ಕುರುಗೋಡು: ಬಳ್ಳಾರಿಯಲ್ಲಿ ಮಂಗಳವಾರ ಜರುಗಿದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಜಾನಪದ ವಿಭಾಗದ ಕಂಸಾಳೆ ನೃತ್ಯದಲ್ಲಿ ತಾಲ್ಲೂಕಿನ ಗುತ್ತಿಗನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ವಿದ್ಯಾರ್ಥಿಗಳಾದ ಗೌತಮ್, ನಂದೀಶ, ರಮೇಶ, ಗಣೇಶ, ವರುಣ್ಕುಮಾರ ಮತ್ತು ಮಹೇಶ ನೃತ್ಯತಂಡದಲ್ಲಿ ಇದ್ದರು. ಜಾನಪದ ವಿಭಾಗದ ಸ್ಪರ್ಧೆಯಲ್ಲಿ ಒಟ್ಟು 5 ತಂಡಗಳು ಭಾಗವಹಿಸಿದ್ದವು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವೀರೇಶ, ಮುಖ್ಯ ಶಿಕ್ಷಕ ಗುರುಬಸವರಾಜ, ಸಿಬ್ಬಂದಿ ಜಗದೀಶ, ಉಮಾ, ನಟರಾಜ, ,ಮಾರೆಣ್ಣ, ಜಂಬುನಾಥ, ಬಸವರಾಜ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.