‘ದರೋಜಿ ಕೆರೆಯ ಬಳಿಯ ರಸ್ತೆಯ ಬದಿಯಲ್ಲಿನ ಒಟ್ಟು ಏಳು ವಿದ್ಯುತ್ ಕಂಬಗಳು ಅಪಾಯವನ್ನು ಆಹ್ವಾನಿಸುತ್ತಿದ್ದು, ಸಾರ್ವಜನಿಕರ ಸಂಚಾರದ ಅನುಕೂಲಕ್ಕಾಗಿ ಅವುಗಳನ್ನು ತ್ವರಿತವಾಗಿ ತೆರವುಗೊಳಿಸಲು ಸೂಕ್ತ ಕ್ರಮ ವಹಿಸಲಾಗುವುದು’ ಎಂದು ಸಂಡೂರು ತಾಲ್ಲೂಕಿನ ಕೆಇಬಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ಎ.ಉಮೇಶ್ ಪ್ರತಿಕ್ರಿಯಿಸಿದರು.