಅನುಮೋದನೆ ನೀಡಿದ್ದರೂ, ಈ ವರೆಗೆ ಬಳಕೆಯಾಗಿದ್ದು ₹934.42 ಕೋಟಿ.</p>.<p>ಯೋಜನೆಗಳ ಜಾರಿ ವಿಳಂಬಕ್ಕೆ ಕೆಎಂಇಆರ್ಸಿಯ ಮೇಲುಸ್ತುವಾರಿ (ಮೇಲುಸ್ತುವಾರಿ ಪ್ರಾಧಿಕಾರ–ಒಎ) ಆಗಿರುವ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. </p>.<p>ರಾಜ್ಯದ ಬಳ್ಳಾರಿ, ಚಿತ್ರದುರ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ನಡೆದಿದ್ದ ವ್ಯಾಪಕ ಅಕ್ರಮ ಗಣಿಗಾರಿಕೆಯಿಂದ ಪರಿಸರ ನಾಶ, ಜನ ಜೀವನದ ಮೇಲೆ ದುಷ್ಪರಿಣಾಮಗಳು ಆಗಿದ್ದವು. ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನಕ್ಕಾಗಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ 2014ರಲ್ಲಿ ಕೆಎಂಇಆರ್ಸಿ ಯನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ₹24,929 ಕೋಟಿ ಹಣವಿದೆ.</p>.<p>ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಲಭ್ಯವಿದ್ದರೂ, ಪುನಶ್ಚೇತನ ಕಾರ್ಯ ಆಗುತ್ತಿಲ್ಲ. ಈ ವಿಷಯ ಇತ್ತೀಚೆಗೆ ನಡೆದ ಕೆಎಂಇಆರ್ಸಿಯ 24ನೇ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.</p>.<p>ಅನುಮೋದಿತ ₹12,049.51 ಕೋಟಿ ಮೌಲ್ಯದ 497 ಪ್ರಸ್ತಾವಗಳಲ್ಲಿ ₹7,749.26 ಕೋಟಿ ಮೊತ್ತದ 349 ಯೋಜನೆಗಳಿಗೆ ಮಾತ್ರ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಆಗಿದೆ. ₹6,270.38 ಕೋಟಿ ಮೊತ್ತದ 281 ಡಿಪಿಆರ್ಗಳಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ₹4,236.60 ಕೋಟಿಯ ಮೊತ್ತದ 148 ಡಿಪಿಆರ್ಗಳನ್ನು ವಿವಿಧ ಇಲಾಖೆಗಳು ಇನ್ನೂ ಸಲ್ಲಿಸಬೇಕಾಗಿದೆ. </p>.<p>ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವ 281 ಯೋಜನೆಗಳ ಪೈಕಿ 203 ಯೋಜನೆಗಳಿಗೆ ಮಾತ್ರ ಟೆಂಡರ್ ಕರೆಯಲಾಗಿದೆ. ಒಟ್ಟು ₹2,320.60 ಕೋಟಿ ಮೌಲ್ಯದ 189 ಯೋಜನೆಗಳಿಗೆ ಮಾತ್ರ ಕಾರ್ಯಾದೇಶ ಸಿಕ್ಕಿದೆ. ಈ ಯೋಜನೆಗಳಿಗೆ ಕೇವಲ ₹934.42 ಕೋಟಿ ಬಳಕೆಯಾಗಿದೆ ಎಂಬುದು ಕೆಎಂಇಆರ್ಸಿಯ ಸಭೆಯ ನಡಾವಳಿಗಳಿಂದ ಬಹಿರಂಗವಾಗಿದೆ. </p>.