ಜೂ. 26ರಂದು ಸಂಜೆ 5.55ರ ಸುಮಾರಿಗೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ.ಯ. ಗಣೇಶ ಬೈಕ್ ಮೇಲೆ ತೆರಳುತ್ತಿದ್ದಾಗ ಅವರನ್ನು ತಡೆದ ಶಬ್ಬೀರ್ ಅವರು, ಸರ್ಕಾರಕ್ಕೆ ₹100, ನನಗೆ ₹100 ಎಂದು ಲಂಚ ಪಡೆದಿದ್ದಾರೆ. ಹಣ ಕೊಡಲು ಆಗದಿದ್ದರೆ ₹5,000 ಕಟ್ಟಿ, ಕೋರ್ಟ್ಗೆ ಹೋಗಬೇಕಾಗುತ್ತದೆ ಎಂದಿದ್ದಾರೆ. ಕಾನೂನು ಮೀರಿ ವರ್ತಿಸಿರುವ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.