<p>‘ಯೋಜನೆಗಳ ಜಾರಿಯಲ್ಲಿ ಇಲಾಖೆಗಳ ಈ ನಿರ್ಲಕ್ಷ್ಯವನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗುವ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ಅನುಷ್ಠಾನಕ್ಕೆ ವೇಗ ನೀಡಲು ಇಲಾಖೆಗಳು ವಿಫಲವಾದರೆ, ಸುಪ್ರೀಂ ಕೋರ್ಟ್ನಿಂದ ನಿರ್ದೇಶನ ಪಡೆಯುವ ಅನಿವಾರ್ಯತೆ ಎದುರಾಗಲಿದೆ’ ಎಂದು ನ್ಯಾ. ಸುದರ್ಶನ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಈ ವಿಳಂಬವನ್ನು ಪರಿಹರಿಸಲು ಅವರು ಮಾರ್ಗೋಪಾಯಗಳನ್ನೂ ಸೂಚಿಸಿದ್ದಾರೆ. ‘ಸರ್ಕಾರದ ಎಲ್ಲ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಕೆಎಂಇಆರ್ಸಿ ಸಭೆಯಲ್ಲಿ ಭಾಗವಹಿಸಬೇಕು. ವಿಶೇಷವಾಗಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಇಲಾಖಾ ಕಾರ್ಯದರ್ಶಿಗಳು ಇರಬೇಕು‘ ಎಂದು ತಾಕೀತು ಮಾಡಿದ್ದಾರೆ. </p>.<div><blockquote>ಯೋಜನೆಗಳ ವಿಳಂಬದಲ್ಲಿ ಇಲಾಖೆಗಳ ಪಾತ್ರ ಇದೆ. ಕೆಎಂಇಆರ್ಸಿಯ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಪ್ರಕ್ರಿಯೆ ಇದೆ. ನ್ಯಾಯಾಲಯದ ನಿರ್ದೇಶನಗಳಿಗೆ ಒಳಪಟ್ಟಿರಬೇಕಾಗುತ್ತದೆ. ಆದರೂ 2025–26ನೇ ಸಾಲಿನಲ್ಲಿ ಯೋಜನೆಗಳು ವೇಗವಾಗಿ ಜಾರಿಗೆ ಬರುತ್ತಿವೆ. </blockquote><span class="attribution">ಸಂಜಯ ಬಿಜ್ಜೂರು ವ್ಯವಸ್ಥಾಪಕ ನಿರ್ದೇಶಕ ಕೆಎಂಇಆರ್ಸಿ </span></div>.<p> <strong>ಉತ್ತರದ ‘ಕಿದ್ವಾಯಿ’ ವಿಳಂಬ </strong></p><p>ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಕೆಎಂಇಆರ್ಸಿಯ ₹372.90 ಕೋಟಿ ಅನುದಾನದಲ್ಲಿ 200 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದು ಉತ್ತರ ಕರ್ನಾಟಕ ಭಾಗದ ‘ಕಿದ್ವಾಯಿ’ ಆಗುವ ಮಹತ್ವಾಕಾಂಕ್ಷೆ ಹೊಂದಲಾಗಿದೆ. ಆದರೆ ಆಸ್ಪತ್ರೆಗೆ ಸಿಬ್ಬಂದಿ ಮಂಜೂರಾತಿ ಮತ್ತು ನಂತರದ ವರ್ಷದಲ್ಲಿ ವೇತನ ಪಾವತಿಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಈ ಬಗ್ಗೆ ರಾಜ್ಯ ಹಣಕಾಸು ಇಲಾಖೆ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಸ್ಪಷ್ಟನೆ ಸಿಗುವವರೆಗೆ ಕೆಎಂಇಆರ್ಸಿಯು ಯೋಜನೆಯನ್ನು ಬದಿಗಿಟ್ಟಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ‘ಗಣಿಗಾರಿಕೆ ಪರಿಣಾಮ ವಲಯದ ಸಮಗ್ರ ಪರಿಸರ ಯೋಜನೆಯಡಿ (ಸಿಇಪಿಎಂಐಜೆಡ್)’ ‘ಕರ್ನಾಟಕ ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನ ನಿಗಮವು (ಕೆಎಂಇಆರ್ಸಿ) ಒಟ್ಟು ₹12,049.51 ಕೋಟಿ ಮೌಲ್ಯದ 497 ಯೋಜನೆಗಳ ಪ್ರಸ್ತಾವಗಳಿಗೆ ಅನುಮೋದನೆ ನೀಡಿದ್ದರೂ, ಈ ವರೆಗೆ ಬಳಕೆಯಾಗಿದ್ದು ₹934.42 ಕೋಟಿ.</p>.<p>ಯೋಜನೆಗಳ ಜಾರಿ ವಿಳಂಬಕ್ಕೆ ಕೆಎಂಇಆರ್ಸಿಯ ಮೇಲುಸ್ತುವಾರಿ (ಮೇಲುಸ್ತುವಾರಿ ಪ್ರಾಧಿಕಾರ–ಒಎ) ಆಗಿರುವ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. </p>.<p>ರಾಜ್ಯದ ಬಳ್ಳಾರಿ, ಚಿತ್ರದುರ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ನಡೆದಿದ್ದ ವ್ಯಾಪಕ ಅಕ್ರಮ ಗಣಿಗಾರಿಕೆಯಿಂದ ಪರಿಸರ ನಾಶ, ಜನ ಜೀವನದ ಮೇಲೆ ದುಷ್ಪರಿಣಾಮಗಳು ಆಗಿದ್ದವು. ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನಕ್ಕಾಗಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ 2014ರಲ್ಲಿ ಕೆಎಂಇಆರ್ಸಿ ಯನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ₹24,929 ಕೋಟಿ ಹಣವಿದೆ.</p>.<p>ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಲಭ್ಯವಿದ್ದರೂ, ಪುನಶ್ಚೇತನ ಕಾರ್ಯ ಆಗುತ್ತಿಲ್ಲ. ಈ ವಿಷಯ ಇತ್ತೀಚೆಗೆ ನಡೆದ ಕೆಎಂಇಆರ್ಸಿಯ 24ನೇ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.</p>.<p>ಅನುಮೋದಿತ ₹12,049.51 ಕೋಟಿ ಮೌಲ್ಯದ 497 ಪ್ರಸ್ತಾವಗಳಲ್ಲಿ ₹7,749.26 ಕೋಟಿ ಮೊತ್ತದ 349 ಯೋಜನೆಗಳಿಗೆ ಮಾತ್ರ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಆಗಿದೆ. ₹6,270.38 ಕೋಟಿ ಮೊತ್ತದ 281 ಡಿಪಿಆರ್ಗಳಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ₹4,236.60 ಕೋಟಿಯ ಮೊತ್ತದ 148 ಡಿಪಿಆರ್ಗಳನ್ನು ವಿವಿಧ ಇಲಾಖೆಗಳು ಇನ್ನೂ ಸಲ್ಲಿಸಬೇಕಾಗಿದೆ. </p>.<p>ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವ 281 ಯೋಜನೆಗಳ ಪೈಕಿ 203 ಯೋಜನೆಗಳಿಗೆ ಮಾತ್ರ ಟೆಂಡರ್ ಕರೆಯಲಾಗಿದೆ. ಒಟ್ಟು ₹2,320.60 ಕೋಟಿ ಮೌಲ್ಯದ 189 ಯೋಜನೆಗಳಿಗೆ ಮಾತ್ರ ಕಾರ್ಯಾದೇಶ ಸಿಕ್ಕಿದೆ. ಈ ಯೋಜನೆಗಳಿಗೆ ಕೇವಲ ₹934.42 ಕೋಟಿ ಬಳಕೆಯಾಗಿದೆ ಎಂಬುದು ಕೆಎಂಇಆರ್ಸಿಯ ಸಭೆಯ ನಡಾವಳಿಗಳಿಂದ ಬಹಿರಂಗವಾಗಿದೆ. </p>.<p>‘ಯೋಜನೆಗಳ ಜಾರಿಯಲ್ಲಿ ಇಲಾಖೆಗಳ ಈ ನಿರ್ಲಕ್ಷ್ಯವನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗುವ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ಅನುಷ್ಠಾನಕ್ಕೆ ವೇಗ ನೀಡಲು ಇಲಾಖೆಗಳು ವಿಫಲವಾದರೆ, ಸುಪ್ರೀಂ ಕೋರ್ಟ್ನಿಂದ ನಿರ್ದೇಶನ ಪಡೆಯುವ ಅನಿವಾರ್ಯತೆ ಎದುರಾಗಲಿದೆ’ ಎಂದು ನ್ಯಾ. ಸುದರ್ಶನ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಈ ವಿಳಂಬವನ್ನು ಪರಿಹರಿಸಲು ಅವರು ಮಾರ್ಗೋಪಾಯಗಳನ್ನೂ ಸೂಚಿಸಿದ್ದಾರೆ. ‘ಸರ್ಕಾರದ ಎಲ್ಲ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಕೆಎಂಇಆರ್ಸಿ ಸಭೆಯಲ್ಲಿ ಭಾಗವಹಿಸಬೇಕು. ವಿಶೇಷವಾಗಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಇಲಾಖಾ ಕಾರ್ಯದರ್ಶಿಗಳು ಇರಬೇಕು‘ ಎಂದು ತಾಕೀತು ಮಾಡಿದ್ದಾರೆ. </p>.<div><blockquote>ಯೋಜನೆಗಳ ವಿಳಂಬದಲ್ಲಿ ಇಲಾಖೆಗಳ ಪಾತ್ರ ಇದೆ. ಕೆಎಂಇಆರ್ಸಿಯ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಪ್ರಕ್ರಿಯೆ ಇದೆ. ನ್ಯಾಯಾಲಯದ ನಿರ್ದೇಶನಗಳಿಗೆ ಒಳಪಟ್ಟಿರಬೇಕಾಗುತ್ತದೆ. ಆದರೂ 2025–26ನೇ ಸಾಲಿನಲ್ಲಿ ಯೋಜನೆಗಳು ವೇಗವಾಗಿ ಜಾರಿಗೆ ಬರುತ್ತಿವೆ. </blockquote><span class="attribution">ಸಂಜಯ ಬಿಜ್ಜೂರು ವ್ಯವಸ್ಥಾಪಕ ನಿರ್ದೇಶಕ ಕೆಎಂಇಆರ್ಸಿ </span></div>.<p> <strong>ಉತ್ತರದ ‘ಕಿದ್ವಾಯಿ’ ವಿಳಂಬ </strong></p><p>ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಕೆಎಂಇಆರ್ಸಿಯ ₹372.90 ಕೋಟಿ ಅನುದಾನದಲ್ಲಿ 200 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದು ಉತ್ತರ ಕರ್ನಾಟಕ ಭಾಗದ ‘ಕಿದ್ವಾಯಿ’ ಆಗುವ ಮಹತ್ವಾಕಾಂಕ್ಷೆ ಹೊಂದಲಾಗಿದೆ. ಆದರೆ ಆಸ್ಪತ್ರೆಗೆ ಸಿಬ್ಬಂದಿ ಮಂಜೂರಾತಿ ಮತ್ತು ನಂತರದ ವರ್ಷದಲ್ಲಿ ವೇತನ ಪಾವತಿಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಈ ಬಗ್ಗೆ ರಾಜ್ಯ ಹಣಕಾಸು ಇಲಾಖೆ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಸ್ಪಷ್ಟನೆ ಸಿಗುವವರೆಗೆ ಕೆಎಂಇಆರ್ಸಿಯು ಯೋಜನೆಯನ್ನು ಬದಿಗಿಟ್ಟಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>